ಆ್ಯಪ್ನಗರ

13 ವರ್ಷಗಳ ನಂತರ ಬೆಳ್ಳಿ ಪರದೆಗೆ ಮರಳಿದ ವಿಜಯಶಾಂತಿ

ತೆಲುಗು ಮತ್ತು ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲ್ಲಿ ಲೇಡಿ ಸೂಪರ್‌ಸ್ಟಾರ್‌ ಮತ್ತು ಲೇಡಿ ಅಮಿತಾಭ್‌ ಎಂದೇ ಹೆಸರಾಗಿದ್ದ ನಟಿ ವಿಜಯಶಾಂತಿ 13 ವರ್ಷಗಳ ನಂತರ ಮತ್ತೆ ...

Vijaya Karnataka 3 Jun 2019, 8:56 pm
ತೆಲುಗು ಮತ್ತು ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿ ಲೇಡಿ ಸೂಪರ್‌ಸ್ಟಾರ್‌ ಮತ್ತು ಲೇಡಿ ಅಮಿತಾಭ್‌ ಎಂದೇ ಹೆಸರಾಗಿದ್ದ ನಟಿ ವಿಜಯಶಾಂತಿ 13 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ವಾಪಾಸ್ಸಾಗಿದ್ದಾರೆ.
Vijaya Karnataka Web vijayashanti


2006ರಲ್ಲಿ ನಾಯುಡಮ್ಮ ಚಿತ್ರದ ನಂತರ ರಾಜಕೀಯ ಪ್ರವೇಶಿಸಿ, ನಟನೆಗೆ ವಿದಾಯ ಹೇಳಿದ್ದ ವಿಜಯ್‌ ಶಾಂತಿ ಕನ್ನಡದಲ್ಲಿಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಇದೀಗೆ ಮಹೇಶ್‌ ಬಾಬು ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸರಿಲೇರು ನೀಕೆವ್ವರು ಚಿತ್ರದಲ್ಲಿ ಡೈನಾಮಿಕ್‌ ರೋಲ್‌ ಒಂದನ್ನು ಮಾಡುತ್ತಿದ್ದಾರೆ ಎಂದು ನಿರ್ದೇಶಕ ಅನಿಲ್‌ ರಾವಿಪುಡಿ ತಿಳಿಸಿದ್ದಾರೆ.

1980ರಲ್ಲಿ ಸೂಪರ್‌ ಸ್ಟಾರ್‌ ಕೃಷ್ಣ ಅವರ ಕಿಲಾಡಿ ಕೃಷ್ಣ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ವಿಜಯ್‌ ಶಾಂತಿ ಇದೀಗ ಅವರ ಪುತ್ರ ಮಹೇಶ್‌ ಬಾಬು ನಟನೆಯ ಚಿತ್ರದ ಮೂಲಕ ಕಮ್‌ ಬ್ಯಾಕ್‌ ಆಗುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ನಿರ್ದೇಶಕರು ಇದೇ ಸಮಯದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌