ಆ್ಯಪ್ನಗರ

ಡ್ರಗ್‌ ಮಾಫಿಯಾ ಕೇಸ್‌ನಲ್ಲಿ ಮೊದಲು ತಪ್ಪು ಒಪ್ಪಿಕೊಂಡು, ಈಗ ಉಲ್ಟಾ ಹೊಡೆದ ರಿಯಾ ಚಕ್ರವರ್ತಿ!

ಪ್ರಸ್ತುತ ಎನ್‌ಸಿಬಿ ಅಧಿಕಾರಿಗಳ ವಶದಲ್ಲಿ ಇರುವ ನಟಿ ರಿಯಾ ಚಕ್ರವರ್ತಿ ಹಲವು ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರು ಏಕಾಏಕಿ ಮಾತು ಬದಲಾಯಿಸಿದ್ದಾರೆ! ಆ ಬಗ್ಗೆ ಇಲ್ಲಿದೆ ಮಾಹಿತಿ..

Vijaya Karnataka Web 10 Sep 2020, 6:08 pm
ಕೆಲವು ದಿನಗಳಿಂದೀಚೆಗೆ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ಆಗಿವೆ. ಪ್ರಮುಖ ಆರೋಪಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಅವರು ಹಲವು ಸತ್ಯಗಳನ್ನು ಬಾಯಿ ಬಿಟ್ಟಿದ್ದರು. ಅನೇಕ ಆರೋಪಗಳನ್ನು ಒಪ್ಪಿಕೊಂಡಿದ್ದರು. ಆದರೆ ಈಗ ರಿಯಾ ಏಕಾಏಕಿ ಮಾತು ಬದಲಾಯಿಸಿದ್ದಾರೆ.
Vijaya Karnataka Web ರಿಯಾ ಚಕ್ರವರ್ತಿ


'ನನಗೆ ಬೆದರಿಕೆ ಹಾಕುವ ಮೂಲಕ ಕೆಲವು ವಿಚಾರಗಳನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ. ನ್ಯಾಯಾಂಗ ಬಂಧನದಲ್ಲಿ ನನ್ನ ಜೀವಕ್ಕೆ ಅಪಾಯ ಇದೆ. ಅನೇಕರಿಂದ ಕೊಲೆ ಮತ್ತು ರೇಪ್‌ ಬೆದರಿಕೆ ಬಂದಿದೆ. ಹಾಗಾಗಿ ಜಾಮೀನು ನೀಡಬೇಕು' ಎಂದು ರಿಯಾ ಚಕ್ರವರ್ತಿ ಮನವಿ ಸಲ್ಲಿಸಿದ್ದಾರೆ. ಅವರ ಅರ್ಜಿಯ ವಿಚಾರಣೆ ಶುಕ್ರವಾರ (ಸೆ.11) ನಡೆಯಲಿದೆ.

ಸೆ.8ರಂದು ಡ್ರಗ್ಸ್‌ ಜಾಲದ ಜೊತೆಗಿನ ನಂಟಿನ ಆರೋಪದ ಮೇಲೆ ರಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ. ಈ ಮೊದಲೇ ಅವರು ಜಾಮೀನು ಪಡೆಯಲು ಪ್ರಯತ್ನಿಸಿದ್ದರಾದರೂ ಆ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿತ್ತು. ಸೆ. 22ರವರೆಗೂ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಲಾಗಿದೆ.

also read: ರಿಯಾ ಚಕ್ರವರ್ತಿಗೆ ಹೊಸ ಸಿನಿಮಾ ಆಫರ್‌! ಬಾಲಿವುಡ್‌ನಿಂದ ಕೇಳಿಬಂತು ಅಚ್ಚರಿಯ ಸುದ್ದಿ!

'ವಾರೆಂಟ್‌ ಇಲ್ಲದೆ ನನ್ನನ್ನು ಅರೆಸ್ಟ್‌ ಮಾಡಲಾಗಿದೆ. ಅದಕ್ಕೆ ಸರಿಯಾದ ಕಾರಣವನ್ನೂ ನೀಡಿಲ್ಲ. ವಿಚಾರಣೆ ವೇಳೆ ಮಹಿಳಾ ಸಿಬ್ಬಂದಿ ಇರಲೇ ಇಲ್ಲ. ಹಲವು ಪುರುಷ ಅಧಿಕಾರಿಗಳು ನನ್ನನ್ನು 8 ಗಂಟೆಗಳ ಕಾಲ ವಿಚಾರಣೆ ಮಾಡಿದರು. ಆ ಸಮಯದಲ್ಲಿ ಯಾವುದೇ ಕಾನೂನು ಸಲಹೆಗಾರರಿಗೂ ಪ್ರವೇಶ ನೀಡಲಿಲ್ಲ' ಎಂದು ಎನ್‌ಸಿಬಿ ಅಧಿಕಾರಿಗಳ ಮೇಲೆ ರಿಯಾ ಆರೋಪಗಳನ್ನು ಹೊರಿಸಿದ್ದಾರೆ.

also read: ಡ್ರಗ್ಸ್‌ ಮಾಫಿಯಾದಲ್ಲಿ ಸಿಕ್ಕಿ ಬಿದ್ದಿರುವ ರಿಯಾ ಚಕ್ರವರ್ತಿಯ ಬೆಂಬಲಕ್ಕೆ ನಿಂತ ಸೆಲೆಬ್ರಿಟಿಗಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌