ಆ್ಯಪ್ನಗರ

ಮುಂಬೈ ಪೊಲೀಸರಿಂದ ರಿಯಾ ಚಕ್ರವರ್ತಿಗೊಂದು ನ್ಯಾಯ, ಸುಶಾಂತ್‌ ಸಹೋದರಿಗೆ ಇನ್ನೊಂದು ನ್ಯಾಯ?

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ವಿಚಾರದಲ್ಲಿ ಮುಂಬೈ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರ ತಾರತಮ್ಯಕ್ಕೆ ಹೊಸದೊಂದು ಘಟನೆ ಸಾಕ್ಷಿ ಒದಗಿಸುತ್ತಿದೆ.

Vijaya Karnataka Web 11 Aug 2020, 6:11 pm
ಸದ್ಯಕ್ಕೆ ಇಡೀ ದೇಶದ ಗಮನ ಸೆಳೆದಿರುವ ಪ್ರಕರಣ ಎಂದರೆ ಅದು ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ. ಬಿಡಿಸಿದಂತೆಲ್ಲ ಪದರ ಪದರವಾಗಿ ತೆರೆದುಕೊಳ್ಳುತ್ತಿರುವ ಈ ಕೇಸ್‌ನಲ್ಲಿ ಹಲವರ ಹೆಸರುಗಳು ತಳುಕು ಹಾಕಿಕೊಳ್ಳುತ್ತಿವೆ. ಇನ್ನು, ಪ್ರಾಮಾಣಿಕವಾಗಿ ತನಿಖೆ ಮಾಡಬೇಕಾಗಿದ್ದ ಪೊಲೀಸರ ಮೇಲೆ ಕೂಡ ಜನರು ಅನುಮಾನದ ದೃಷ್ಟಿ ಬೀರುವಂತಾಗಿದೆ. ಅದಕ್ಕೆ ಸಾಕ್ಷಿ ಒದಗಿಸುವಂತಹ ಹಲವು ಸಂಗತಿಗಳು ನಡೆಯುತ್ತಿವೆ.
Vijaya Karnataka Web sushant singh rajput case netizens express displeasure on discriminatory behavior of mumbai police
ಮುಂಬೈ ಪೊಲೀಸರಿಂದ ರಿಯಾ ಚಕ್ರವರ್ತಿಗೊಂದು ನ್ಯಾಯ, ಸುಶಾಂತ್‌ ಸಹೋದರಿಗೆ ಇನ್ನೊಂದು ನ್ಯಾಯ?


ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಿತು. ಅದಕ್ಕೂ ಮುನ್ನ ಸುಶಾಂತ್‌ ಸಿಂಗ್‌ ರಜಪೂತ್‌ ಕುಟುಂಬದವರು, ಸ್ನೇಹಿತರು, ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆಗೆ ಹಾಜರಾದರು. ಈ ವೇಳೆ ರಿಯಾ ಚಕ್ರವರ್ತಿಗೆ ಪೊಲೀಸರು ಸಂಪೂರ್ಣ ಭದ್ರತೆ ನೀಡಿ ಕರೆದುಕೊಂಡು ಬಂದಿದ್ದಾರೆ. ಆದರೆ ಸುಶಾಂತ್‌ ಸಹೋದರಿಯ ರಕ್ಷಣೆಗೆ ಇದ್ದಿದ್ದು ಒಬ್ಬ ಕಾನ್ಸ್‌ಟೇಬಲ್‌ ಮಾತ್ರ!

ಈ ಘಟನೆಗೆ ಫೋಟೋ ಮತ್ತು ವಿಡಿಯೋ ಸಾಕ್ಷಿ ಆಗಿವೆ. ಈ ಸಂಬಂಧ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಮುಂಬೈ ಪೊಲೀಸರು ರಿಯಾ ಚಕ್ರವರ್ತಿ ಪರವಾಗಿ ಯಾಕೆ ಇಷ್ಟು ಕರುಣೆ ತೋರಿಸುತ್ತಿದ್ದಾರೆ ಎಂಬುದು ಹಲವರ ಪ್ರಶ್ನೆ. ಸುಶಾಂತ್‌ ನಿಧನರಾದ ಮೊದಲ ದಿನದಿಂದಲೂ ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಸಂಶಯ ಹುಟ್ಟುಹಾಕುತ್ತಿದೆ.

also read: ಸುಶಾಂತ್‌ ನಂಬರ್‌ ಬ್ಲಾಕ್‌ ಮಾಡಿ, ಮಹೇಶ್‌ ಭಟ್‌ ಜೊತೆ ಮಾತುಕಥೆ ಜಾಸ್ತಿ ಮಾಡಿದ್ದ ರಿಯಾ ಚಕ್ರವರ್ತಿ!

ಇದೇ ವಿಚಾರವಾಗಿ ಬಿಹಾರ ಪೊಲೀಸರು ಕೂಡ ಆರೋಪ ಮಾಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಮುಂಬೈ ಪೊಲೀಸರಿಂದ ಲೋಪ ಆಗಿದೆ ಹಾಗೂ ಸೂಕ್ತ ಸಾಕ್ಷಿ ಆಧಾರಗಳನ್ನು ಅವರು ಬೇಕಂತಲೇ ಕೈ ಚೆಲ್ಲಿದ್ದಾರೆ ಎಂದು ಆರೋಪ ಮಾಡಲಾಗಿದೆ. ಪಾಟ್ನಾದಿಂದ ಮುಂಬೈಗೆ ಬಂದ ಬಿಹಾರ ಪೊಲೀಸ್‌ ಅಧಿಕಾರಿಗಳಿಗೂ ಕೂಡ ಮುಂಬೈ ಪೊಲೀಸರು ಸೂಕ್ತ ಸಹಕಾರ ನೀಡದೇ ಸತಾಯಿಸಿದ್ದಾರೆ ಎಂಬ ಮಾತು ಸಹ ಕೇಳಿಬಂದಿತ್ತು.

also read: ಸುಶಾಂತ್‌ ಪ್ರಕರಣ: ರಹಸ್ಯವಾಗಿ ಇನ್ನೊಂದು ಮೊಬೈಲ್‌ ಫೋನ್‌ ಬಳಸುತ್ತಿದ್ದ ರಿಯಾ ಚಕ್ರವರ್ತಿ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌