ಆ್ಯಪ್ನಗರ

ಸುಶಾಂತ್‌ರ 50 ಕೋಟಿ ರೂ. ವಿಚಾರದಲ್ಲಿ ಮುಂಬೈ ಪೊಲೀಸರ ಕಣ್ಣಾಮುಚ್ಚಾಲೆ: ಬಿಹಾರ ಡಿಜಿಪಿ ಆರೋಪ!

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಬಿಹಾರ ಪೊಲೀಸರು ಆರೋಪಿಸಿದ್ದಾರೆ. ಅದಕ್ಕೆ ಮಾಧ್ಯಮಗಳ ಮುಂದೆಯೇ ಒಂದಷ್ಟು ಸಾಕ್ಷಿಗಳನ್ನು ನೀಡಿದ್ದಾರೆ.

Vijaya Karnataka Web 4 Aug 2020, 11:15 am
ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಹೈ ಪ್ರೊಫೈಲ್ ಕೇಸ್‌ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ ಇಲ್ಲವೋ ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಈ ಅನುಮಾನಕ್ಕೆ ಸಾಕ್ಷಿ ಒದಗಿಸುವಂತಹ ವಿಚಾರವೊಂದು ಬೆಳಕಿಗೆ ಬಂದಿದೆ.
Vijaya Karnataka Web sushant singh rajput case bihar dgp questions why mumbai police did not investigate rs 50 money trail
ಸುಶಾಂತ್‌ರ 50 ಕೋಟಿ ರೂ. ವಿಚಾರದಲ್ಲಿ ಮುಂಬೈ ಪೊಲೀಸರ ಕಣ್ಣಾಮುಚ್ಚಾಲೆ: ಬಿಹಾರ ಡಿಜಿಪಿ ಆರೋಪ!


ಯಾವಾಗ ಸುಶಾಂತ್‌ ಸಾವಿನ ಕೇಸ್‌ಗೆ ಬಿಹಾರ ಪೊಲೀಸರು ಕೈ ಹಾಕಿದರೋ, ಆಗಲೇ ಹೊಸ ಹೊಸ ಟ್ವಿಸ್ಟ್‌ಗಳು ಸಿಗಲು ಆರಂಭಿಸಿವೆ. ಮುಂಬೈ ಪೊಲೀಸರ ತನಿಖೆಯಲ್ಲಿರುವ ಲೋಪದೋಷಗಳನ್ನು ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಅವರು ಎತ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಒಟ್ಟಾರೆ ಈಗ ಇದು ಮುಂಬೈ ಪೊಲೀಸ್‌ ವರ್ಸಸ್‌ ಬಿಹಾರ ಪೊಲೀಸ್‌ ಎಂಬ ಸ್ವರೂಪ ಪಡೆದುಕೊಳ್ಳುತ್ತಿದೆ.

'ಕಳೆದ ನಾಲ್ಕು ವರ್ಷದಲ್ಲಿ ಸುಶಾಂತ್ ಬ್ಯಾಂಕ್‌ ಖಾತೆಗೆ 50 ಕೋಟಿ ರೂ. ಜಮಾ ಆಗಿತ್ತು. ಆದರೆ ಅಚ್ಚರಿ ಎಂದರೆ ಅಷ್ಟೂ ಹಣವೂ ನಂತರದಲ್ಲಿ ವಿತ್‌ಡ್ರಾ ಆಗಿದೆ. ಒಂದು ವರ್ಷದಲ್ಲಿ 17 ಕೋಟಿ ರೂ. ಜಮಾ ಆಗಿದ್ದರೆ, ಅದರಲ್ಲಿ 15 ಕೋಟಿ ರೂ. ವಿತ್‌ಡ್ರಾ ಮಾಡಲಾಗಿದೆ. ಇದರ ಬಗ್ಗೆ ತನಿಖೆ ಆಗಬೇಕಾದ್ದು ಮುಖ್ಯ ಅಲ್ಲವೇ? ನಾವು ಸುಮ್ಮನೆ ಕೂರುವುದಿಲ್ಲ. ಇಂಥ ಸುಳಿವುಗಳನ್ನು ಯಾಕೆ ಮುಚ್ಚಿಟ್ಟಿದ್ದೀರಿ ಎಂದು ಮುಂಬೈ ಪೊಲೀಸರನ್ನು ನಾವು ಖಂಡಿತಾ ಪ್ರಶ್ನಿಸುತ್ತೇವೆ' ಎಂದು ಮಾಧ್ಯಮಗಳಿಗೆ ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ.

also read: ಶಾಕಿಂಗ್‌..! 'ನೋವಿಲ್ಲದೆ ಸಾಯುವುದು ಹೇಗೆ' ಎಂದು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದ ಸುಶಾಂತ್?

'ಸುಶಾಂತ್‌ರ ಮರಣೋತ್ತರ ಪರೀಕ್ಷೆ ವರದಿ ಮತ್ತು ವಿಧಿವಿಜ್ಞಾನ ಇಲಾಖೆಯ ವರದಿಯನ್ನು ನಮಗೆ ನೀಡುವ ಬದಲು, ನಮ್ಮ ಪೊಲೀಸ್‌ ಅಧಿಕಾರಿಯನ್ನೇ ಮುಂಬೈ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ. ಬೇರೆ ಯಾವುದೇ ರಾಜ್ಯಗಳ ಪೊಲೀಸರು ಕೂಡ ಇಷ್ಟು ಅಸಹಕಾರ ತೋರಿದ್ದನ್ನು ನಾನು ನೋಡಿಲ್ಲ. ಮುಂಬೈ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡಿರುವುದೇ ಹೌದಾದರೆ ಅವರು ನಮ್ಮ ಜೊತೆ ತನಿಖಾ ವರದಿಯನ್ನು ಹಂಚಿಕೊಳ್ಳಬೇಕು' ಎಂಬುದು ಡಿಜಿಪಿ ಗುಪ್ತೇಶ್ವರ ಪಾಂಡೆ ಹೇಳಿಕೆ.

also read: ಇದೇನಿದು 'ಮಹಾ'ಮೋಸ? ಸುಶಾಂತ್‌ ಸಾವಿನ ತನಿಖೆಗೆ ಬಂದ ಪೊಲೀಸ್‌ ಅಧಿಕಾರಿಗೆ ಬಲವಂತ ಕ್ವಾರೆಂಟೈನ್‌!

ಈ ಪ್ರಕರಣದಲ್ಲಿ ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಬಗ್ಗೆ ಹೆಚ್ಚು ಅನುಮಾನ ಮೂಡಿದೆ. ಅವರ ವಿರುದ್ಧ ಸುಶಾಂತ್‌ ತಂದೆ ಕೆ.ಕೆ. ಸಿಂಗ್‌ ಪಾಟ್ನಾದಲ್ಲಿ ದೂರು ಸಲ್ಲಿಸಿದ್ದು, ಸಾಕ್ಷಿಗಳಿಗಾಗಿ ಬಿಹಾರ ಪೊಲೀಸರು ಹುಡುಕಾಟ ನಡೆಸಿದ್ದಾರೆ. 'ಸದ್ಯಕ್ಕೆ ರಿಯಾ ಆರೋಪಿ. ಅವರ ವಿರುದ್ಧ ಸಾಕ್ಷಿ ಸಿಗುತ್ತಿದ್ದಂತೆಯೇ ಅವರನ್ನು ಅರೆಸ್ಟ್‌ ಮಾಡುತ್ತೇವೆ' ಎಂಬುದಾಗಿಯೂ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ.

also read: ಐದು ದಿನದಲ್ಲಿ 14 ಸಿಮ್ ಕಾರ್ಡ್ ಬದಲಾಯಿಸಿದ್ದ ಸುಶಾಂತ್! ಯಾರ ಹೆಸರಲ್ಲಿದ್ದವು ಆ ಸಿಮ್‌ ಕಾರ್ಡ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌