ಆ್ಯಪ್ನಗರ

ಅಭಿನಂದನ್‌ ಪಾತ್ರ ಮಾಡುವಂತೆ ರಣವೀರ್‌ ಸಿಂಗ್‌ಗೆ ಫ್ಯಾನ್ಸ್ ಒತ್ತಾಯ

ಇದೀಗ ಬಾಲಿವುಡ್‍ನಲ್ಲಿಇವರ ಸಾಹಸ ಜೀವನವನ್ನು ಸಿನಿಮಾ ಮಾಡುವ ಸಿದ್ಧತೆಗಳು ನಡೆಯುತ್ತಿವೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾಗೆ 'ವೋ 56 ಗಂಟೆ' ಎಂದು ಹೆಸರಿಡಲಾಗಿದೆ.

Times Now 6 Mar 2019, 6:02 pm
ಪಾಕಿಸ್ತಾನದ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಮರಳಿದ ಬಳಿಕ ಅವರ ಗನ್‍ಸ್ಲಿಂಗರ್ ಮೀಸೆ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿತು. ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನವನ್ನು ತನ್ನ ಮಿಗ್-21 ಬೈಸನ್ ಮೂಲಕ ಹೊಡೆದುರುಳಿಸಿ ಬಳಿಕ ಇವರ ವಿಮಾನ ಸಹ ಧರೆಗುರಿಳಿದ ಕಾರಣ ಪಾಕಿಸ್ತಾನದ ನೆಲಕ್ಕೆ ಬಿದ್ದು ಸೆರೆಯಾಗಿದ್ದರು.
Vijaya Karnataka Web ranveer-singh


ಇದೀಗ ಬಾಲಿವುಡ್‍ನಲ್ಲಿಇವರ ಸಾಹಸ ಜೀವನವನ್ನು ಸಿನಿಮಾ ಮಾಡುವ ಸಿದ್ಧತೆಗಳು ನಡೆಯುತ್ತಿವೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾಗೆ 'ವೋ 56 ಗಂಟೆ' ಎಂದು ಹೆಸರಿಡಲಾಗಿದೆ. ಒಂದು ಕಡೆ ಜಾನ್ ಅಬ್ರಹಾಂ ತಾನು ಅಭಿನಂದನ್ ಪಾತ್ರ ಮಾಡಬೇಕೆಂದಿದ್ದೇನೆ ಎಂದಿದ್ದಾರೆ. ಇದೀಗ ನೋಡಲು ಅಭಿನಂದನ್‌ರಂತೆಯೇ ಕಾಣುವ ರಣವೀರ್ ಸಿಂಗ್‌ರನ್ನು ಅಭಿನಂದನ್ ಪಾತ್ರ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ವೀರ ಯೋಧ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಕುರಿತಾದ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ಮುಖ್ಯ ಪಾತ್ರ ಮಾಡಬೇಕೆಂದು ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಬಾಲಾಕೋಟ್‌ ಏರ್‌ಸ್ಟ್ರೈಕ್‌ ಕುರಿತಾದ ಸಿನಿಮಾ ನಿರ್ಮಾಣವಾಗುವುದರ ಬಗ್ಗೆ ನಿರ್ಮಾಪಕ ಸಂಜಯ್‌ ಲೀಲಾ ಭನ್ಸಾಲಿ ಈಗಾಗಲೇ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಆ ಚಿತ್ರದಲ್ಲಿ ಅಭಿನಂದನ್‌ ಪಾತ್ರ ಯಾರು ಮಾಡಲಿದ್ದಾರೆ ಎಂಬ ಕುತೂಹಲ ಜನರದ್ದಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದ್ದು, ಈ ಪೈಕಿ ಬಹುತೇಕ ಜನರು ರಣವೀರ್‌ ಸಿಂಗ್‌ ಅವರು ಅಭಿನಂದನ್‌ ಪಾತ್ರ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ರಣವೀರ್‌ ಸಿಂಗ್‌ಗೆ ಮಾತ್ರ ಅಭಿನಂದನ್‌ ಪಾತ್ರ ಸೂಕ್ತವಾಗುತ್ತದೆ ಹಾಗೂ ಅಭಿನಂದನ್‌ರಂಥ ಮೀಸೆ ರಣವೀರ್‌ಗೆ ಮಾತ್ರ ಒಪ್ಪುತ್ತದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ರಣವೀರ್‌ ಸಿಂಗ್‌ಗೂ ಕೆಲವು ಅಭಿಮಾನಿಗಳು, ನಿಮ್ಮನ್ನು ಅಭಿನಂದನ್‌ ಪಾತ್ರದಲ್ಲಿ ನೋಡಲು ಬಯಸುತ್ತಿದ್ದೇವೆ ಮತ್ತು ನೀವು ಕೂಡಾ ಅಭಿನಂದನ್‌ರಂಥ ಮೀಸೆ ಬೆಳೆಸಿಕೊಳ್ಳಿ ಎಂದೆಲ್ಲಾ ರಿಕ್ವೆಸ್ಟ್‌ ಮಾಡುತ್ತಿದ್ದಾರೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌