ಆ್ಯಪ್ನಗರ

ಸುಶಾಂತ್‌ ಪ್ರಕರಣಕ್ಕೆ ತಮ್ಮ ಹೆಸರನ್ನು ಲಿಂಕ್‌ ಮಾಡಿದವರ ವಿರುದ್ಧ ನಟ ಸೂರಜ್‌ ಪಾಂಚೋಲಿ ದೂರು!

2013ರಲ್ಲಿ ಆತ್ಮಹತ್ಯೆ ಮಾಡಿಕೊಂಡ ನಟಿ ಜಿಯಾ ಖಾನ್‌ ಸಾವಿಗೆ ಸೂರಜ್‌ ಅವರೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈಗ ಸುಶಾಂತ್‌ ಪ್ರಕರಣದಲ್ಲೂ ಸೂರಜ್‌ ಹೆಸರನ್ನು ಲಿಂಕ್‌ ಮಾಡುವ ಪ್ರಯತ್ನಕ್ಕೆ ಕೆಲವರು ಕೈ ಹಾಕಿದ್ದಾರೆ.

Vijaya Karnataka Web 11 Aug 2020, 2:46 pm
ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾಗಿದ್ದ ಪ್ರತಿಭಾವಂತ ಕಲಾವಿದ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಜೂ.14ರಂದು ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ವಿಪರ್ಯಾಸ. ಅವರು ಅಂಥ ನಿರ್ಧಾರ ತೆಗೆದುಕೊಳ್ಳಲು ಕಾರಣ ಆದವರು ಯಾರು? ನಟಿ ರಿಯಾ ಚಕ್ರವರ್ತಿ, ಮಹೇಶ್‌ ಭಟ್‌ ಸೇರಿದಂತೆ ಅನೇಕ ಬಿ-ಟೌನ್ ಸೆಲೆಬ್ರಿಟಿಗಳ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ಈ ನಡುವೆ ಕೆಲವು ಮಾಧ್ಯಮಗಳಲ್ಲಿ ನಟ ಸೂರಜ್‌ ಪಾಂಚೋಲಿ ಹೆಸರು ಕೂಡ ಕೇಳಿಬಂದಿತ್ತು!
Vijaya Karnataka Web sushant singh rajput rhea chakraborty case sooraj pancholi files police complaint for harassment
ಸುಶಾಂತ್‌ ಪ್ರಕರಣಕ್ಕೆ ತಮ್ಮ ಹೆಸರನ್ನು ಲಿಂಕ್‌ ಮಾಡಿದವರ ವಿರುದ್ಧ ನಟ ಸೂರಜ್‌ ಪಾಂಚೋಲಿ ದೂರು!


ಒಂದೆರಡು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಸೂರಜ್‌ ಪಾಂಚೋಲಿ ಅವರಿಗೆ ಸಲ್ಮಾನ್‌ ಖಾನ್‌ ಗಾಡ್‌ಫಾದರ್‌ ಇದ್ದಂತೆ. ಹಲವು ವರ್ಷಗಳ ಹಿಂದೆ ಅವರು ನಟಿ ಜಿಯಾ ಖಾನ್‌ ಜೊತೆ ಸೂರಜ್‌ ಡೇಟಿಂಗ್‌ ಮಾಡುತ್ತಿದ್ದರು. ಆದರೆ 2013ರಲ್ಲಿ ಜಿಯಾ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿಗೆ ಸೂರಜ್‌ ಅವರೇ ಕಾರಣ ಎಂದು ಜಿಯಾ ಕುಟುಂಬದವರು ದೂರು ದಾಖಲಿಸಿದ್ದರು. ಈಗ ಸುಶಾಂತ್‌ ಸಾವಿನ ವಿಷಯದಲ್ಲೂ ಸೂರಜ್‌ ಹೆಸರು ಪ್ರಸ್ತಾಪ ಆಗಿದೆ.

ಕೆಲವು ಟಿವಿ ವಾಹಿನಿಗಳು, ಸೋಶಿಯಲ್‌ ಮೀಡಿಯಾ ಪೇಜ್‌ಗಳು ಹಾಗೂ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ತಮ್ಮ ಬಗ್ಗೆ ಇಲ್ಲಸಲ್ಲದ ವರದಿ ಪ್ರಸಾರ ಆಗಿದೆ ಎಂದು ಸೂರಜ್‌ ಹೇಳಿದ್ದಾರೆ. ಈ ಕುರಿತು ಕೆಲವೇ ದಿನಗಳ ಹಿಂದೆ ಅವರು ಟ್ವಿಟರ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಊಹಾಪೋಹಗಳ ಹಾವಳಿ ಕಮ್ಮಿ ಆಗದ ಕಾರಣ, ಈಗ ಅವರು ನೇರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮುಂಬೈನ ವೆರ್ಸೋವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

also read: ಸುಶಾಂತ್‌ ನಂಬರ್‌ ಬ್ಲಾಕ್‌ ಮಾಡಿ, ಮಹೇಶ್‌ ಭಟ್‌ ಜೊತೆ ಮಾತುಕಥೆ ಜಾಸ್ತಿ ಮಾಡಿದ್ದ ರಿಯಾ ಚಕ್ರವರ್ತಿ!

ಸುಶಾಂತ್ ಮತ್ತು ಅವರ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್ ಸಾವಿನ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದು ತಂದಿರುವುದಕ್ಕೆ ಸೂರಜ್‌ ಬೇಸರ ಮಾಡಿಕೊಂಡಿದ್ದಾರೆ. ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಯಾವುದೇ ಆಧಾರ ಇಲ್ಲದೆ ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂರಜ್‌ ಕಾನೂನು ಕ್ರಮ ಕೈಕೊಳ್ಳುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

also read: ಸುಶಾಂತ್‌ ಮೃತ ದೇಹದ ಮೇಲಿತ್ತು ಅನುಮಾನಾಸ್ಪದ ಕಲೆ! ಆಂಬ್ಯುಲೆನ್ಸ್‌ ಸಹಾಯಕ ಬಿಚ್ಚಿಟ್ಟ ರಹಸ್ಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌