ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಗೆ ಚುರುಕು ಮುಟ್ಟಿಸಲಾಗುತ್ತಿದೆ. ದಿನ ಕಳೆದಂತೆಲ್ಲ ಹೊಸ ಹೊಸ ಮಾಹಿತಿಗಳು ಜನರನ್ನು ಅಚ್ಚರಿಗೆ ಒಳಪಡಿಸುತ್ತಿವೆ. ಆರಂಭದಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳ ಮೇಲೆ ಅನುಮಾನ ಮೂಡಿತ್ತು. ಆದರೆ ಈಗ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಪ್ರಮುಖ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ತನಿಖಾಧಿಕಾರಿಗಳು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ನಿರ್ದೇಶಕ-ನಿರ್ಮಾಪಕ ಮಹೇಶ್ ಭಟ್ ಮತ್ತು ರಿಯಾ ಚಕ್ರವರ್ತಿ ನಡುವೆ ಅಗತ್ಯಕ್ಕಿಂತ ಹೆಚ್ಚಾದ ಆಪ್ತತೆ ಇತ್ತು ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಅವರಿಬ್ಬರ ಫೋಟೋಗಳು ಕೂಡ ಆ ಮಾತಿಗೆ ಸಾಕ್ಷಿ ಒದಗಿಸುವಂತಿತ್ತು. ಸುಶಾಂತ್ ಮತ್ತು ರಿಯಾ ನಡುವೆ ಮನಸ್ತಾಪ ಮೂಡಲು ಮಹೇಶ್ ಭಟ್ ಕೂಡ ಕಾರಣ ಎನ್ನಲಾಗಿತ್ತು. ಅವರಿಬ್ಬರ ನಡುವೆ ನಡೆದ ಫೋನ್ ಕರೆ ಮತ್ತು ವಾಟ್ಸಪ್ ಸಂದೇಶಗಳ ವಿವರ ಬಹಿರಂಗ ಆಗಿದೆ!
ಇಲ್ಲೊಂದು ಗಮನಿಸಬೇಕಾದ ಮುಖ್ಯ ಅಂಶ ಇದೆ. ಜೂ.8ರಂದು ಸುಶಾಂತ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ನಿಧನರಾದರು. ಆ ಘಟನೆ ನಡೆದ ತಕ್ಷಣ ರಿಯಾ ಅವರು ಸುಶಾಂತ್ರ ಮನೆ ಬಿಟ್ಟು ಹೊರಬಂದರು. ಅಲ್ಲದೆ, ಸುಶಾಂತ್ರ ನಂಬರ್ ಅನ್ನೂ ಬ್ಲಾಕ್ ಮಾಡಿದರು. ಆ ದಿನದ ಬಳಿಕ ಸುಶಾಂತ್-ರಿಯಾ ನಡುವೆ ಯಾವುದೇ ಫೋನ್ ಕರೆ ಅಥವಾ ಮೆಸೇಜ್ ವಿನಿಮಯ ಆಗಿಲ್ಲ. ಆದರೆ ಅದೇ ಸಮಯಕ್ಕೆ ಸರಿಯಾಗಿ ಮಹೇಶ್ ಭಟ್ ಜೊತೆ ರಿಯಾ ಸಂಬಂಧ ಗಟ್ಟಿಗೊಳಿಸಿಕೊಂಡಿದ್ದಾರೆ!
also read: ಸುಶಾಂತ್ ಮೃತ ದೇಹದ ಮೇಲಿತ್ತು ಅನುಮಾನಾಸ್ಪದ ಕಲೆ! ಆಂಬ್ಯುಲೆನ್ಸ್ ಸಹಾಯಕ ಬಿಚ್ಚಿಟ್ಟ ರಹಸ್ಯ!
ಜೂ.8ರಿಂದ ಜೂ.13ರವರೆಗೆ ಅಂದರೆ ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಾವಿನ ದಿನಾಂಕಗಳ ನಡುವೆ ರಿಯಾ ಮತ್ತು ಮಹೇಶ್ ಭಟ್ ಬರೋಬ್ಬರಿ 16 ಬಾರಿ ಫೋನ್ ಮೂಲಕ ಮಾತುಕತೆ ನಡೆದಿದೆ. ಅಷ್ಟೇ ಅಲ್ಲದೆ, ವಾಟ್ಸಪ್ ಮೂಲಕವೂ ಸಂದೇಶ ರವಾನೆ ಆಗಿದೆ. ಅಚ್ಚರಿ ಎಂದರೆ, ಕೆಲವು ಮೆಸೇಜ್ಗಳನ್ನು ಡಿಲಿಟ್ ಕೂಡ ಮಾಡಲಾಗಿದೆ. ಆದರೆ ಆ ಎಲ್ಲ ಡಿಲಿಡೆಟ್ ಸಂದೇಶಗಳನ್ನೂ ಜಾರಿ ನಿರ್ದೇಶನಾಲಯ ಕಲೆ ಹಾಕಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಸಿಬಿಐ ಅಧಿಕಾರಿಗಳು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
also read: ಸುಶಾಂತ್ ಮಾಜಿ ಪ್ರೇಯಸಿ ಮಡಿಲಲ್ಲಿ ಅವಳಿ ಮಕ್ಕಳು! ಅಂಕಿತಾ ಕುಟುಂಬದಲ್ಲಿ ಸಂಭ್ರಮ!
ನಿರ್ದೇಶಕ-ನಿರ್ಮಾಪಕ ಮಹೇಶ್ ಭಟ್ ಮತ್ತು ರಿಯಾ ಚಕ್ರವರ್ತಿ ನಡುವೆ ಅಗತ್ಯಕ್ಕಿಂತ ಹೆಚ್ಚಾದ ಆಪ್ತತೆ ಇತ್ತು ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಅವರಿಬ್ಬರ ಫೋಟೋಗಳು ಕೂಡ ಆ ಮಾತಿಗೆ ಸಾಕ್ಷಿ ಒದಗಿಸುವಂತಿತ್ತು. ಸುಶಾಂತ್ ಮತ್ತು ರಿಯಾ ನಡುವೆ ಮನಸ್ತಾಪ ಮೂಡಲು ಮಹೇಶ್ ಭಟ್ ಕೂಡ ಕಾರಣ ಎನ್ನಲಾಗಿತ್ತು. ಅವರಿಬ್ಬರ ನಡುವೆ ನಡೆದ ಫೋನ್ ಕರೆ ಮತ್ತು ವಾಟ್ಸಪ್ ಸಂದೇಶಗಳ ವಿವರ ಬಹಿರಂಗ ಆಗಿದೆ!
ಇಲ್ಲೊಂದು ಗಮನಿಸಬೇಕಾದ ಮುಖ್ಯ ಅಂಶ ಇದೆ. ಜೂ.8ರಂದು ಸುಶಾಂತ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ನಿಧನರಾದರು. ಆ ಘಟನೆ ನಡೆದ ತಕ್ಷಣ ರಿಯಾ ಅವರು ಸುಶಾಂತ್ರ ಮನೆ ಬಿಟ್ಟು ಹೊರಬಂದರು. ಅಲ್ಲದೆ, ಸುಶಾಂತ್ರ ನಂಬರ್ ಅನ್ನೂ ಬ್ಲಾಕ್ ಮಾಡಿದರು. ಆ ದಿನದ ಬಳಿಕ ಸುಶಾಂತ್-ರಿಯಾ ನಡುವೆ ಯಾವುದೇ ಫೋನ್ ಕರೆ ಅಥವಾ ಮೆಸೇಜ್ ವಿನಿಮಯ ಆಗಿಲ್ಲ. ಆದರೆ ಅದೇ ಸಮಯಕ್ಕೆ ಸರಿಯಾಗಿ ಮಹೇಶ್ ಭಟ್ ಜೊತೆ ರಿಯಾ ಸಂಬಂಧ ಗಟ್ಟಿಗೊಳಿಸಿಕೊಂಡಿದ್ದಾರೆ!
also read: ಸುಶಾಂತ್ ಮೃತ ದೇಹದ ಮೇಲಿತ್ತು ಅನುಮಾನಾಸ್ಪದ ಕಲೆ! ಆಂಬ್ಯುಲೆನ್ಸ್ ಸಹಾಯಕ ಬಿಚ್ಚಿಟ್ಟ ರಹಸ್ಯ!
ಜೂ.8ರಿಂದ ಜೂ.13ರವರೆಗೆ ಅಂದರೆ ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಾವಿನ ದಿನಾಂಕಗಳ ನಡುವೆ ರಿಯಾ ಮತ್ತು ಮಹೇಶ್ ಭಟ್ ಬರೋಬ್ಬರಿ 16 ಬಾರಿ ಫೋನ್ ಮೂಲಕ ಮಾತುಕತೆ ನಡೆದಿದೆ. ಅಷ್ಟೇ ಅಲ್ಲದೆ, ವಾಟ್ಸಪ್ ಮೂಲಕವೂ ಸಂದೇಶ ರವಾನೆ ಆಗಿದೆ. ಅಚ್ಚರಿ ಎಂದರೆ, ಕೆಲವು ಮೆಸೇಜ್ಗಳನ್ನು ಡಿಲಿಟ್ ಕೂಡ ಮಾಡಲಾಗಿದೆ. ಆದರೆ ಆ ಎಲ್ಲ ಡಿಲಿಡೆಟ್ ಸಂದೇಶಗಳನ್ನೂ ಜಾರಿ ನಿರ್ದೇಶನಾಲಯ ಕಲೆ ಹಾಕಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಸಿಬಿಐ ಅಧಿಕಾರಿಗಳು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
also read: ಸುಶಾಂತ್ ಮಾಜಿ ಪ್ರೇಯಸಿ ಮಡಿಲಲ್ಲಿ ಅವಳಿ ಮಕ್ಕಳು! ಅಂಕಿತಾ ಕುಟುಂಬದಲ್ಲಿ ಸಂಭ್ರಮ!