ಆ್ಯಪ್ನಗರ

ಅಮಿತಾಭ್ ಬಚ್ಚನ್ ವೈರಲ್ ಫೋಟೋ ಸುದ್ದಿಯ ಸತ್ಯಾಂಶ

ಶೀತಲ್ ಜೈನ್ ಅಂತ್ಯಕ್ರಿಯೆಯಲ್ಲಿ ಅಮಿತಾಭ್ ಮಗ ಅಭಿಷೇಕ್ ಮತ್ತು ಸೊಸೆ ಐಶ್ವರ್ಯ ರೈ ಸೇರಿದಂತೆ ಸಂಪೂರ್ಣ ಕುಟುಂಬ ಭಾಗಿಯಾಗಿತ್ತು. ಆಗ ಅಮಿತಾಭ್ ಮತ್ತು ಅಭಿಷೇಕ್ ಅವರು ಶೀತಲ್ ಜೈನ್ ಅವರ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಹಾಗೂ ಸಂಪ್ರದಾಯದಂತೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮಾನವೀಯತೆ ಮೆರೆದಿದ್ದರು.

Vijaya Karnataka Web 26 Jun 2019, 10:30 pm
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ವ್ಯಕ್ತಿಯೊಬ್ಬರ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಹೋಗುತ್ತಿರುವ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. 'ಅಮಿತಾಭ್ ಮನೆಯ ಕೆಲಸದವನು ಸತ್ತು ಹೋಗಿದ್ದು, ಅಮಿತಾಭ್ ಬಚ್ಚನ್ ಮತ್ತು ಕುಟುಂಬ ಅವರ ಪಾರ್ಥಿವ ಶರೀರವನ್ನು ಹೊತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ' ಎಂದು ಬಿಂಬಿತವಾಗಿದೆ.
Vijaya Karnataka Web amitabh2606


ಆದರೆ, ಈ ಸುದ್ದಿಯ ಸತ್ಯಾಂಶ ಬೇರೆಯೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಅಸಲಿಯೇ ಆಗಿದೆ. ಆದರೆ ಆ ಫೋಟೋಕ್ಕೆ ಕೊಡುತ್ತಿರುವ ಅರ್ಥ ಮತ್ತು ಸುದ್ದಿಯಲ್ಲಿ ಸ್ವಲ್ಪ ಟ್ವಿಸ್ಟ್ ಆಗಿದೆ. ಕಾರಣ, ಈ ತಿಂಗಳು ಮೊದಲ ವಾರದಲ್ಲಿ ಅಮಿತಾಭ್ ಬಚ್ಚನ್ ಮ್ಯಾನೇಜರ್ ಶೀತಲ್ ಜೈನ್ ಅವರು ಅನಾರೋಗ್ಯದ ಕಾರಣದಿಂದ ವಿಧಿವಶರಾಗಿದ್ದರು. ಅವರು ಅಮಿತಾಭ್ ಅವರ ವ್ಯವಹಾರಗಳನ್ನು ಕಳೆದ 40 ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು.

ಶೀತಲ್ ಜೈನ್ ಅಂತ್ಯಕ್ರಿಯೆಯಲ್ಲಿ ಅಮಿತಾಭ್, ಮಗ ಅಭಿಷೇಕ್ ಮತ್ತು ಸೊಸೆ ಐಶ್ವರ್ಯ ರೈ ಸೇರಿದಂತೆ ಸಂಪೂರ್ಣ ಕುಟುಂಬ ಭಾಗಿಯಾಗಿತ್ತು. ಆಗ ಅಮಿತಾಭ್ ಮತ್ತು ಅಭಿಷೇಕ್ ಅವರು ಶೀತಲ್ ಜೈನ್ ಅವರ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಹಾಗೂ ಸಂಪ್ರದಾಯದಂತೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮಾನವೀಯತೆ ಮೆರೆದಿದ್ದರು. ಆದರೆ ಅದೇ ಫೋಟೋವೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಪ್ರತ್ಯಕ್ಷವಾಗಿ ಹರಿದಾಡುತ್ತಿದ್ದು, ಸುದ್ದಿಯನ್ನು ಮಾತ್ರ ತಿರುಚಲಾಗುತ್ತಿದೆ.

ಅಮಿತಾಭ್ ಬಚ್ಚನ್ ಮ್ಯಾನೇಜರ್ ಆಗಿದ್ದ ಶೀತಲ್ ಜೈನ್ ಈ ತಿಂಗಳು ಮೊದಲ ವಾರದಲ್ಲಿ ಅನಾರೋಗ್ಯದಿಂದ ತೀರಿಕೊಂಡಾಗ ಸ್ವತಃ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪಾರ್ಥಿವ ಶರೀರವನ್ನು ಕೈಯಲ್ಲಿ ಹಿಡಿದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವುದು ಸತ್ಯವೇ ಆಗಿದೆ. ಅಷ್ಟೇ ಅಲ್ಲ, ಅಮಿತಾಭ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ "ನನ್ನ ಜವಾಬ್ದಾರಿಗಳನ್ನು ಹೊತ್ತ ವ್ಯಕ್ತಿ ಇನ್ನಿಲ್ಲ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

"ಸುಮಾರು 40 ವರ್ಷಗಳ ಕಾಲ ಪ್ರಾಮಾಣಿಕವಾಗಿ ನನ್ನ ವೃತ್ತಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಶೀತಲ್ ತನ್ನ ಭುಜದ ಮೇಲೆ ಹೊತ್ತರು. ಈಗ ಅವರ ಪಾರ್ಥಿವ ಶರೀರವನ್ನು ನಾನು ಹೊರುತ್ತಿದ್ದೇನೆ. ನನ್ನ ಕಷ್ಟ ಸುಖಗಳನ್ನು ಶೀತಲ್ ಸಮನಾಗಿ ಹಂಚಿಕೊಂಡಿದ್ದಾರೆ. ಈಗ ಅವರ 40 ವರ್ಷಗಳ ಜೀವನ ನನ್ನ ಕಣ್ಣ ಮುಂದೆ ಸಾಗುತ್ತಿದೆ" ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ.

"ಮನೆಯಲ್ಲಿನ ವ್ಯಕ್ತಿ ಹೊರಟು ಹೋದಂತಿದೆ. ವೃತ್ತಿ ಪರವಾಗಿ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯ ಸಮಸ್ಯೆಗಳೂ ಬಾರದಂತೆ ನೋಡಿಕೊಂಡರು. ನಾನು ಮಾಡಬೇಕಾದ ಸಿನಿಮಾಗಳು, ಪಾಲ್ಗೊಳ್ಳಬೇಕಾಗಿದ್ದ ಮುಖ್ಯ ಕಾರ್ಯಕ್ರಮಗಳನ್ನೆಲ್ಲಾ ಹತ್ತಿರ ಇದ್ದು ನೋಡಿಕೊಳ್ಳುತ್ತಿದ್ದರು" ಎಂದು ಅಮಿತಾಭ್ ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌