ರಣಬೀರ್ಗೆ ರೇಪಿಸ್ಟ್, ದೀಪಿಕಾಗೆ ಸೈಕೋ ಅಂತ ಕರೆಯಲ್ಲ ಯಾಕೆ? ಕಂಗನಾ ಖಡಕ್ ಪ್ರಶ್ನೆ!
ಬಾಲಿವುಡ್ನ ಸ್ಟಾರ್ ಕಲಾವಿದರಾದ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಮೇಲೆ ಕಂಗನಾ ರಣಾವತ್ ಗರಂ ಆಗಿದ್ದಾರೆ. ಈ ಮೂವರ ಬಗ್ಗೆ ಅವರು ಸಖತ್ ಖಾರವಾಗಿ ಕಾಮೆಂಟ್ ಮಾಡಿದ್ದಾರೆ.
Vijaya Karnataka Web 10 Aug 2020, 5:46 pm
ಹಿಂದಿ ಚಿತ್ರರಂಗದಲ್ಲಿ ಔಟ್ಸೈಡರ್ ವರ್ಸಸ್ ಇನ್ಸೈಡರ್ ಎಂಬ ಜಟಾಪಟಿ ನಡೆಯುತ್ತಿದೆ. ಅದರಲ್ಲಿ ನಟಿ ಕಂಗನಾ ರಣಾವತ್ ಎಲ್ಲರನ್ನೂ ಎದುರು ಹಾಕಿಕೊಂಡಿದ್ದಾರೆ. ಮೊದಲಿನಿಂದಲೂ ತಮ್ಮ ನೇರ ನಡೆನುಡಿಯ ಕಾರಣಕ್ಕಾಗಿ ಘಟಾನುಘಟಿಗಳ ನಿಷ್ಠುರ ಕಟ್ಟಿಕೊಂಡಿರುವ ಅವರು ಈಗ ಇನ್ನೂ ಕೆಲವು ಸ್ಟಾರ್ ಕಲಾವಿದರನ್ನು ಕೆಣಕಿದ್ದಾರೆ. ಆ ಬಗ್ಗೆ ಬಿ-ಟೌನ್ ವಲಯದಲ್ಲಿ ದೊಡ್ಡ ಚರ್ಚೆ ಆಗುತ್ತದೆ.
ನೆಪೋಟಿಸಂ ವಿಷಯ ಬಂದಾಗಲೆಲ್ಲ ಕಂಗನಾ ರಣಾವತ್ ಉರಿದುಬೀಳುತ್ತಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಪ್ರಸ್ತಾಪ ಆಯಿತು. ಅದಕ್ಕೆ 'ಟೀಮ್ ಕಂಗನಾ ರಣಾವತ್' ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಡಕ್ ಪ್ರತಿಕ್ರಿಯೆ ನೀಡಲಾಗಿದೆ. 'ರಣಬೀರ್ ಕಪೂರ್ ಪದೇ ಪದೇ ಹುಡುಗಿಯರನ್ನು ವಶಪಡಿಸಿಕೊಳ್ಳುವ ವ್ಯಕ್ತಿ. ಆದರೆ ಅವರನ್ನು ಯಾರೂ ಕೂಡ ರೇಪಿಸ್ಟ್ ಎಂದು ಕರೆಯುವುದಿಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಬಾಲಿವುಡ್ನಲ್ಲಿ ಇರುವ ತಾರತಮ್ಯ ನೀತಿ ಬಗ್ಗೆ ಕಂಗನಾ ರಣಾವತ್ ತಂಡ ಕಿಡಿಕಾರಿದೆ.
ಅದೇ ರೀತಿ ದೀಪಿಕಾ ಪಡುಕೋಣೆ ಬಗ್ಗೆಯೂ ಇದೇ ಟ್ವಿಟರ್ ಖಾತೆಯಲ್ಲಿ ಕಟು ಟೀಕೆ ಮಾಡಲಾಗಿದೆ. 'ದೀಪಿಕಾ ಸ್ವಯಂ ಘೋಷಿತ ಮಾನಸಿಕ ರೋಗಿ. ಆದರೆ ಆಕೆಯನ್ನು ಯಾರೂ ಸೈಕೋ ಅಥವಾ ಮಾಟಗಾತಿ ಎಂದು ಕರೆಯುವುದಿಲ್ಲ. ಕೇವಲ ಇಂಥ ಮಾತುಗಳನ್ನೆಲ್ಲ ಔಟ್ಸೈಡರ್ಗಳಿಗೆ ಹೇಳಲಾಗುತ್ತದೆ' ಎಂದು ಕಂಗನಾ ಕುಟುಕಿದ್ದಾರೆ. ಇತ್ತೀಚೆಗೆ ಅವರು ನಟಿಯರಾದ ಸ್ವರಾ ಭಾಸ್ಕರ್, ತಾಪ್ಸೀ ಪನ್ನು ಮುಂತಾದವರ ವಿರುದ್ಧವೂ ಹೇಳಿಕೆ ನೀಡಿದ್ದರು.
also read: ಸುಶಾಂತ್ ಕೊಲೆಯಾಗಿದ್ದು ನಿಮ್ಮಂಥವರ ವರ್ತನೆಯಿಂದಲೇ! ಕರೀನಾ ವಿರುದ್ಧ ಕಂಗನಾ ಟೀಮ್ ಕಿಡಿ!
ಬಾಲಿವುಡ್ನಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ನಟ ಆಯುಷ್ಮಾನ್ ಖುರಾನಾ ಕುರಿತಾಗಿಯೂ 'ಟೀಮ್ ಕಂಗನಾ ರಣಾವತ್' ಟ್ವಿಟರ್ ಖಾತೆಯಲ್ಲಿ ಆರೋಪ ಹೊರಿಸಲಾಗಿದೆ. 'ಆಯುಷ್ಮಾನ್ ಒಬ್ಬ ಅವಕಾಶವಾದಿ. ಬಾಲಿವುಡ್ನಲ್ಲಿ ಇರುವ ಮಾಫಿಯಾವನ್ನು ಇಂಥವರು ಬೆಂಬಲಿಸುತ್ತಾರೆ. ಯಾಕೆಂದರೆ ಅದರಿಂದ ಅವರಿಗೆ ಅನುಕೂಲ ಆಗುತ್ತದೆ' ಎಂದು ಕಂಗನಾ ಗುಡುಗಿದ್ದಾರೆ. ಈ ಎಲ್ಲ ಕಾಮೆಂಟ್ಗಳಿಗೆ ದೀಪಿಕಾ, ರಣಬೀರ್ ಮತ್ತು ಆಯುಷ್ಮಾನ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಮನೆ ಮಾಡಿದೆ.
also read: ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡಲು ಮುಂದಾದ ನಟಿ ಕಂಗನಾ! ಇದಕ್ಕೆ ಕಾರಣ ಸುಶಾಂತ್ ಪ್ರಕರಣ!
ನೆಪೋಟಿಸಂ ವಿಷಯ ಬಂದಾಗಲೆಲ್ಲ ಕಂಗನಾ ರಣಾವತ್ ಉರಿದುಬೀಳುತ್ತಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಪ್ರಸ್ತಾಪ ಆಯಿತು. ಅದಕ್ಕೆ 'ಟೀಮ್ ಕಂಗನಾ ರಣಾವತ್' ಅಧಿಕೃತ ಟ್ವಿಟರ್ ಖಾತೆಯಲ್ಲಿ ಖಡಕ್ ಪ್ರತಿಕ್ರಿಯೆ ನೀಡಲಾಗಿದೆ. 'ರಣಬೀರ್ ಕಪೂರ್ ಪದೇ ಪದೇ ಹುಡುಗಿಯರನ್ನು ವಶಪಡಿಸಿಕೊಳ್ಳುವ ವ್ಯಕ್ತಿ. ಆದರೆ ಅವರನ್ನು ಯಾರೂ ಕೂಡ ರೇಪಿಸ್ಟ್ ಎಂದು ಕರೆಯುವುದಿಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಬಾಲಿವುಡ್ನಲ್ಲಿ ಇರುವ ತಾರತಮ್ಯ ನೀತಿ ಬಗ್ಗೆ ಕಂಗನಾ ರಣಾವತ್ ತಂಡ ಕಿಡಿಕಾರಿದೆ.
ಅದೇ ರೀತಿ ದೀಪಿಕಾ ಪಡುಕೋಣೆ ಬಗ್ಗೆಯೂ ಇದೇ ಟ್ವಿಟರ್ ಖಾತೆಯಲ್ಲಿ ಕಟು ಟೀಕೆ ಮಾಡಲಾಗಿದೆ. 'ದೀಪಿಕಾ ಸ್ವಯಂ ಘೋಷಿತ ಮಾನಸಿಕ ರೋಗಿ. ಆದರೆ ಆಕೆಯನ್ನು ಯಾರೂ ಸೈಕೋ ಅಥವಾ ಮಾಟಗಾತಿ ಎಂದು ಕರೆಯುವುದಿಲ್ಲ. ಕೇವಲ ಇಂಥ ಮಾತುಗಳನ್ನೆಲ್ಲ ಔಟ್ಸೈಡರ್ಗಳಿಗೆ ಹೇಳಲಾಗುತ್ತದೆ' ಎಂದು ಕಂಗನಾ ಕುಟುಕಿದ್ದಾರೆ. ಇತ್ತೀಚೆಗೆ ಅವರು ನಟಿಯರಾದ ಸ್ವರಾ ಭಾಸ್ಕರ್, ತಾಪ್ಸೀ ಪನ್ನು ಮುಂತಾದವರ ವಿರುದ್ಧವೂ ಹೇಳಿಕೆ ನೀಡಿದ್ದರು.
also read: ಸುಶಾಂತ್ ಕೊಲೆಯಾಗಿದ್ದು ನಿಮ್ಮಂಥವರ ವರ್ತನೆಯಿಂದಲೇ! ಕರೀನಾ ವಿರುದ್ಧ ಕಂಗನಾ ಟೀಮ್ ಕಿಡಿ!
ಬಾಲಿವುಡ್ನಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ನಟ ಆಯುಷ್ಮಾನ್ ಖುರಾನಾ ಕುರಿತಾಗಿಯೂ 'ಟೀಮ್ ಕಂಗನಾ ರಣಾವತ್' ಟ್ವಿಟರ್ ಖಾತೆಯಲ್ಲಿ ಆರೋಪ ಹೊರಿಸಲಾಗಿದೆ. 'ಆಯುಷ್ಮಾನ್ ಒಬ್ಬ ಅವಕಾಶವಾದಿ. ಬಾಲಿವುಡ್ನಲ್ಲಿ ಇರುವ ಮಾಫಿಯಾವನ್ನು ಇಂಥವರು ಬೆಂಬಲಿಸುತ್ತಾರೆ. ಯಾಕೆಂದರೆ ಅದರಿಂದ ಅವರಿಗೆ ಅನುಕೂಲ ಆಗುತ್ತದೆ' ಎಂದು ಕಂಗನಾ ಗುಡುಗಿದ್ದಾರೆ. ಈ ಎಲ್ಲ ಕಾಮೆಂಟ್ಗಳಿಗೆ ದೀಪಿಕಾ, ರಣಬೀರ್ ಮತ್ತು ಆಯುಷ್ಮಾನ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಮನೆ ಮಾಡಿದೆ.
also read: ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡಲು ಮುಂದಾದ ನಟಿ ಕಂಗನಾ! ಇದಕ್ಕೆ ಕಾರಣ ಸುಶಾಂತ್ ಪ್ರಕರಣ!