ಆ್ಯಪ್ನಗರ

ಶರಣ್‌- ಚಿಕ್ಕಣ್ಣ ಕಾಮಿಡಿ ಮೋಡಿ

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ಜೋಡಿಗಳಲ್ಲಿ ಒಂದಾದ ಶರಣ್‌ ಮತ್ತು ಚಿಕ್ಕಣ್ಣ ನಟಿಸಿರುವ ರಾಜ್‌-ವಿಷ್ಣು ಸಿನಿಮಾ ಶೂಟಿಂಗ್‌ ಮುಗಿದಿದ್ದು, ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪತ್ರವನ್ನು ಪಡೆದಿದೆ.

ವಿಕ ಸುದ್ದಿಲೋಕ 7 Jul 2017, 5:00 am
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ಜೋಡಿಗಳಲ್ಲಿ ಒಂದಾದ ಶರಣ್‌ ಮತ್ತು ಚಿಕ್ಕಣ್ಣ ನಟಿಸಿರುವ ರಾಜ್‌-ವಿಷ್ಣು ಸಿನಿಮಾ ಶೂಟಿಂಗ್‌ ಮುಗಿದಿದ್ದು, ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪತ್ರವನ್ನು ಪಡೆದಿದೆ. ತಮಿಳಿನ 'ರಜಿನಿ ಮುರುಗ' ಸಿನಿಮಾದ ಕನ್ನಡ ಅವತರಿಣಿಕೆ ಇದಾಘಿದ್ದು, ಈ ಹಿಂದೆ ಅಧ್ಯಕ್ಷ ಚಿತ್ರಕ್ಕೆ ಕತೆ ಬರೆದಿದ್ದ ಪೊನ್‌ ರಾಜ್‌ ಅವರು 'ರಜನಿ ಮುರುಘ'ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದರು. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಹಿಂದೆ ಆಕಾಶ್‌ ಮತ್ತು ಅರಸು ಚಿತ್ರಗಳಿಗೆ ಕಥೆ ಒದಗಿಸಿದ್ದ ಖ್ಯಾತ ಬರಹಗಾರ ಜನಾರ್ಧನ ಮಹರ್ಷಿ 'ರಾಜ್‌ ವಿಷ್ಣು ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ.
Vijaya Karnataka Web  sharan and chikkannas comedy charm
ಶರಣ್‌- ಚಿಕ್ಕಣ್ಣ ಕಾಮಿಡಿ ಮೋಡಿ


ರಾಜ್‌- ವಿಷ್ಣು ಸಿನಿಮಾವನ್ನು ಕೆ.ಮಾದೇಶ್‌ ನಿರ್ದೇಶಿಸಿದ್ದು, ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ರಾಜೇಶ್‌ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಮುರಳಿ ನೃತ್ಯ, ಥ್ರಿಲ್ಲರ್‌ ಮಂಜು, ವಿನೋದ್‌ ಅವರ ಸಾಹಸ ಸಂಯೋಜನೆ, ಯೋಗರಾಜ್‌ ಭಟ್‌, ಡಾ. ವಿ. ನಾಗೇಂದ್ರ ಪ್ರಸಾದ್‌ ಮತ್ತು ಕವಿರಾಜ್‌ ಅವರ ಹಾಡುಗಳನ್ನು ಬರೆದಿದ್ದಾರೆ. ಶರಣ್‌ ಮತ್ತು ಚಿಕ್ಕಣ್ಣ ಪ್ರಮುಖವಾಗಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್‌, ಶ್ರೀನಿವಾಸಮೂರ್ತಿ, ವೀಣಾ ಸುಂದರ್‌, ರಮೇಶ್‌ ಪಂಡಿತ್‌, ಮಿಮಿಕ್ರಿ ಗೋಪಿ ಮತ್ತು ಸ್ವಾತಿ ಸೇರಿದಂತೆ ಇನ್ನು ಅನೇಕರ ತಾರಾಗಣವಿದೆ. ಮುಂಬೈ ಮೂಲದ ವೈಭವಿ 'ರಾಜ್‌-ವಿಷ್ಣು' ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಹೊಸಬರ ಆದಿ ಪುರಾಣ

ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ತಂತ್ರಜ್ಞರೆಲ್ಲರೂ ನಿರ್ದೇಶಕರಾಗುತ್ತಿದ್ದಾರೆ ಆ ಸಾಲಿಗೆ ಹೊಸ ಸೇರ್ಪಡೆ ಸಂಕಲನಕಾರ ಮೋಹನ್‌ ಕಾಮಾಕ್ಷಿ. ಚಿತ್ರರಂಗದಲ್ಲಿ ಹನ್ನೆರೆಡು ವರ್ಷಗಳಿಂದ ಸಂಕಲನಕಾರರಾಗಿರುವ ಮೊಹನ್‌ 'ಆದಿ ಪುರಾಣ' ಎಂಬ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಎಲ್ಲ ಹೊಸ ಪ್ರತಿಭೆಗಳನ್ನು ಒಟ್ಟುಗೂಡಿಸಿ ಹೊಸ ತಂಡ ಕಟ್ಟಿದ್ದಾರೆ ನಿರ್ದೇಶಕ ಮೋಹನ್‌ ಕಾಮಾಕ್ಷಿ. ಆದಿ ಪುರಾಣ ರೊಮ್ಯಾಂಟಿಕ್‌ ಕಾಮಿಡಿ ಚಿತ್ರವಾಗಿದ್ದು ಪ್ರೇಕ್ಷ ಕರನ್ನು ಕಚಗುಳಿಯಿಡುವ ಸಂಭಾಷಣೆ ಮತ್ತು ಹೊಸತನದ ನಿರೂಪಣೆಯ ಕೂಡಿದೆ ಎಂದು ಹೇಳುತ್ತಾರೆ ನಿರ್ದೇಶಕರು. ಶಶಾಂಕ್‌ ಚಿತ್ರಕ್ಕೆ ನಾಯಕರಾಗಿದ್ದು, ಅಹಲ್ಯ ಸುರೇಶ್‌ ಮತ್ತು ಮೋಕ್ಷ ಕುಶಾಲ್‌ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ನಾಗೇಂದ್ರ ಶಾ, ಕರಿಸುಬ್ಬು, ವತ್ಸಲಾ ಮೋಹನ್‌ ಮತ್ತಿತರ ರಂಗಭೂಮಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

ಈ ಹಿಂದೆ ಮೆಲೋಡಿ ಮತು ಪ್ರೀತಿ ಕಿತಾಬು ಚಿತ್ರ ನಿರ್ಮಿಸಿದ್ದ ಶಮಂತ್‌ ಕೆ ರಾವ್‌ ಈ ಚಿತ್ರ ನಿರ್ಮಿಸುತ್ತಿದ್ದಾರೆ. ರಂಗಭೂಮಿಯ ಹಿನ್ನೆಲೆಯಿರುವ ವಿಕ್ರಮ… ವಸಿಷ್ಠ, ಚಂದನ ಹಾಗು ಸಿದ್ಧಾರ್ಥ್‌ ಕಾಮರ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಲವಾರು ಹಿರಿಯ ಛಾಯಾಗ್ರಾಹಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಗುರುಪ್ರಸಾದ್‌ ಈ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗುತ್ತಿದ್ದಾರೆ. ಆದಿ ಪುರಾಣ ಚಿತ್ರವು ಹಾಸ್ಯದ ಜೊತೆಜೊತೆಗೆ ಫಿಲಾಸಫಿಯೂ ಒಳಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌