ಆ್ಯಪ್ನಗರ

ಹಿರಿಯ ಗೀತಸಾಹಿತಿ ಯೋಗೇಶ್‌ ಗೌರ್‌ ನಿಧನ! ಕಂಬನಿ ಮಿಡಿದ ಗಾಯಕಿ ಲತಾ ಮಂಗೇಶ್ಕರ್‌

ಬಾಲಿವುಡ್‌ನಲ್ಲಿ ಹಲವು ಜನಪ್ರಿಯ ಹಾಡುಗಳಿಗೆ ಸಾಹಿತ್ಯ ಬರೆದಿದ್ದ ಗೀತ ರಚನಾಕಾರ ಯೋಗೇಶ್‌ ಗೌರ್‌ ಶುಕ್ರವಾರ (ಮೇ 29) ನಿಧನರಾದರು. ಅವರ ಅಗಲಿಕೆಗೆ ಹಿಂದಿ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

Vijaya Karnataka Web 29 May 2020, 8:40 pm
'ಕಹೀ ದೂರ್‌ ಜಬ್‌ ದಿನ್ ಡಲ್‌ ಜಾಯೆ...' ಮುಂತಾದ ಹಿಟ್‌ ಗೀತೆಗಳಿಗೆ ಸಾಹಿತ್ಯ ಬರೆಯುವ ಮೂಲಕ ಜನಪ್ರಿಯರಾಗಿದ್ದ ಬಾಲಿವುಡ್‌ನ ಹಿರಿಯ ಚಿತ್ರಸಾಹಿತಿ ಯೋಗೇಶ್‌ ಗೌರ್‌ ಶುಕ್ರವಾರ (ಮೇ 29) ಕೊನೆಯುಸಿರೆಳೆದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಹಲವು ಧಾರಾವಾಹಿಗಳಿಗೂ ಅವರು ಬರಹಗಾರರಾಗಿ ಕೆಲಸ ಮಾಡಿದ್ದರು.
Vijaya Karnataka Web ಯೋಗೇಶ್‌ ಗೌರ್‌ ನಿಧನ


ಯೋಗೇಶ್‌ ಅಗಲಿಕೆಯ ಸುದ್ದಿ ತಿಳಿದು ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್‌ ಕಂಬನಿ ಮಿಡಿದಿದ್ದಾರೆ. 'ಅನೇಕ ಹೃದಯಸ್ಪರ್ಶಿ ಗೀತೆಗಳನ್ನು ಯೋಗೇಶ್‌ ಬರೆದಿದ್ದರು. ಅವರ ನಿಧನದ ವಿಷಯ ಈಗಷ್ಟೇ ತಿಳಿಯಿತು. ಅವರು ತುಂಬ ಶಾಂತ ಸ್ವಭಾವದ ವ್ಯಕ್ತಿ ಆಗಿದ್ದರು. ಅವರು ಬರೆದ ಅನೇಕ ಹಾಡುಗಳಿಗೆ ನಾನು ಧ್ವನಿ ನೀಡಿದ್ದೇನೆ. ಅವರಿಗೆ ನನ್ನ ಅಂತಿಮ ನಮನ' ಎಂದು ಲತಾ ಮಂಗೇಶ್ಕರ್‌ ಟ್ವೀಟ್‌ ಮಾಡಿದ್ದಾರೆ.

1960 ಮತ್ತು 70ರ ದಶಕದಲ್ಲಿ ಯೋಗೇಶ್‌ ಬೇಡಿಕೆಯ ಗೀತರಚನಾಕಾರ ಆಗಿದ್ದರು. 'ಸಖಿ ರಾಬಿನ್‌', 'ಚೋಟಿ ಸಿ ಬಾತ್‌', 'ಬಾತೋ ಬಾರೋ ಮೆ', 'ಮನ್‌ಜಿಲ್‌', 'ಆನಂದ್‌' ಮುಂತಾದ ಸಿನಿಮಾಗಳಿಗೆ ಅವರು ಹಾಡು ಬರೆದಿದ್ದರು. ರಿಷಿಕೇಶ್‌ ಮುಖರ್ಜಿ, ಬಸು ಚಟರ್ಜಿ ಮುಂತಾದ ಖ್ಯಾತ ನಿರ್ದೇಶಕರ ಜೊತೆ ಯೋಗೇಶ್‌ ಕೆಲಸ ಮಾಡಿದ್ದರು.

'ನಿಜ ಜೀವನದ ಘಟನೆಗಳಿಂದಲೇ ಸ್ಫೂರ್ತಿಗೊಂಡು ನಾನು ಸಾಹಿತ್ಯ ಬರೆಯುತ್ತೇನೆ. ನನ್ನ ಕಣ್ಣಿಗೆ ಕಂಡಿದ್ದು ಮತ್ತು ನಾನು ಜೀವಿಸಿದ್ದನ್ನು ಆಧರಿಸಿ ಬರೆಯುತ್ತೇನೆ' ಎಂದು ಯೋಗೇಶ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಯೋಗೇಶ್‌ ನಿಧನಕ್ಕೆ ಲತಾ ಮಂಗೇಶ್ಕರ್‌ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌