ಆ್ಯಪ್ನಗರ

9 ವರ್ಷಗಳ ಬಳಿಕ ನೋವು ತೋಡಿಕೊಂಡ ನಟ ಅಭಯ್‌ ಡಿಯೋಲ್‌! ಮೋಸ ಮಾಡಿದ್ರಾ ಹೃತಿಕ್‌?

ಬಾಲಿವುಡ್‌ನ ಒಂದೊಂದೇ ಕಹಿ ಸತ್ಯಗಳು ಹೊರಬರುತ್ತಿವೆ. ಬರೋಬ್ಬರಿ 9 ವರ್ಷಗಳ ಕಾಲ ತಮ್ಮೊಳಗಿದ್ದ ನೋವನ್ನು ನಟ ಅಭಯ್‌ ಡಿಯೋಲ್‌ ಈಗ ಹೇಳಿಕೊಂಡಿದ್ದಾರೆ. ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ.

Vijaya Karnataka Web 20 Jun 2020, 12:21 am
ಇದುವರೆಗೂ ಹಿಂದಿ ಚಿತ್ರರಂಗದ ಹುಳುಕುಗಳೆಲ್ಲವೂ ಬೂದಿ ಮುಚ್ಚಿದ ಕೆಂಡದ ರೀತಿ ಇದ್ದವು. ಆದರೆ ಸುಶಾಂತ್‌ ಸಿಂಗ್ ರಜಪೂತ್‌ ನಿಧನದ ಬಳಿಕ ಬಾಲಿವುಡ್‌ನಲ್ಲಿ ವಿವಾದದ ಜ್ವಾಲೆಯೇ ಹೊತ್ತಿ ಉರಿಯುತ್ತಿದೆ. ದಶಕಗಳಿಂದ ತಮಗೆ ಆಗಿರುವ ಅನ್ಯಾಯದ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ನಿರ್ದೇಶನ ಅಭಿನವ್‌ ಕಶ್ಯಪ್‌ ಅವರು ಸಲ್ಮಾನ್‌ ಖಾನ್‌ ಫ್ಯಾಮಿಲಿ ವಿರುದ್ಧ ಸರಣಿ ಆರೋಪ ಮಾಡಿದರು. ಈಗ ನಟ ಅಭಯ್‌ ಡಿಯೋಲ್‌ ಅವರು ಪ್ರಶಸ್ತಿಗಳ ರಾಜಕೀಯವನ್ನು ಬಯಲಿಗೆ ಎಳೆದಿದ್ದಾರೆ.
Vijaya Karnataka Web zindagi na milegi dobara actor abhay deol express his displeasure about bollywood award shows
9 ವರ್ಷಗಳ ಬಳಿಕ ನೋವು ತೋಡಿಕೊಂಡ ನಟ ಅಭಯ್‌ ಡಿಯೋಲ್‌! ಮೋಸ ಮಾಡಿದ್ರಾ ಹೃತಿಕ್‌?


2005ರಿಂದ ಬಾಲಿವುಡ್‌ನಲ್ಲಿ ನಟನೆ ಆರಂಭಿಸಿದ ಅಭಯ್‌ ಡಿಯೋಲ್‌ ಅವರು ಈವರೆಗೂ 20ಕ್ಕೂ ಅಧಿಕ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅವುಗಳಲ್ಲಿ 'ಜಿಂದಗಿ ನಾ ಮಿಲೇಗಿ ದೋಬಾರ' ಚಿತ್ರ ಗಮನಾರ್ಹವಾದದ್ದು. ಕ್ಲಾಸ್‌ ಪ್ರೇಕ್ಷಕರಿಗೆ ಆ ಸಿನಿಮಾ ಸಖತ್ ಇಷ್ಟ ಆಗಿತ್ತು. ಈಗಲೂ ಆ ಚಿತ್ರದ ಚಾರ್ಮ್‌ ಕಮ್ಮಿ ಆಗಿಲ್ಲ. ಅಭಯ್‌ ಡಿಯೋಲ್‌, ಫರ್ಹಾನ್‌ ಅಖ್ತರ್‌, ಹೃತಿಕ್‌ ರೋಷನ್‌ ಮತ್ತು ಕತ್ರಿನಾ ಕೈಫ್‌ ಮುಖ್ಯಭೂಮಿಕೆ ನಿಭಾಯಿಸಿದ್ದ 'ಜಿಂದಗಿ ನಾ ಮಿಲೇಗಿ ದೋಬಾರ' ಬಗ್ಗೆ ಅಭಯ್‌ ಡಿಯೋಲ್‌ ಈಗ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ಜಿಂದಗಿ ನಾ ಮಿಲೇಗಿ ದೋಬಾರ' 2011ರಲ್ಲಿ ತೆರೆಕಂಡಿತ್ತು. ಇತ್ತೀಚಿನ ದಿನಗಳಲ್ಲಿ ಆ ಶೀರ್ಷಿಕೆಯ ಅರ್ಥವನ್ನು (ಬದುಕು ಮತ್ತೊಮ್ಮೆ ಸಿಗದು) ಪ್ರತಿ ದಿನ ನನಗೆ ನಾನು ಹೇಳಿಕೊಳ್ಳಬೇಕಿದೆ. ಹತಾಶೆ ಆವರಿಸಿದಾಗೆಲ್ಲ ಆ ಸಿನಿಮಾ ನೋಡಿ ಹಗುರಾಗಬಹುದು. ಎಲ್ಲ ಪ್ರಶಸ್ತಿ ಸಮಾರಂಭಗಳಲ್ಲೂ ಫರ್ಹಾನ್‌ ಅಖ್ತರ್‌ ಮತ್ತು ನನ್ನನ್ನು ಕಡೆಗಣಿಸಲಾಯಿತು. ನಮ್ಮದು ಫೋಷಕ ಪಾತ್ರಗಳು ಎಂದು ಪರಿಗಣಿಸಿ, ಹೃತಿಕ್‌ ಮತ್ತು ಕತ್ರಿನಾ ಅವರದ್ದನ್ನು ಮುಖ್ಯ ಪಾತ್ರಕ್ಕೆ ನಾಮಿನೇಟ್‌ ಮಾಡಲಾಯಿತು' ಎಂದು ಅಭಯ್‌ ಡಿಯೋಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

also read: ಚಿತ್ರರಂಗದ ಹುಳುಕುಗಳ ಬಗ್ಗೆ ಬಾಯಿಬಿಟ್ಟ 'ಕೆಜಿಎಫ್‌ 2' ನಟಿ ರವೀನಾ ಟಂಡನ್‌! ಹೀಗೆಲ್ಲಾ ನಡೆಯುತ್ತಾ?

'ಇಂಡಸ್ಟ್ರೀ ಲಾಜಿಕ್‌ ಪ್ರಕಾರ ಇದು ಒಬ್ಬ ಹುಡುಗ-ಹುಡುಗಿಯ ಪ್ರೀತಿಗೆ ಇಬ್ಬರು ಸ್ನೇಹಿತರು ಬೆಂಬಲ ನೀಡುವ ಕಥೆ. ಪ್ರಶಸ್ತಿಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಾಬಿ ಮಾಡುವ ಜನರು ಬಾಲಿವುಡ್‌ನಲ್ಲಿ ಇದ್ದಾರೆ. 'ಜಿಂದಗಿ ನಾ ಮಿಲೇಗಿ ದೋಬಾರ' ಸಿನಿಮಾ ವಿಚಾರದಲ್ಲಿ ನಾಚಿಕೆ ಬಿಟ್ಟು ಪ್ರತ್ಯಕ್ಷವಾಗಿಯೇ ಲಾಬಿ ಮಾಡಲಾಯಿತು. ನಂತರ ನಾನು ಪ್ರಶಸ್ತಿಗಳನ್ನೇ ಬಹಿಷ್ಕರಿಸಿದೆ. ಆದರೆ ಫರ್ಹಾನ್‌ ಇದನ್ನೆಲ್ಲ ಸಹಿಸಿಕೊಂಡರು' ಎಂದು ಸೋಶಿಯಲ್‌ ಮೀಡಿಯಾದಲ್ಲಿ ನೇರವಾಗಿಯೇ ಬರೆದುಕೊಂಡಿದ್ದಾರೆ ಅಭಯ್‌ ಡಿಯೋಲ್‌.

also read: ಹೊಸಬರಿಗೆ ಆಫೀಸ್‌ ಫೋನ್‌ ನಂಬರ್‌ ಕೊಟ್ಟು ಅವಮಾನ ಮಾಡುತ್ತಿದ್ದ ಕರಣ್‌ ಜೋಹರ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌