ಆ್ಯಪ್ನಗರ

ಬಚ್ಚನ್ ಕುಟುಂಬದಲ್ಲಿ ಕಂದಕ

ಬಾಲಿವುಡ್‌ನ ದೊಡ್ಮೆನ ಎಂದೇ ಕರೆಯಲ್ಪಡುವ ಬಚ್ಚನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಜೋರಾಗಿದೆ ಎಂಬ ಸುದ್ದಿಗಳು ದಟ್ಟವಾಗಿ ಹಬ್ಬುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಘಟನೆಗಳು ಇತ್ತಿಚೆಗೆ ನಡೆಯುತ್ತಿವೆ.

Vijaya Karnataka Web 15 Nov 2016, 4:00 am
ಬಾಲಿವುಡ್‌ನ ದೊಡ್ಮೆನ ಎಂದೇ ಕರೆಯಲ್ಪಡುವ ಬಚ್ಚನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಜೋರಾಗಿದೆ ಎಂಬ ಸುದ್ದಿಗಳು ದಟ್ಟವಾಗಿ ಹಬ್ಬುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಘಟನೆಗಳು ಇತ್ತಿಚೆಗೆ ನಡೆಯುತ್ತಿವೆ. ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಇತ್ತೀಚೆಗೆ ಅಬು ಜಾನಿ ಮತ್ತು ಸಂದೀಪ್ ಕೋಸ್ಲಾ ಅವರು ಏರ್ಪಡಿಸಿದ್ದ ಒಂದು ಫ್ಯಾಷನ್ ಷೋದಲ್ಲಿ ರ‌್ಯಾಂಪ್ ವಾಕ್ ಮಾಡಿದ್ದರು. ಈ ರ‌್ಯಾಂಪ್ ಶೋಗೆ ಅಮಿತಾಭ್ ಮತ್ತು ಜಯಾ ಬಚ್ಚನ್ ಬಂದಿದ್ದರು. ಆದರೆ ಐಶ್ವರ್ಯಾ ಅವರ ಅನುಪಸ್ಥಿತಿ ಕಾಡುತ್ತಿತ್ತು. ಇದಕ್ಕೆಲ್ಲ ಮುಖ್ಯ ಕಾರಣ ‘ಎ ದಿಲ್ ಹೈ ಮುಷ್ಕಿಲ್’ ಸಿನಿಮಾ ಎನ್ನಲಾಗುತ್ತಿದೆ.
Vijaya Karnataka Web trench in bachchan family
ಬಚ್ಚನ್ ಕುಟುಂಬದಲ್ಲಿ ಕಂದಕ


ಈ ಸಿನಿಮಾದಲ್ಲಿ ಐಶ್ವರ್ಯಾ ಮತ್ತು ರಣ್‌ಬೀರ್ ಕಪೂರ್ ನಡುವಿನ ಕೆಲ ಸೀನ್‌ಗಳಿಂದಾಗಿ ಅಮಿತಾಭ್ ಬೇಸರಗೊಂಡಿದ್ದರು. ಈ ಸಿನಿಮಾದ ಒಂದು ವಿಶೇಷ ಪ್ರದರ್ಶನವನ್ನು ಬಚ್ಚನ್ ಕುಟುಂಬಕ್ಕಾಗಿಯೇ ನಿರ್ಮಾಪಕ ಕರಣ್ ಜೋಹರ್ ಏರ್ಪಡಿಸಿದ್ದರು. ಆದರೆ ಆ ಪ್ರದರ್ಶನಕ್ಕೆ ಬಚ್ಚನ್ ಕುಟುಂಬದಿಂದ ಯಾರೂ ಬಂದಿರಲಿಲ್ಲವಂತೆ. ಅಷ್ಟೇ ಅಲ್ಲದೆ ಈ ಸಿನಿಮಾದ ಬಗ್ಗೆ ಐಶ್ವರ್ಯಾ ಅವರ ಪತಿ ಅಭಿಷೇಕ್ ಬಚ್ಚನ್ ಸಹ ಎ ದಿಲ್ ಹೈ ಮುಷ್ಕಿಲ್ ಸಿನಿಮಾಗ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಚಾರ ಮಾಡುವುದಾಗಲಿ ಮಾಡಲಿಲ್ಲ. ಇವೆಲ್ಲವನ್ನು ಗಮನಿಸಿದರೆ ಕುಟುಂಬದ ಮಧ್ಯೆ ಏನೋ ನಡೆಯುತ್ತಿದೆ ಎಂದು ಬಿಟೌನ್‌ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌