ಆ್ಯಪ್ನಗರ

ಸುಶಾಂತ್‌ ಸಿಂಗ್‌ ರಜಪೂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು?

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ತನಿಖೆಗೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಕೇಸ್‌ ದಾಖಲಾದ ಬೆನ್ನಲ್ಲೇ ಅವರು ಸಲ್ಮಾನ್‌ ಪರ ಲಾಯರ್‌ ಅನ್ನು ಸಂಪರ್ಕಿಸಿದ್ದಾರೆ! ಇದು ಅಚ್ಚರಿಗೆ ಕಾರಣವಾಗಿದೆ.

Vijaya Karnataka Web 29 Jul 2020, 4:53 pm
ಕೆಲವೇ ದಿನಗಳ ಹಿಂದೆ ನಟಿ ರಿಯಾ ಚಕ್ರವರ್ತಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಟ್ವಿಟರ್‌ ಮೂಲಕ ಮನವಿ ಮಾಡಿಕೊಂಡಿದ್ದರು. ತಾವು ಸುಶಾಂತ್‌ ಪ್ರೇಯಸಿ ಎಂದು ಅದೇ ಮೊದಲ ಬಾರಿಗೆ ಆ ಟ್ವೀಟ್‌ನಲ್ಲಿ ಅವರು ಬಹಿರಂಗ ಪಡಿಸಿದ್ದರು. ಆದರೆ ಈಗ ಅವರ ವಿರುದ್ಧವೇ ಪ್ರಕರಣ ದಾಖಲಾಗಿದೆ.
Vijaya Karnataka Web sushant singh rajput case rhea chakraborty reportedly hires lawyer satish maneshinde
ಸುಶಾಂತ್‌ ಸಿಂಗ್‌ ರಜಪೂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಬಳಿ ಇಷ್ಟೊಂದು ಹಣ ಎಲ್ಲಿಂದ ಬಂತು?


ಸುಶಾಂತ್ ಸಿಂಗ್ ತಂದೆ ಕೃಷ್ಣ ಕುಮಾರ್ ಸಿಂಗ್‌ ಅವರು ರಿಯಾ ವಿರುದ್ಧ ಪಾಟ್ನಾದಲ್ಲಿ ದೂರು ದಾಖಲು ಮಾಡಿದ್ದಾರೆ. ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಅದರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವೂ ಇದೆ. ಸುಶಾಂತ್‌ಗೆ ಹಣಕಾಸು ವ್ಯವಹಾರದಲ್ಲಿ ಮೋಸ ಮಾಡಿದ್ದಲ್ಲದೆ, ಮಾನಸಿಕ ಕಿರುಕುಳವನ್ನು ರಿಯಾ ನೀಡಿದ್ದಾರೆ ಎಂಬುದಾಗಿಯೂ ಆರೋಪಿಸಲಾಗಿದೆ. ಹಾಗಾಗಿ ಈಗ ರಿಯಾ ಕಾನೂನಿನ ಮೂಲಕ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ರಿಯಾ ಚಕ್ರವರ್ತಿ ಆಯ್ಕೆ ಮಾಡಿಕೊಂಡಿರುವ ಲಾಯರ್‌ ಹೆಸರು ಕೇಳಿದರೆ ಎಂಥವರಿಗಾದರೂ ಒಂದು ಕ್ಷಣ ಅಚ್ಚರಿ ಆಗುತ್ತದೆ. ಯಾಕೆಂದರೆ ಅವರು ದೇಶದ ಅತಿ ದುಬಾರಿ ಲಾಯರ್‌ಗಳಲ್ಲಿ ಒಬ್ಬರು! ಅವರ ಹೆಸರು ಸತೀಶ್‌ ಮಾನೆಶಿಂದೆ. ಈ ಹಿಂದೆ ಸಲ್ಮಾನ್‌ ಖಾನ್‌, ಸಂಜಯ್ ದತ್‌ ಮುಂತಾದ ಘಟಾನುಘಟಿಗಳ ಕೇಸ್‌ಗಳನ್ನು ಹ್ಯಾಂಡಲ್‌ ಮಾಡಿದವರು ಇದೇ ಸತೀಶ್‌ ಮಾನೆಶಿಂದೆ. ಈಗ ರಿಯಾ ಚಕ್ರವರ್ತಿ ಕೂಡ ಅವರ ಮೊರೆ ಹೋಗಿದ್ದಾರೆ.

also read: ಸುಶಾಂತ್‌-ರಿಯಾ ಸಂಬಂಧದ ಬಗ್ಗೆ ಸತ್ಯ ಬಾಯಿಬಿಟ್ಟು, ನಂತರ ಪೋಸ್ಟ್‌ ಡಿಲಿಟ್‌ ಮಾಡಿದ ಮಹಿಳೆ!

ರಿಯಾ ಅವರ ಈ ನಡೆ ಎಲ್ಲರಲ್ಲೂ ಅನುಮಾನ ಮೂಡಿಸಿದೆ. ಯಾಕೆಂದರೆ, ಅಷ್ಟು ದುಬಾರಿ ಲಾಯರ್‌ಅನ್ನು ನೇಮಿಸಿಕೊಳ್ಳಲು ರಿಯಾ ಬಳಿ ಹಣ ಎಲ್ಲಿಂದ ಬಂತು? ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಅವರು ಇನ್ನೂ ಹೆಣಗಾಡುತ್ತಿದ್ದಾರೆ. ಇಂಥ ನಟಿ ಸತೀಶ್‌ ಮಾನೆಶಿಂದೆಯಂತಹ ದೊಡ್ಡ ಲಾಯರನ್ನು ನೇಮಿಸಿಕೊಳ್ಳುತ್ತಾರೆ ಎಂದರೆ ಅದು ತಮಾಷೆಯ ವಿಚಾರವೇ ಅಲ್ಲ. ಹಾಗಾದರೆ ರಿಯಾಗೆ ಬಾಲಿವುಡ್‌ನಲ್ಲಿ ಯಾರು ಬೆಂಬಲಕ್ಕೆ ನಿಂತಿರಬಹುದು ಎಂಬ ಅನುಮಾನ ಈಗ ದಟ್ಟವಾಗಿದೆ.

also read: ನಟಿ ರಿಯಾ ಚಕ್ರವರ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಸುಶಾಂತ್ ಸಿಂಗ್ ತಂದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌