ಆ್ಯಪ್ನಗರ

ಫಾರೆಸ್ಟ್ ಆಫೀಸರ್ ಅವತಾರ ಎತ್ತಲಿರುವ ನಟಿ ವಿದ್ಯಾ ಬಾಲನ್

ಈ ಚಿತ್ರದ ಕಾನ್ಸೆಪ್ಟ್‌ ವಿದ್ಯಾರಿಗೆ ಇಷ್ಟವಾಯಿತಂತೆ. ಇಂಥ ಪಾತ್ರವನ್ನು ಅವರು ಈ ಹಿಂದೆ ಮಾಡಿಲ್ಲ. ಅದಕ್ಕಾಗಿ ಅವರು ಒಪ್ಪಿಕೊಂಡರು ಎಂದು ಮೂಲವೊಂದು ತಿಳಿಸಿದೆ. 2018ರಲ್ಲಿ ಮಹಾರಾಷ್ಟ್ರದ ಯವತ್ನಾಳ್‌ನಲ್ಲಿ13 ಜನರನ್ನು ಕೊಂದಿದೆ ಎನ್ನಲಾದ ಅವ್ನಿ ಎಂಬ ಹೆಣ್ಣು ಹುಲಿಯನ್ನು ಕೊಂದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು.

Vijaya Karnataka 20 Jan 2020, 1:43 pm

ಬಾಲಿವುಡ್ ನಟಿ ವಿದ್ಯಾ ಬಾಲನ್ ವೈವಿಧ್ಯಮಯ ಪಾತ್ರಗಳನ್ನು ಪೋಷಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದವರು. ತಮ್ಮ ಪವರ್‌ಫುಲ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಖ್ಯಾತ ಗಣಿತಜ್ಞೆ, ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾ ಬಳಿಕ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ವಿದ್ಯಾ ಬಾಲನ್.
Vijaya Karnataka Web ವಿದ್ಯಾ ಬಾಲನ್


ಹೆಣ್ಣು ಹುಲಿ ಅವ್ನಿಯನ್ನು ಗುಂಡಿಟ್ಟು ಕೊಂದ ಪ್ರಕರಣದ ಕಥೆಯಿರುವ ಸಿನಿಮಾವೊಂದರಲ್ಲಿ ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ಫಾರೆಸ್ಟ್‌ ಆಫೀಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಮುಖ್ಯ ಭೂಮಿಕೆಗೆ ಸ್ಟ್ರಾಂಗ್‌ ಆಗಿರುವ ಮತ್ತು ಅದ್ಭುತ ನಟನಾ ಕೌಶಲ್ಯವಿರುವ ನಟಿಯೊಬ್ಬರು ಬೇಕಿತ್ತು. ಅದಕ್ಕಾಗಿ ಚಿತ್ರತಂಡವು ವಿದ್ಯಾ ಬಾಲನ್‌ರನ್ನು ಸಂಪರ್ಕಿಸಿ ಈ ಸಿನಿಮಾದ ಆಫರ್‌ ನೀಡಿದೆ.

ಈ ಚಿತ್ರದ ಕಾನ್ಸೆಪ್ಟ್‌ ವಿದ್ಯಾರಿಗೆ ಇಷ್ಟವಾಯಿತಂತೆ. ಇಂಥ ಪಾತ್ರವನ್ನು ಅವರು ಈ ಹಿಂದೆ ಮಾಡಿಲ್ಲ. ಅದಕ್ಕಾಗಿ ಅವರು ಒಪ್ಪಿಕೊಂಡರು ಎಂದು ಮೂಲವೊಂದು ತಿಳಿಸಿದೆ. 2018ರಲ್ಲಿ ಮಹಾರಾಷ್ಟ್ರದ ಯವತ್ನಾಳ್‌ನಲ್ಲಿ13 ಜನರನ್ನು ಕೊಂದಿದೆ ಎನ್ನಲಾದ ಅವ್ನಿ ಎಂಬ ಹೆಣ್ಣು ಹುಲಿಯನ್ನು ಕೊಂದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು.

ವೀಡಿಯೊದಲ್ಲಿ ಕಣ್ಣೀರಿಟ್ಟ ನಟಿ ವಿದ್ಯಾ ಬಾಲನ್

ಈ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಸರ್ಕಾರದ ಆದೇಶಕ್ಕೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆ ಹುಲಿಯ ಸಿಟ್ಟನ್ನು ಶಮನ ಮಾಡುವ ಅಥವಾ ಅದನ್ನು ಜೀವಂತವಾಗಿ ಸೆರೆ ಹಿಡಿಯುವ ಪ್ರಯತ್ನ ಮಾಡದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅವ್ನಿಯನ್ನು ಕೊಲ್ಲಲಾಗಿದೆ ಎಂಬ ದೂರು ಕೇಳಿ ಬಂದಿತ್ತು. ಈ ಕಥೆಯಿರುವ ಪಾತ್ರದಲ್ಲಿಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ವಿದ್ಯಾ ಬಾಲನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯಾ ಬಾಲನ್ ಅಭಿನಯದ ಗಣಿತಶಾಸ್ತ್ರಜ್ಞೆ 'ಶಕುಂತಲಾದೇವಿ'

ಶಕುಂತಲಾ ದೇವಿ ಬಯೋಪಿಕ್ ನಿರ್ಮಾಣ ಸಂಸ್ಥೆಯೇ ಈ ಚಿತ್ರವನ್ನೂ ನಿರ್ಮಿಸಲಿದೆ. ಈ ಹಿಂದೆಂದೂ ವಿದ್ಯಾ ಬಾಲನ್ ಈ ರೀತಿಯ ಪಾತ್ರವನ್ನು ಪೋಷಿಸಿಲ್ಲ. ಮುಂದಿನ ಎರಡು ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಕುರಿತಾದ ಸಿನಿಮಾ ಮುಗಿದ ಕೂಡಲೆ ಈ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌