ಆ್ಯಪ್ನಗರ

ಹಾವು ಏಣಿ ಆಟದಲ್ಲಿ ಬೆಳೆದು ಬಂದ ವಿಜಯ್ ದೇವರಕೊಂಡ

ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. "ಚಿತ್ರರಂಗದಲ್ಲಿ ಸಕ್ಸಸ್ ಪಡೆಯಲು ಲಕ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸದಲ್ಲಿನ ಶ್ರದ್ಧೆ ಮತ್ತು ಫ್ಯಾಶನ್ ಕೆಲಸ ಮಾಡಬಲ್ಲದು. ನಾನು ಲಕ್‌ಗಿಂತ ಹೆಚ್ಚಾಗಿ ಕೆಲಸ ಬಗ್ಗೆ ಗಮನ ಹರಿಸುತ್ತೇನೆ" ಎಂದಿದ್ದಾರೆ.

TIMESOFINDIA.COM 28 Jan 2019, 4:21 pm
ತೆಲುಗು ನಟ ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದು ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಅನುಕಂಪದ ಅಲೆ ಎಬ್ಬಿಸಿದೆ. "ಚಿತ್ರರಂಗದಲ್ಲಿ ಸಕ್ಸಸ್ ಪಡೆಯಲು ಲಕ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸದಲ್ಲಿನ ಶ್ರದ್ಧೆ ಮತ್ತು ಫ್ಯಾಶನ್ ಕೆಲಸ ಮಾಡಬಲ್ಲದು. ನಾನು ಲಕ್‌ಗಿಂತ ಹೆಚ್ಚಾಗಿ ಕೆಲಸ ಬಗ್ಗೆ ಗಮನ ಹರಿಸುತ್ತೇನೆ" ಎಂದಿದ್ದಾರೆ.
Vijaya Karnataka Web Vijay-devarakonda28


ವಿಜಯ್ ತಂದೆ ಟೆಲಿವಿಷನ್ ಡೈರೆಕ್ಟರ್ ಆಗಿದ್ದರೂ ವಿಜಯ್ ಸಿನಿಮಾ ಜರ್ನಿ ಅಷ್ಟು ಸುಲಭವಾಗಿ ಕೈಗೂಡಲಿಲ್ಲ. ನಟಿ ಯಾಮಿ ಗೌತಮ್ ಜೊತೆ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ವಿಜಯ್ ತೆಲುಗು ಇಂಡಸ್ಟ್ರಿಯ ಗಮನವನ್ನು ತುಂಬಾ ನಿಧಾನವಾಗಿ ಸೆಳೆಯಬೇಕಾಯಿತು. ಪೋಷಕ ಪಾತ್ರದ ಮೂಲಕವೇ ಟಾಲಿವುಡ್ ಎಂಟ್ರಿ ಪಡೆದ ವಿಜಯ್ ದೇವರಕೊಂಡ ಆ ಮೂಲಕವೇ ಹೀರೋ ಛಾನ್ಸ್ ಗಿಟ್ಟಿಸಿಕೊಂಡವರು.

ತೆಲುಗು ಸಿನಿಮಾ ರಂಗದಲ್ಲಿ ಇಂದು ಸ್ಟಾರ್ ಲೆವೆಲ್‌ನಲ್ಲಿ ಮೆರೆಯುತ್ತಿರುವ ವಿಜಯ್ ದೇವರಕೊಂಡ, ಇಂದು ಇಡೀ ಭಾರತದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅವರು ಬೆಳೆದುಬಂದ ಹಾದಿ ಅಷ್ಟು ಸುಲಭದ್ದಲ್ಲ. ರವಿ ಬಾಬು ನಿರ್ದೇಶನದ 'ನುವ್ವಿಲಾ' ಚಿತ್ರದ ಮೂಲಕ 2011 ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಜಯ್ 2015ರಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ 'ಯೆವಡೆ ಸುಬ್ರಮಣ್ಯಂ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರು ಹಾಗೂ ಇಂಡಸ್ಟ್ರಿಯ ಗಮನ ಸೆಳೆಯುವಲ್ಲಿ ಸಫಲರಾದರು. ನಂತರ 2016 ರಲ್ಲಿ ಬಂದ ಸೂಪರ್ ಹಿಟ್ ರೊಮ್ಯಾಂಟಿಕ್ ಕಾಮಿಡಿ 'ಪೆಲ್ಲಿ ಚೂಪುಲು' ಮೂಲಕ ಹೀರೋ ಆಗಿ ಮಿಂಚಿದರು. ಈ ಚಿತ್ರವು ವರ್ಷದ ನ್ಯಾಷನಲ್ ಮತ್ತು ಫಿಲ್ಮ್‌ ಫೇರ್ ಅವಾರ್ಡ್ ಗಳಿಸಿ ವಿಜಯ್ ಮನೆಮಾತಾದರು.

ಅದರೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿ ವಿಜಯ್ ಗುರುತಿಸಿಕೊಳ್ಳಲು ನೆರವಾಗಿದ್ದು 2017ರಲ್ಲಿ ತೆರೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡ 'ಅರ್ಜುನ್ ರೆಡ್ಡಿ' ಚಿತ್ರ. ಈ ಚಿತ್ರವು ಇಡೀ ಭಾರತವೇ ಮೆಚ್ಚುವಂಥ ಕಮರ್ಷಿಯಲ್ ಸಿನಿಮಾ ಆಗಿ ಹೊರಹೊಮ್ಮಿ ಅರ್ಜುನ್ ರೆಡ್ಡಿ ರಾತ್ರೋ ರಾತ್ರಿ ದೊಡ್ಡ ಸ್ಟಾರ್ ಆಗಿಬಿಟ್ಟರು. ಅರ್ಜುನ್ ರೆಡ್ಡಿ ಮೂಲಕ ವಿಜಯ್ ಕೋಟ್ಯಾಂತರ ಫ್ಯಾನ್‌ಗಳನ್ನು ಪಡೆದರು. ಈಗ ವಿಜಯ್ ಹೆಸರಿನಲ್ಲಿ ಅದೆಷ್ಟೋ ಫ್ಯಾನ್ ಕ್ಲಬ್‌ಗಳು ಹುಟ್ಟಿಕೊಂಡಿದ್ದರೆ ಕಾರಣ ಅರ್ಜುನ್ ರೆಡ್ಡಿ ಎಂಬ ಸೂಪರ್ ಹಿಟ್ ತೆಲುಗು ಚಿತ್ರ ಎಂಬುದು ಸತ್ಯ.

ವಿಜಯ್ ನಂತರ ತೆಲುಗು ಇಂಡಸ್ಟ್ರಿಯಲ್ಲಿ ಖಾಲಿ ಕುಳಿತುಕೊಳ್ಳುವ ಪ್ರಸಣಗವೇ ಬರಲಿಲ್ಲ. ಒಂದಾದ ಮೇಲೆ ಇನ್ನೊಂದರಂತೆ ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್ ಇಂದು ತೆಲುಗಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕಳೆದ ವರ್ಷ, 2018ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಗೀತ ಗೋವಿಂದಂ', 'ಮಹಾನಟಿ' ಹಾಗೂ ಟ್ಯಾಕ್ಸಿವಾಲಾ ಚಿತ್ರಗಳು ವಿಜಯ್ ಅವರನ್ನು ಇನ್ನೂ ಒಂದು ಹಂತ ಮೇಲಕ್ಕೆ ತಂದು ನಿಲ್ಲಿಸಿದೆ. ಒಟ್ಟಿನಲ್ಲಿ, ಭಾರೀ ಕನಸುಗಳನ್ನು ಹೊತ್ತು ತೆಲುಗು ಇಂಡಸ್ಟ್ರಿಗೆ ಬಂದು ನಿಧಾನವಾಗಿ ಬೆಳೆದು ಬಿರುಗಾಳಿಯಂತೆ ಅಬ್ಬರಿಸಿ ನಿಂತಿರುವ ವಿಜಯ್ ದೇವರಕೊಂಡ ಎಂಬ ಪ್ರತಿಭಾವಂತ ನಟ ಭವಿಷ್ಯದಲ್ಲಿ ಚಿತ್ರಗಳ ಆಯ್ಕೆಯಲ್ಲಿ ಎಡವದಿದ್ದರೆ ತೆಲುಗು ವಿತ್ರರಂಗದ 'ನಂ1 ಪಟ್ಟ' ಗಿಟ್ಟಿಸಿಕೊಂಡರೆ ಆಶ್ಚರ್ಯವೇನೂ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌