ಆ್ಯಪ್ನಗರ

ದೀಪಿಕಾ ಮೂಗು ಕತ್ತರಿಸುತ್ತೇವೆ: ರಜಪೂತರು

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿರುವಾಗ, ಚಿತ್ರ ಬಿಡುಗಡೆಯಾಗದಂತೆ ರಜಪೂತರು ನಡೆಸುತ್ತಿರುವ ಪ್ರತಿಭಟನೆಯ ಕಾವೇರಿದೆ.

Vijaya Karnataka Web 16 Nov 2017, 3:22 pm
ದೀಪಿಕಾ ಪಡುಕೋಣೆ ಅಭಿನಯದ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿರುವಾಗ, ಚಿತ್ರ ಬಿಡುಗಡೆಯಾಗದಂತೆ ರಜಪೂತರು ನಡೆಸುತ್ತಿರುವ ಪ್ರತಿಭಟನೆಯ ಕಾವೇರಿದೆ.
Vijaya Karnataka Web we will do to deepika what lakshman did to shurpanakha
ದೀಪಿಕಾ ಮೂಗು ಕತ್ತರಿಸುತ್ತೇವೆ: ರಜಪೂತರು


ರಜಪೂತ್‌ ಕರ್ಣಿ ಸೇನಾದ ಸದಸ್ಯ ಮಹಿಪಾಲ್ ಸಿಂಗ್‌ ಮಕ್ರಾನಾ ಒಂದು ವೀಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ' ರಜಪೂತರು ಮಹಿಳೆಯರ ಮೇಲೆ ಕೈ ಮಾಡಲ್ಲ, ಆದರೆ ಅಗತ್ಯ ಬಿದ್ದರೆ ಮಡಬೇಕಾಗುತ್ತದೆ, ಲಕ್ಷ್ಮಣ ಶೂರ್ಪನಖಿಗೆ ಮಾಡಿದಂತೆ ದೀಪಿಕಾಗೆ ಮಾಡಬೇಕಾಗುತ್ತದೆ' ಎಂಬ ಬೆದರಿಕೆ ಹಾಕಿದ್ದಾರೆ.

ರಜಪೂತ್‌ ಕರ್ಣಿ ಸೇನೆ ಚಿತ್ರ ಶೂಟ್ ಮಾಡುವಾಗಲೇ ಭಾರೀ ವಿರೋಧ ವ್ಯಕ್ತಪಡಿಸಿತ್ತು ಡಿಸೆಂಬರ್‌ 1ರಂದು ಚಿತ್ರ ಬಿಡುಗಡೆಯಾಗಬಾರದೆಂದು ಭಾರತ್ ಬಂದ್‌ಗೆ ಕರೆ ನೀಡಿದೆ.

ರಜಪೂತ್‌ ಕರ್ಣಿ ಸೇನೆಯ ಲೋಕೇಂದ್ರಾ ಸಿಂಗ್‌ ಕಲ್ವಿ 'ಪ್ರತಿಭಟನೆಯಲ್ಲಿ ಲಕ್ಷಗಟ್ಟಲೆ ಜನ ಭಾಗವಹಿಸುತ್ತೇವೆ, ನಮ್ಮ ಪೂರ್ವಜರು ರಕ್ತದಲ್ಲಿ ಇತಿಹಾಸ ಬರೆದಿದ್ದಾರೆ, ಅದಕ್ಕೆ ಕಪ್ಪು ಮಸಿ ಬಳಿಯಲು ಯಾರನ್ನೂ ಬಿಡುವುದಿಲ್ಲ, ನಾವು ಡಿಸೆಂಬರ್‌ 1ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದ್ದೇವೆ' ಎಂದಿದ್ದಾರೆ.

ಪದ್ಮಾವತಿ ಪರ ನಿಂತ ಬಾಲಿವುಡ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌