ಆ್ಯಪ್ನಗರ

ಆ ಸಿನಿಮಾ ಸೆಟ್ಟೇರಿದ್ರೆ ಬೆಂಗಳೂರಿಗೆ ಬರಬೇಕಿತ್ತು ಸುಶಾಂತ್ ಸಿಂಗ್ ರಜಪೂತ್‌!

ನಟ ಸುಶಾಂತ್ ಸಿಂಗ್ ರಜಪೂತ್‌ ಬಾಲಿವುಡ್‌ನಲ್ಲಿ ಅನೇಕ ಕನಸುಗಳನ್ನು ಕಟ್ಟಿಕೊಂಡ ನಟ. ದಕ್ಷಿಣ ಭಾರತದ ಒಂದು ಸಿನಿಮಾವನ್ನು ಅವರು ರಿಮೇಕ್ ಮಾಡಬೇಕು ಎಂದುಕೊಂಡಿದ್ದರು. ಆ ಸಿನಿಮಾಗೆ ಬೆಂಗಳೂರಿನ ಕನೆಕ್ಷನ್ ಇತ್ತು!

Vijaya Karnataka Web 29 Jul 2020, 2:29 pm
ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಾರದ ಲೋಕಕ್ಕೆ ತೆರಳಿಬಿಟ್ಟರು. ಅವರ ಸಾವಿನ ನಂತರ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಈಗಾಗಲೇ ಸುಶಾಂತ್ ನಿಧನದ ನಂತರ ಬಾಲಿವುಡ್‌ನಲ್ಲಿ ನೆಪೋಟಿಸಂ ಚರ್ಚೆ ಜೋರಾಗಿದೆ. ಈಗ ಸುಶಾಂತ್‌ ಮಾಡಬೇಕು ಎಂದುಕೊಂಡಿದ್ದ ಒಂದು ಸಿನಿಮಾದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಅಚ್ಚರಿ ಎಂದರೆ, ಈ ಸಿನಿಮಾ ಬೆಂಗಳೂರಿಗೆ ಸಂಬಂಧಪಟ್ಟಿದ್ದು!
Vijaya Karnataka Web when sushant singh rajput wanted to remaking bangalore days in hindi
ಆ ಸಿನಿಮಾ ಸೆಟ್ಟೇರಿದ್ರೆ ಬೆಂಗಳೂರಿಗೆ ಬರಬೇಕಿತ್ತು ಸುಶಾಂತ್ ಸಿಂಗ್ ರಜಪೂತ್‌!


ಬೆಂಗಳೂರು ಡೇಸ್‌ ರಿಮೇಕ್ ಮೇಲೆ ಕಣ್ಣಿಟ್ಟಿದ್ದ ಸುಶಾಂತ್
ಹೌದು, 2014ರಲ್ಲಿ ತೆರೆಕಂಡಿದ್ದ 'ಬೆಂಗಳೂರು ಡೇಸ್‌' ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವ ಆಸೆಯನ್ನು ಇಟ್ಟುಕೊಂಡಿದ್ದರು ಸುಶಾಂತ್ ಸಿಂಗ್ ರಜಪೂತ್‌. ವಿಶೇಷವೆಂದರೆ, ಅದನ್ನು ನಿರ್ಮಾಣ ಮಾಡಬೇಕೆಂಬ ಆಲೋಚನೆಯನ್ನು ಇಟ್ಟುಕೊಂಡಿದ್ದರು. ಅದಕ್ಕಾಗಿ ಮಾತುಕತೆಯನ್ನು ನಡೆಸಿದ್ದರಂತೆ. ಆದರೆ, ಈಗ ಅವರೇ ಇಲ್ಲ! ಅಂದಹಾಗೆ, 'ಬೆಂಗಳೂರು ಡೇಸ್‌' ರಿಮೇಕ್ ಮಾಡುವ ಆಲೋಚನೆ ಅವರಿಗೆ ಬಹಳ ಹಿಂದೆಯೇ ಬಂದಿತ್ತು. ವಿವೇಕ್‌ ರಂಗಾಚಾರಿ ಎನ್ನುವವರ ಬಳಿ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್‌ ಇತ್ತು. ಹಾಗಾಗಿ, ಅವರೊಂದಿಗೂ ಸುಶಾಂತ್ ಮಾತುಕತೆ ನಡೆಸಿದ್ದರು.

ನಿವಿನ್‌ ಪೌಲಿ ಪಾತ್ರ ಮಾಡಬೇಕಿತ್ತು ಸುಶಾಂತ್‌!
'ಬೆಂಗಳೂರು ಡೇಸ್‌' ಸಿನಿಮಾವನ್ನು ಅಂಜಲಿ ಮೆನನ್‌ ನಿರ್ದೇಶನ ಮಾಡಿದ್ದರು. 10 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡ ಈ ಸಿನಿಮಾ 45 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ದುಲ್ಖಾರ್‌ ಸಲ್ಮಾನ್‌, ನಜ್ರಿಯಾ ನಜೀಮ್, ನಿವಿನ್ ಪೌಲಿ, ಫಹಾದ್ ಫಾಸಿಲ್‌, ಪಾರ್ವತಿ, ನಿತ್ಯಾ ಮೆನನ್ ಹೀಗೆ ಬಹುತಾರಾಗಣದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ಅದರಲ್ಲಿ 'ಕುಟ್ಟನ್' ಎಂಬ ಪಾತ್ರವನ್ನು ನಟ ನಿವಿನ್‌ ಮಾಡಿದ್ದರು. ಅದೇ ಪಾತ್ರವನ್ನು ಹಿಂದಿಯಲ್ಲಿ ಸುಶಾಂತ್ ಮಾಡಬೇಕು ಎಂದುಕೊಂಡಿದ್ದರಂತೆ.

ಅದ್ವಿತೀಯ ದಾಖಲೆ ಸೃಷ್ಟಿಸಿದ ಸುಶಾಂತ್ ಸಿಂಗ್ ನಟನೆಯ 'ದಿಲ್‌ ಬೇಚಾರಾ' ಸಿನಿಮಾ!

ಬೆಂಗಳೂರಿನಲ್ಲಿ ನಡೆದಿತ್ತು ಶೂಟಿಂಗ್!
'ಬೆಂಗಳೂರು ಡೇಸ್‌' ಚಿತ್ರವು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿತ್ತು. ಇದೇ ಚಿತ್ರ ತಮಿಳಿಗೆ 'ಬೆಂಗಳೂರು ನಾಟ್ಕಳ್‌' ಹೆಸರಿನಲ್ಲಿ ರಿಮೇಕ್‌ ಆಗಿತ್ತು. ಅದರ ಶೂಟಿಂಗ್ ಕೂಡ ಸಿಲಿಕಾನ್‌ ಸಿಟಿಯಲ್ಲೇ ನಡೆದಿತ್ತು. ಒಂದುವೇಳೆ, ಸುಶಾಂತ್ ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಿದ್ದರೆ, ಅವರು ಸಹ ಚಿತ್ರೀಕರಣದ ಸಲುವಾಗಿ ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಬಾರದ ಊರಿಗೆ ಸುಶಾಂತ್ ತೆರಳಿಬಿಟ್ಟರು.

ನಟಿ ರಿಯಾ ಚಕ್ರವರ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಸುಶಾಂತ್ ಸಿಂಗ್ ತಂದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌