ಆ್ಯಪ್ನಗರ

'ಮೈ ನೇಮ್ ಈಸ್ ಖಾನ್‌' ಬೆನ್ನಿಗೆ ನಿಂತವರು ಈಗ ಮೋದಿ ಬಯೋಪಿಕ್‌ಗೆ ಯಾಕಿಲ್ಲ: ಒಬೆರಾಯ್

ಪದ್ಮಾವತ್ ಸಿನಿಮಾಗೆ ತೊಡಕಾದಾಗ ಅದರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಜತೆ ಅಸಭ್ಯವಾಗಿ ವರ್ತಿಸಿದಾಗ ಚಿತ್ರರಂಗ ಒಂದಾಗಿತ್ತು. 'ಮೈ ನೇಮ್ ಈಸ್ ಖಾನ್‍' ಸಿನಿಮಾಗೆ ತೊಂದರೆಯಾದಾಗ ಎಲ್ಲರೂ ಮುಂದೆ ಬಂದಿದ್ದರು. ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಉಡ್ತಾ ಪಂಜಾಬ್ ರಿಲೀಸ್ ಆಗಿತ್ತು. ಇವರಿಗೆಲ್ಲಾ ಪ್ರಧಾನಿ ಮೋದಿ ಜತೆ ಸೆಲ್ಫಿ ತೆಗೆದುಕೊಳ್ಳಲು ಆಗುತ್ತದೆ, ಆದರೆ ಸಿನಿಮಾಗೆ ತೊಂದರೆ ಆದಾಗ ಮಾತ್ರ ಒಬ್ಬರೂ ಬಾಯಿಬಿಡಲ್ಲ ಎಂದಿದ್ದಾರೆ.

TIMESOFINDIA.COM 11 Apr 2019, 1:46 pm
ಬಾಲಿವುಡ್‌ ತಾರೆಗಳ ಬಗ್ಗೆ ನಟ ವಿವೇಕ್ ಒಬೆರಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬೆರಾಯ್ ಅಭಿನಯಿಸಿರುವ 'ಪಿಎಂ ನರೇಂದ್ರ ಮೋದಿ' ಸಿನಿಮಾ ಏಪ್ರಿಲ್ 6ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಬಿಡುಗಡೆ ಮುಂದೂಡಲ್ಪಟ್ಟಿದೆ. ಒಮಂಗ್ ಕುಮಾರ್ ನಿರ್ದೇಶನದ ಸಿನಿಮಾ ಇದು.

ಮೋದಿ ಬಯೋಪಿಕ್‍ಗೆ ಇಷ್ಟೆಲ್ಲಾ ಅಡ್ಡಿ ಆತಂಕಗಳು ಎದುರಾದರೂ ಯಾರೂ ತನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ವಿವೇಕ್ ಒಬೆರಾಯ್ ಬೇಸರ ವ್ಯಕ್ತಪಡಿಸಿದ್ದಾರೆ. "ಪ್ರಧಾನಿ ಜತೆ ಸೆಲ್ಫಿ ತೆಗೆದುಕೊಂಡರಷ್ಟೇ ಸಾಲದು (ಈ ಹಿಂದೆ ಹಲವಾರು ಮಂದಿ ತಾರೆಗಳು ಮೋದಿ ಜತೆಗೆ ಸೆಲ್ಫಿ ತೆಗೆದುಕೊಂಡಿರುವ ಘಟನೆಯನ್ನು ಉದ್ದೇಶಿಸಿ), ಸೆಲ್ಫಿ ತೆಗೆದುಕೊಳ್ಳುವುದು ತುಂಬಾ ಸುಲಭದ ಕೆಲಸ ಎಂದಿದ್ದಾರೆ.

ಪದ್ಮಾವತ್ ಸಿನಿಮಾಗೆ ತೊಡಕಾದಾಗ ಅದರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಜತೆ ಅಸಭ್ಯವಾಗಿ ವರ್ತಿಸಿದಾಗ ಚಿತ್ರರಂಗ ಒಂದಾಗಿತ್ತು. 'ಮೈ ನೇಮ್ ಈಸ್ ಖಾನ್‍' ಸಿನಿಮಾಗೆ ತೊಂದರೆಯಾದಾಗ ಎಲ್ಲರೂ ಮುಂದೆ ಬಂದಿದ್ದರು. ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಉಡ್ತಾ ಪಂಜಾಬ್ ರಿಲೀಸ್ ಆಗಿತ್ತು. ಇವರಿಗೆಲ್ಲಾ ಪ್ರಧಾನಿ ಮೋದಿ ಜತೆ ಸೆಲ್ಫಿ ತೆಗೆದುಕೊಳ್ಳಲು ಆಗುತ್ತದೆ, ಆದರೆ ಸಿನಿಮಾಗೆ ತೊಂದರೆ ಆದಾಗ ಮಾತ್ರ ಒಬ್ಬರೂ ಬಾಯಿಬಿಡಲ್ಲ ಎಂದಿದ್ದಾರೆ.

ಚಿತ್ರೋದ್ಯದಮಲ್ಲಿ ನಟ, ನಟಿಯರು ಒಬ್ಬರಿಗೊಬ್ಬರು ಸಹಕರಿಸಬೇಕು. ಸುಮಾರು 600ಕ್ಕೂ ಹೆಚ್ಚು ಕಲಾವಿದರು ಬಿಜೆಪಿ ವಿರುದ್ಧ ಮತಚಲಾಯಿಸಬೇಕು ಎಂಬ ಸಹಿ ಅಭಿಯಾನ ಆರಂಭಿಸಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಸಂಕಲ್ಪಿಸಿದ್ದಾರೆ. ಅವರೆಲ್ಲಾ ಕೈಜೋಡಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇ ರೀತಿ ಸಿನಿಮಾ ಒಂದಕ್ಕೆ ಏನಾದರೂ ಸಮಸ್ಯೆ ಬಂದಾಗ ನಾವು ಸಹ ಒಂದಾಗಬೇಕು. ಆದರೆ ಚಿತ್ರೋದ್ಯಮದಲ್ಲಿ ಒಗ್ಗಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಇವರೆಲ್ಲಾ (ಸಿನಿಮಾ ತಾರೆಗಳು) ಇತರೆ ವಿಚಾರಗಳ ಬಗ್ಗೆ ಧ್ವನಿಯೆತ್ತುತ್ತಾರೆ, ಆದರೆ ಸಿನಿಮಾಗೆ ಏನಾದರೂ ಸಮಸ್ಯೆ ಬಂದರೆ ಮಾತ್ರ ಬಾಯಿಬಿಡಲ್ಲ. ಮೋದಿ ಬಯೋಪಿಕ್ ಬೆಂಬಲಿಸಿ ಯಾರೊಬ್ಬರೂ ಒಂದೇ ಒಂದು ಮಾತು ಆಡಲಿಲ್ಲ. ಒಂದೇ ಒಂದು ಟ್ವೀಟ್ ಮಾಡಲಿಲ್ಲ. ಇದು ಒಳ್ಳೆಯದಲ್ಲ" ಎಂದು ಬೇಸರಿಸಿಕೊಂಡಿದ್ದಾರೆ ವಿವೇಕ್ ಒಬೆರಾಯ್.

ಮೋದಿ ಬಯೋಪಿಕ್ ಬಗ್ಗೆ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ಅಂತಹ ಚಿತ್ರಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಚಿತ್ರ ಬಿಡುಗಡೆಗೆ ಮೊದಲೇ ಆಯೋಗದ ನಿರ್ದೇಶನ ಹೊರಬಿದ್ದಿದೆ. ಮೊದಲ ಹಂತದ ಲೋಕಸಭಾ ಚುನಾವಣೆ ನಾಳೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಚಿತ್ರದ ಪ್ರದರ್ಶನವನ್ನು ಚುನಾವಣೆ ಮುಗಿಯುವ ವರೆಗೆ ಚುನಾವಣೆ ಆಯೋಗ ನಿಷೇಧಿಸಿದೆ. ಹೀಗಾಗಿ, ಚುನಾವಣೆ ಬಳಿಕವಷ್ಟೇ ಈ ಬಯೋಪಿಕ್ ಪ್ರದರ್ಶಿಸಲು ಅನುಮತಿ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌