ಆ್ಯಪ್ನಗರ

ಪರಮವೀರ ಚಕ್ರ ಪುರಸ್ಕೃತ ಸೈನಿಕನ ಬಯೋಪಿಕ್‌ನಲ್ಲಿ ವರುಣ್‌ ಧವನ್‌

ಪರಮವೀರ ಚಕ್ರ ಗೌರವ ಪಡೆದ ಭಾರತದ ಅತ್ಯಂತ ಕಿರಿಯ ಸೈನಿಕ ಅರುಣ್‌ ಖೇತರ್ಪಾಲ್‌ ಕುರಿತ ಬಯೋಪಿಕ್‌ನಲ್ಲಿ ವರುಣ್‌ ಧವನ್‌ ನಟಿಸಲಿದ್ದಾರೆ.

Vijaya Karnataka 13 Apr 2019, 2:14 pm
ಪರಮವೀರ ಚಕ್ರ ಗೌರವ ಪಡೆದ ಭಾರತದ ಅತ್ಯಂತ ಕಿರಿಯ ಸೈನಿಕ ಅರುಣ್‌ ಖೇತರ್ಪಾಲ್‌ ಕುರಿತ ಬಯೋಪಿಕ್‌ನಲ್ಲಿ ವರುಣ್‌ ಧವನ್‌ ನಟಿಸಲಿದ್ದಾರೆ. 1971ರಲ್ಲಿ ನಡೆದ ಭಾರತ-ಪಾಕ್‌ ಯುದ್ಧದಲ್ಲಿ ಬಸಂತರ್‌ ಕದನದ ವೇಳೆ ಕೇವಲ 21 ವರ್ಷದ ಅರುಣ್‌ ಖೇತರ್ಪಾಲ್‌ ಅವರು ತಾವೊಬ್ಬರೇ ಪಾಕಿಸ್ತಾನದ ಏಳು ಟ್ಯಾಂಕ್‌ಗಳನ್ನು ಧ್ವಂಸಗೊಳಿಸಿ ಹುತಾತ್ಮರಾಗಿದ್ದರು. ಅವರ ಜೀವನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ಅಂಧಾಧುನ್‌ ಮತ್ತು ಬದ್ಲಾಪುರ್‌ ಸಿನಿಮಾ ಖ್ಯಾತಿಯ ನಿರ್ಮಾಪಕ ಶ್ರೀರಾಮ್‌ ರಾಘವನ್‌ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
Vijaya Karnataka Web varun


ಅರುಣ್‌ ಖೇತರ್ಪಾಲ್‌ ಪಾತ್ರಕ್ಕೆ ನಿರ್ದೇಶಕರು ಈಗಾಗಲೇ ವರುಣ್‌ ಧವನ್‌ ಸಂಪರ್ಕಿಸಿದ್ದಾರೆ. ಈ ಚಿತ್ರಕ್ಕೆ ಎಕ್ಕೀಸ್‌ ಎಂಬ ಟೈಟಲ್‌ ಇಡಲಾಗಿದ್ದು, ಇದನ್ನು ದಿನೇಶ್‌ ವಿಜನ್‌ ನಿರ್ಮಿಸುತ್ತಿದ್ದಾರೆ. ಬದ್ಲಾಪುರ್‌ ಸಿನಿಮಾದಲ್ಲಿ ವರುಣ್‌ ಧವನ್‌ ನಟನೆಯಿಂದ ಇಂಪ್ರೆಸ್‌ ಆಗಿರುವ ಶ್ರೀರಾಮ್‌ ರಾಘವನ್‌ ಅವರು ಅರುಣ್‌ ಬಯೋಪಿಕ್‌ಗೆ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿರುವ ಕಳಂಕ್ ಸಿನಿಮಾದಲ್ಲೂ ವರುಣ್ ಧವನ್ ಅಭಿನಯಿಸಿದ್ದಾರೆ. ಅಭಿಷೇಕ್ ವರ್ಮನ್ ನಿರ್ದೇಶನದ ಸಿನಿಮಾ ಇದು. ಕರಣ್ ಜೋಹರ್, ಸಜಿದ್ ನಡಿಯಾವಾಲಾ, ಹಿರೂ ಯಶ್ ಜೋಹರ್, ಅಪೂರ್ವ ಮೆಹತಾ ನಿರ್ಮಾಣದ ಸಿನಿಮಾ ಇದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌