ಆ್ಯಪ್ನಗರ

ದರ್ಶನ್ ರಾಬರ್ಟ್ ಶೂಟಿಂಗ್‌ ಮುಂದಕ್ಕೆ ಹೋಗಲು ಕಾರಣವೇನು?

ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು' ಎನ್ನುವ ವಾಕ್ಯ ಬರೆಯಲಾಗಿತ್ತು. ಮತ್ತೊಂದು 'ಟೈಟಲ್​ ಪೋಸ್ಟರ್ 'ನಲ್ಲಿ ಹನುಮಂತನ ಮೇಲೆ ರಾಮ ಕೂತು ಬಾಣ ಬಿಡುತ್ತಿದ್ದಾನೆ. ಹಾಗಾಗಿ ಈ ಸಂಗತಿ ಸಖತ್ ಕುತೂಹಲ ಸೃಷ್ಟಿಸಿತ್ತು.

Vijaya Karnataka Web 22 Apr 2019, 8:43 pm
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ 'ರಾಬರ್ಟ್' ಸಿನಿಮಾ ಈಗಾಗಲೇ ಪೋಸ್ಟರ್‌ಗಳಿಂದಲೇ ಬಾರೀ ಸದ್ದು ಮಾಡುತ್ತಿದೆ. ಆದರೆ, ಸದ್ಯಕ್ಕೆ ಈ ಚಿತ್ರದ ಶೂಟಿಂಗ್ ಮುಂದೂಡಲಾಗಿದೆ. ಕಾರಣ, ಮಂಡ್ಯ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಪರ ಪ್ರಚಾರದ ಬಳಿಕ ಈ ಚಿತ್ರದ ನಾಯಕ ನಟ ದರ್ಶನ್ ತಕ್ಷಣವೇ ಶೂಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ.
Vijaya Karnataka Web darshan2204-3


ಅಂದುಕೊಂಡಂತೆ ಆಗಿದ್ದರೆ, ನಟ ದರ್ಶನ್ ಸಿನಿಮಾ ಶೂಟಿಂಗ್ ಇಂದು, ಏಪ್ರಿಲ್ 22ರಂದು ಆರಂಭವಾಗಬೇಕಿತ್ತು. ಆದರೆ ಈ ಶೂಟಿಂಗ್ ಒಂದು ವಾರ ಮುಂದೆ ಹೋಗಿದೆ ಎನ್ನಲಾಗುತ್ತಿದೆ. ಕಾರಣ, ನಟ ದರ್ಶನ್ ಅವರಿಗೆ ಕೈ ನೋವು ಕೊಂಚ ಜಾಸ್ತಿಯಾಗಿದೆ. ಹೀಗಾಗಿ ಚಿಕಿತ್ಸೆ ಮುಂದುವರೆದಿದ್ದು, ಅವರಿಗೆ ವಿಶ್ರಾಂತಿ ಮುಂದಿನ ವಾರದಿಂದ ಶುರುವಾಗಲಿರುವ ಶೂಟಿಂಗ್ ಒಂದೇ ಶೆಡ್ಯುಲ್ ನಲ್ಲಿ ಈ ಚಿತ್ರೀಕರಣ ಮುಗಿಸಲಿದೆಯಂತೆ.

'ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು' ಎನ್ನುವ ವಾಕ್ಯ ಬರೆಯಲಾಗಿತ್ತು. ಮತ್ತೊಂದು 'ಟೈಟಲ್ ಪೋಸ್ಟರ್ 'ನಲ್ಲಿ ಹನುಮಂತನ ಮೇಲೆ ರಾಮ ಕೂತು ಬಾಣ ಬಿಡುತ್ತಿದ್ದಾನೆ. ಹಾಗಾಗಿ ಈ ಸಂಗತಿ ಸಖತ್ ಕುತೂಹಲ ಸೃಷ್ಟಿಸಿತ್ತು. ಇನ್ನು, ದರ್ಶನ್ ಬಿಟ್ಟು ಈ ಚಿತ್ರದ ಮಿಕ್ಕ ಪಾತ್ರಗಳು ಇನ್ನೂ ಬಹಿರಂಗವಾಗಿಲ್ಲ. ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುವ ಈ ಚಿತ್ರವನ್ನು ಕಿಶೋರ್ ಸುಧೀರ್ ನಿರ್ದೇಶಿಸಲಿದ್ದಾರೆ.

ಒಟ್ಟಿನಲ್ಲಿ, ನಟ ದರ್ಶನ್ ಅವರ ಮುಂಬರುವ ಚಿತ್ರ ರಾಬರ್ಟ್ ಸ್ವಲ್ಪ ತಡವಾಗುತ್ತಿದೆ. ನಟ ದರ್ಶನ್ ಅವರ ಕೈನಲ್ಲಿ ಇನ್ನು ಸಾಕಷ್ಟು ಚಿತ್ರಗಳಿದ್ದು, ಒಂದಾದ ಬಳಿಕ ಮತ್ತೊಂದು ಚಿತ್ರದ ಶೂಟಿಂಗ್‌ನಲ್ಲಿ ನಟ ದರ್ಶನ್ ಭಾಗಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌