ಆ್ಯಪ್ನಗರ

'ಝೀರೋ' ಹೀನಾಯ ಸೋಲು, ಶಾಕ್‌‌ನಿಂದ ಹೊರಬರದ ಶಾರುಖ್

ಈ ಸಿನಿಮಾದಿಂದ ಶಾರುಖ್ ಹಿಂದೆ ಸರಿದದ್ದು ಯಾಕೆ ಎಂಬ ಪ್ರಶ್ನೆಗೆ ಅಂಜುಮ್ ಬೇರೆಯದ್ದೇ ಕಾರಣ ನೀಡಿದ್ದಾರೆ. ಇನ್ನೊಂದು ಬಾಹ್ಯಾಕಾಶ ಹಿನ್ನೆಲೆಯ ಸಿನಿಮಾ ಮಾಡುವ ಉದ್ದೇಶದಿಂದ ಶಾರುಖ್ ಹಿಂದೆ ಸರಿದಿದ್ದಾಗಿ ಸುದ್ದಿ ಹರಡಿತ್ತು. ಆದರೆ ಇದಕ್ಕೆ ಅಸಲಿ ಕಾರಣ ಅದಲ್ಲ ಎಂದು ಮಾಧ್ಯಮಗಳಿಗೆ ಅಂಜುಮ್ ತಿಳಿಸಿದ್ದಾರೆ.

Vijaya Karnataka Web 16 Mar 2019, 11:59 am
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಟಿಸಿದ 'ಝೀರೋ' ಸಿನಿಮಾ ಬಾಕ್ಸ್ ಆಫೀಸಲ್ಲಿ ಹೀನಾಯವಾಗಿ ಸೋತ ಕಾರಣ ಅವರು ಶಾಕ್‌ನಲ್ಲಿದ್ದಾರೆ ಎನ್ನುತ್ತಿದ್ದಾರೆ ಸಾಹಿತಿ ಅಂಜುಮ್ ರಾಜಬಲಿ. ಭಾರತ ಗಗನಯಾತ್ರಿ ರಾಕೇಶ್ ಶರ್ಮಾ ಬಯೋಪಿಕ್‌ನಲ್ಲಿ ಶಾರುಖ್ ನಟಿಸಬೇಕಾಗಿತ್ತು. ಆದರೆ ಅದರಿಂದ ಹೊರಬಿದ್ದರು. ಈ ಬಯೋಪಿಕ್‌ಗೆ ಕಥೆ ಬರೆದವರೇ ಅಂಜುಮ್ ರಾಜಬಲಿ.
Vijaya Karnataka Web New Project


ಆದರೆ ಈ ಸಿನಿಮಾದಿಂದ ಶಾರುಖ್ ಹಿಂದೆ ಸರಿದದ್ದು ಯಾಕೆ ಎಂಬ ಪ್ರಶ್ನೆಗೆ ಅಂಜುಮ್ ಬೇರೆಯದ್ದೇ ಕಾರಣ ನೀಡಿದ್ದಾರೆ. ಇನ್ನೊಂದು ಬಾಹ್ಯಾಕಾಶ ಹಿನ್ನೆಲೆಯ ಸಿನಿಮಾ ಮಾಡುವ ಉದ್ದೇಶದಿಂದ ಶಾರುಖ್ ಹಿಂದೆ ಸರಿದಿದ್ದಾಗಿ ಸುದ್ದಿ ಹರಡಿತ್ತು. ಆದರೆ ಇದಕ್ಕೆ ಅಸಲಿ ಕಾರಣ ಅದಲ್ಲ ಎಂದು ಮಾಧ್ಯಮಗಳಿಗೆ ಅಂಜುಮ್ ತಿಳಿಸಿದ್ದಾರೆ.

'ಝೀರೊ' ಸಿನಿಮಾ ಸೋತ ಬಳಿಕ ಶಾರುಖ್ ಶಾಖ್‌ನಲ್ಲಿದ್ದಾರೆ. ಹಾಗಾಗಿ ಬಯೋಪಿಕ್‌ ಕಡೆಗೆ ಅವರು ಗಮನಹರಿಸಲು ಸಾಧ್ಯವಾಗದೆ ಅದರಿಂದ ದೂರ ಸರಿದರು ಎಂದಿದ್ದಾರೆ. ಝೀರೋ ಸಿನಿಮಾದ ಸ್ಕ್ರಿಪ್ಟ್ ಚೆನ್ನಾಗಿಲ್ಲದ ಕಾರಣ ಫ್ಲಾಪ್ ಆಯಿತು ಎಂದು ಬಾಲಿವುಡ್ ಮೂಲಗಳು ಭಾವಿಸಿವೆ. ಈ ಬಗ್ಗೆಯೂ ಅಂಜುಮ್ ಸ್ಪಷ್ಟನೆ ನೀಡಿದ್ದಾರೆ.

"ಝೀರೋ ಸಿನಿಮಾಗೆ ಹಿಮಾನ್ಷು ಶರ್ಮಾ ಕಥೆ ಬರೆದಿದ್ದಾರೆ. ಅವರು ಚಿತ್ರೋದ್ಯಮದಲ್ಲೇ ತುಂಬಾ ಪ್ರತಿಭಾನ್ವಿತ ವ್ಯಕ್ತಿ. ಅಂತಹದ್ದರಲ್ಲಿ ಅವರು ಬರೆದ ಸ್ಕ್ರಿಪ್ಟ್‌ ಕಾರಣದಿಂದಲೇ ಸಿನಿಮಾ ಓಡಲಿಲ್ಲ ಎಂದರೆ ಒಮ್ಮೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ನಡೆಯದಿರಬಹುದು ಅಲ್ಲವೇ ಎಂದಿದ್ದಾರೆ.

ಈ ಸಿನಿಮಾದಲ್ಲಿ ನಟಿಸಿರುವವರೆಲ್ಲಾ ಸ್ಟಾರ್ ನಟರು (ಶಾರುಖ್, ಕತ್ರಿನಾ, ಅನುಷ್ಕಾ). ನಿರ್ದೇಶಕ (ರಾಕೇಶ್ ಓಂ ಪ್ರಕಾಶ್ ಮೆಹ್ರಾ) ಸಹ ಪ್ರತಿಭಾನ್ವಿತ. ಆದರೆ ಸ್ಕ್ರಿಪ್ಟ್‌ನಲ್ಲಿ ಏನೋ ಲೋಪ ಇದ್ದೇ ಇರುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಅಂಜುಮ್. ರಾಕೇಶ್ ಶರ್ಮಾ ಬಯೋಪಿಕ್‌ಗೆ 'ಸಾರೇ ಜಹಾಸೆ ಅಚ್ಚಾ' ಎಂಬ ಶೀರ್ಷಿಕೆ ಇಡಲಾಗಿದೆ. ಶಾರುಖ್ ಹಿಂದೆ ಸರಿದ ಕಾರಣ ರಣಬೀರ್ ಕಪೂರ್‌ರನ್ನು ಆಯ್ಕೆ ಮಾಡಲಾಗಿದೆ ಎಂದಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌