ಆಗಾಗ್ಗೆ ಚಿತ್ರೋದ್ಯಮದಲ್ಲಿ ಕಾಣಿಸಿಕೊಳ್ಳುವ ನಟಿ ರೂಪಶ್ರೀ ಸಿಗರೇಟು ಹೊಗೆ ಎಳೆದು ಸುದ್ದಿ ಆಗಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಧಮ್ ಎಳೆದ ರೂಪಶ್ರೀ, ‘ಅಯ್ಯೋ, ನಾನು ನಿಜ ಜೀವನದಲ್ಲಿ ತುಂಬಾ ಒಳ್ಳೆಯ ಹುಡುಗಿ. ಪಾತ್ರಕ್ಕಾಗಿ ಹಾಗೆ ಮಾಡಬೇಕಾಯಿತು. ಯಾರೂ ಸಿಗರೇಟು ಸೇದಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ವಿಶ್ವ ತಂಬಾಕು ಮುಕ್ತ ದಿನಾಚರಣೆಯಂದು ಉದ್ದುದ್ದ ಭಾಷಣ ಮಾಡಿದ್ದಾರೆ.
ನಿರ್ದೇಶಕರು ಪಾತ್ರದ ಬಗ್ಗೆ ಹೇಳುವಾಗಲೇ ಸಿಗರೇಟು ಸೇದಬೇಕಾಗುತ್ತದೆ ಎಂದು ಹೇಳಿದ್ದರಂತೆ. ಕ್ಷಣ ಹೊತ್ತು ಯೋಚನೆ ಮಾಡಿ, ಆ ಟೈಮ್ಲ್ಲೇ ನೋಡೋಣ ಎಂದು ನಿರ್ದೇಶಕರಿಗೆ ರೂಪಶ್ರೀ ಅಭಯ ಹಸ್ತ ನೀಡಿದ್ದರಂತೆ. ನಟಿಸುವಾಗ ಅನಿವಾರ್ಯ ಅನಿಸಿತು. ಸಿಗರೇಟು ಹಿಡಿದೆ. ಇನ್ಮುಂದೆ ಹಾಗೆಲ್ಲ ಮಾಡಲ್ಲ ಅಂದಿದ್ದಾರೆ.
ನಿರ್ದೇಶಕರು ಪಾತ್ರದ ಬಗ್ಗೆ ಹೇಳುವಾಗಲೇ ಸಿಗರೇಟು ಸೇದಬೇಕಾಗುತ್ತದೆ ಎಂದು ಹೇಳಿದ್ದರಂತೆ. ಕ್ಷಣ ಹೊತ್ತು ಯೋಚನೆ ಮಾಡಿ, ಆ ಟೈಮ್ಲ್ಲೇ ನೋಡೋಣ ಎಂದು ನಿರ್ದೇಶಕರಿಗೆ ರೂಪಶ್ರೀ ಅಭಯ ಹಸ್ತ ನೀಡಿದ್ದರಂತೆ. ನಟಿಸುವಾಗ ಅನಿವಾರ್ಯ ಅನಿಸಿತು. ಸಿಗರೇಟು ಹಿಡಿದೆ. ಇನ್ಮುಂದೆ ಹಾಗೆಲ್ಲ ಮಾಡಲ್ಲ ಅಂದಿದ್ದಾರೆ.