ಆ್ಯಪ್ನಗರ

ಸೋನು ನಿಗಮ್ ಬಾಯಿ ಬಿಟ್ಟರೆ ಬರೀ ವಿವಾದ

ಪ್ರಸಿದ್ಧ ಹಾಡುಗಾರ ಸೋನು ನಿಗಮ್‌ ಕೆಲವೊಂದು ವಿವಾದವಾತ್ಮಕ ಹೇಳಿಕೆಯಿಂದಾಗಿ ಸುದ್ದಿ ಮಾಡುತ್ತಾರೆ.

Vijaya Karnataka Web 20 Apr 2017, 11:24 am
ಪ್ರಸಿದ್ಧ ಹಾಡುಗಾರ ಸೋನು ನಿಗಮ್‌ ಕೆಲವೊಂದು ವಿವಾದವಾತ್ಮಕ ಹೇಳಿಕೆಯಿಂದಾಗಿ ಸುದ್ದಿ ಮಾಡುತ್ತಾರೆ. ಇದೀಗ ಅಜಾನ್‌ಗೆ ಧ್ವನಿವರ್ಧಕ ಬಳಸುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿ ವಿವಾದವನ್ನು ಉಂಟು ಮಾಡಿದ್ದಾರೆ.
Vijaya Karnataka Web when sonu nigam courted controversy
ಸೋನು ನಿಗಮ್ ಬಾಯಿ ಬಿಟ್ಟರೆ ಬರೀ ವಿವಾದ


ಈ ಹಿಂದೆಯೂ ಕೂಡ ಹಲವಾರು ವಿಷಯಗಳಲ್ಲಿ ಇವರು ವಿವಾದದ ಕೇಂದ್ರ ಬಿಂದುವಾಗಿದ್ದರು. ಅವುಗಳಲ್ಲಿ ಪ್ರಮುಖವಾದದು ಸ್ವಯಂ ಘೋಷಿತ ರಾಧೆ ಮಾ ಅವರನ್ನು ಕಾಳಿ ಮಾತೆಗೆ ಹೋಲಿಸಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.

ರಾಧೆ ಮಾ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಾಗ ಸೋನು ನಿಗಮ್‌ ರಾಧೆ ಮಾ ನೆರವಿಗೆ ನಿಂತಿದ್ದರು. ಆಕೆಗೆ ಬೆಂಬಲವನ್ನು ಸೂಚಿಸುತ್ತಾ ಹಲವಾರು ಟ್ವೀಟ್ ಮಾಡಿದ್ದರು. ಆಕೆ ಅರೆಬರೆ ಬಟಟೆ ತೊಟ್ಟು ನೃತ್ಯ ಮಾಡುತ್ತಿದ್ದ ದೃಶ್ಯ ಸುದ್ದಿ ಮಾಧ್ಯಮಗಳಲ್ಲಿ ಬಂದಾಗ ಶಕ್ತಿಯ ದೇವತೆಯೆಂದು ಆರಾಧಿಸುವ ಕಾಳಿ ಮಾತೆಗೆ ರಾಧೆ ಮಾ ಅವರನ್ನು ಹೋಲಿಸುತ್ತಾ ಕಾಳಿ ದೇವರು ಕೂಡ ಕಡಿಮೆ ಬಟ್ಟೆ ಧರಿಸುತ್ತಾರೆ ಎಂಬ ವಿವಾದ್ಮತಕ ಟ್ವೀಟ್‌ ಮಾಡುವ ಮೂಲಕ ವಿವಾದ ಎಬ್ಬಿಸಿದ್ದರು.

ದೇಶದಲ್ಲಿ ಅಸಹಿಷ್ಣುತೆ ಇದೆ ಅಮೀರ್‌ ಖಾನ್ ಹೇಳಿದಾಗ ಸೋನು ನಿಗಮ್ 'ಸೆಲೆಬ್ರಿಟಿಗಳನ್ನು ಬಿಟ್ಟು ಬೇರೆ ಎಲ್ಲರಿಗೂ ಅಭಿಪ್ರಾಯ ಹೇಳುವ ಹಕ್ಕಿದೆ. ಅಲ್ಲದೆ ಅದು ನನ್ನ ಅಭಿಪ್ರಾಯವೂ ಅಲ್ಲ, ನನಗೆ ಅಭಿಪ್ರಾಯ ಹೇಳಲೂ ಸಾಧ್ಯವಿಲ್ಲವಲ್ಲ, paradox' ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೆ ಎಡೆ ಮಾಡಿದ್ದರು.

ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡಲು ಬಯಸುವ 'ಏರ್‌ಕ್ರಾಫ್ಟ್ಸ್‌ ಅಡ್ರೆಸ್‌ ಸಿಸ್ಟಮ್' ಬಳಸಿ ಹಾಡು ಹೇಳಿದ್ದರು. ಈ ವೀಡಿಯೋ ಹೊರ ಬೀಳುತ್ತಿದ್ದಂತೆ ವಿಮಾನಯಾನ ನಿಯಂತ್ರಣ ಅಧಿಕಾರ ಈ ವಿಮಾನದಲ್ಲಿದ್ದ ಗಗನ ಸಖಿಯರನ್ನು ಸಸ್ಪೆಂಡ್ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌