ಆ್ಯಪ್ನಗರ

ನಾನು ಪಬ್ಲಿಕ್ ಫಿಗರ್, ಪಬ್ಲಿಕ್ ಪ್ರಾಪರ್ಟಿ ಅಲ್ಲ: ತಾಪ್ಸಿ ಪನ್ನು

ಇತ್ತೀಚೆಗೆ ನಟಿ ತಾಪ್ಸಿ ಪನ್ನುಗೆ ಎದುರಾಗಿದ್ದ ಒಂದು ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ವ್ಯಕ್ತಿಯೋರ್ವ ಕದ್ದುಮುಚ್ಚಿ ಅವರ ಫೋಟೋ ತೆಗೆಯುತ್ತಿದ್ದನಂತೆ. ಆಗ ಆ ವ್ಯಕ್ತಿ ಬಳಿಗೆ ಹೋದಿ ಫೋನ್ ಒಳಗಡೆ ಇಟ್ಟುಕೊಳ್ತೀಯಾ ಅಥವಾ ಪೀಸ್ ಪೀಸ್ ಮಾಡಲೆ ಎಂದು ಬೆದರಿಸಿದ್ದಾಗಿ ಹೇಳಿಕೊಂಡಿದ್ದಾರೆ.

Vijaya Karnataka Web 25 Jun 2019, 4:06 pm
ಬಾಲಿವುಡ್ ತಾರೆ ತಾಪ್ಸಿ ಪನ್ನು ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ ಅನ್ನಿಸುತ್ತದೆ. ಒಂದು ಕಾಲದಲ್ಲಿ ದಕ್ಷಿಣದಲ್ಲಿ ಬಿಝಿಯಾಗಿದ್ದ ಈ ತಾರೆ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ 'ಗೇಮ್ ಓವರ್' ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇದೀಗ ತನಗೆ ಎದುರಾಗಿರುವ ವಿಚಿತ್ರ ಘಟನೆಯ ಅನುಭವಗಳನ್ನು ಮಾಧ್ಯಮಗಳ ಜತೆಗೆ ಹಂಚಿಕೊಂಡಿದ್ದಾರೆ.
Vijaya Karnataka Web taapsee-pannu


ಇತ್ತೀಚೆಗೆ ತನಗೆ ಎದುರಾದ ಕ್ರೇಜಿ ಘಟನೆ ಬಗ್ಗೆ ಈ ರೀತಿ ಹೇಳಿದ್ದಾರೆ. ಸೆಲೆಬ್ರಿಟಿಗಳು ಹೊರಗೆ ಬರುವಾಗ ಸಮಸ್ಯೆಗಳು ತಪ್ಪಿದ್ದಲ್ಲ. ತನಗೆ ಅಂತಹದ್ದೇ ಘಟನೆ ಎದುರಾಯಿತು. 'ಮನ್ಮರ್ಜಿಯಾನ್' ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ತಂಗಿ ಜತೆಗೆ ರೆಸ್ಟೋರೆಂಟ್‌ಗೆ ಹೋದೆ. ಆಗ ನಡೆದ ಘಟನೆಯನ್ನು ವಿವರಿಸಿದ್ದಾರೆ. [ಮುಂಬಯಿಯಲ್ಲಿ ಮೂರು ಬೆಡ್‌ರೂಂ ಫ್ಲಾಟ್‌ ಖರೀದಿಸಿದ ತಾಪ್ಸಿ]

ಆ ಸಮಯದ್ಲಲಿ ಟ್ರಾಫಿಕ್ ಸಿಗ್ನಲ್ ಬಳಿ ಓರ್ವ ವ್ಯಕ್ತಿ ಕದ್ದುಮುಚ್ಚಿ ತಾಪ್ಸಿ ಫೋಟೋ ತೆಗೆಯುತ್ತಿದ್ದ. ಅದನ್ನು ಗಮನಿಸಿದ ತಾಪ್ಸಿ ಕೋಪದಿಂದ ಆತನ ಬಳಿಗೆ ಹೋಗಿ, "ಫೋನ್ ಒಳಗಡೆ ಇಟ್ಟುಕೊಳ್ತೀಯಾ ಅಥವಾ ಪೀಸ್ ಪೀಸ್ ಮಾಡ್ಲಾ?" ಎಂದು ಬೆದರಿಸಿದ್ದಾರೆ. ಈ ಘಟನೆಯಿಂದ ನನ್ನ ತಂಗಿ ಭಯ ಬಿದ್ದು ಏನೂ ಗೊತ್ತಿಲ್ಲದಂತೆ ಹಾಗೆಯೇ ಇದ್ದರು ಬಿಟ್ಟರು ಎಂದಿದ್ದಾರೆ ತಾಪ್ಸಿ.

ಫೋಟೋ ತೆಗೆದ ವ್ಯಕ್ತಿ ಸಹ ಅಲ್ಲಿಂದ ಕಾಲ್ತಿತ್ತ. ಅಷ್ಟೇ ಅಲ್ಲ ತಾಪ್ಸಿ 'ಬದ್ಲಾ' ಸಿನಿಮಾದಲ್ಲಿ ನಟಿಸುತ್ತಿದ್ದ ಸಮಯದಲ್ಲೂ ಅವರ ಸಹೋದರಿ ಭಯ ಬೀಳುತ್ತಿದ್ದರಂತೆ. ಯಾಕೆಂದರೆ ಬದ್ಲಾ ಸಿನಿಮಾದಲ್ಲಿ ತಾಪ್ಸಿ ಓರ್ವ ವ್ಯಕ್ತಿಯನ್ನು ತನಗೆ ಗೊತ್ತಲ್ಲದಂತೆ ಸಾಯಿಸುತ್ತಾರೆ. ಪಾತ್ರದಲ್ಲಿ ಲೀನವಾಗಿ ನಿಜ ಜೀವನದಲ್ಲೂ ಯಾರನ್ನಾದರೂ ಸಾಯಿಸುತ್ತಾರೆ ಎಂದು ತನ್ನ ತಂಗಿ ಭಯಭೀತಳಾಗಿದ್ದಳು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌