ಆ್ಯಪ್ನಗರ

99 ಒಂದು ಮ್ಯೂಸಿಕಲ್‌ ಎಕ್ಸ್‌ಪೆರಿಮೆಂಟ್‌

ಗಣೇಶ್‌ ನಟನೆಯ 99 ಸಿನಿಮಾಗೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದು,ಇದು ಇವರ 100 ನೇ ಚಿತ್ರವಾಗಿದೆ. ಈ ಸಂದರ್ಭದಲ್ಲಿ ಲವಲವಿಕೆ ಜತೆ ಅರ್ಜುನ್‌ ಜನ್ಯ ಮಾತನಾಡಿದ್ದಾರೆ.

Vijaya Karnataka 26 Apr 2019, 5:00 am
ಹರೀಶ್‌ ಬಸವರಾಜ್‌
Vijaya Karnataka Web B07A0754


*ನೂರರ ಸಂಭ್ರಮದಲ್ಲಿದ್ದೀರಾ ಹೇಗನ್ನಿಸ್ತಾ ಇದೆ?

-ಬಹಳ ಖುಷಿಯಾಗ್ತಾ ಇದೆ. 99 ಅನ್ನೋ ಮ್ಯೂಸಿಕಲ್‌ ಸಬ್ಜೆಕ್ಟ್ ಮೂಲಕ ನೂರನೇ ಸಿನಿಮಾ ಮಾಡುತ್ತಿರುವುದು ನನಗೆ ಸಂತಸದ ಸಂಗತಿ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ ಈ ಮೂಲಕ ನನಗೆ ಅವಕಾಶ ನೀಡಿದ ನಿರ್ದೇಶಕರು ಮತ್ತು ನಿರ್ಮಾಪಕರಿಗೂ ನಾನು ಧನ್ಯವಾದ ಹೇಳುತ್ತೇನೆ.

*ಈ ಜರ್ನಿಯಲ್ಲಿ ಯಾರಾರ‍ಯರನ್ನು ಜ್ಞಾಪಿಸಿಕೊಳ್ಳುತ್ತಿರಾ?

-ನನ್ನ ಮ್ಯೂಸಿಕಲ್‌ ಜರ್ನಿಯಲ್ಲಿ ನಾನು ನನ್ನ ಅಕ್ಕ ದಾಕ್ಷಾಯಿಣಿ, ಸುದೀಪ್‌ ಅವರು ಮತ್ತು ನನ್ನ ಎಲ್ಲ ಸಿನಿಮಾಗಳ ನಿರ್ದೇಶಕರು ಮತ್ತು ನಿರ್ಮಾಪಕರನ್ನು ಜ್ಞಾಪಿಸಿಕೊಳ್ಳುತ್ತೇನೆ.

*ನೂರನೇ ಸಿನಿಮಾಗೆ ಎಂತಹ ಟ್ಯೂನ್‌ ಕೊಡಬೇಕು ಎಂದು ಏನಾದ್ರೂ ತಯಾರಿ ಮಾಡಿಕೊಂಡಿದ್ರ?

-ನಾವು ಕಮರ್ಷಿಯಲ್‌ ಸಿನಿಮಾಗಳಿಗೆ ಸಂಗೀತ ನೀಡುತ್ತೇವೆ. ಅವುಗಳಲ್ಲವೂ ಆಡಿನ್ಸ್‌ಗಾಗಿ ಮಾಡಿರುತ್ತೇವೆ. ಆದರೆ ನೂರನೇ ಚಿತ್ರ ಎಂದಾಗ ನಮಗೆ ಒಂದಷ್ಟು ನಿರೀಕ್ಷೆಗಳಿರುತ್ತವೆ. ಜತೆಗೆ ಕೆಲವು ಸ್ಕ್ರಿಪ್ಟ್‌ಗಳು ಸಂಗೀತದೊಂದಿಗೆ ಬೆಸೆದುಕೊಂಡಿರುತ್ತವೆ. ಅಂತಹ ಅವಕಾಶ ನನಗೆ 99ನಲ್ಲಿ ದೊರೆಯಿತು.ಅದನ್ನು ನಾನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ನಾನು ಮ್ಯೂಸಿಕಲ್‌ ಎಕ್ಸ್‌ ಪೆರಿಮೆಂಟ್‌ ಮಾಡಿದ್ದೇನೆ. ಅಲ್ಲದೆ ಈ ಚಿತ್ರ ತಮಿಳಿನ ರಿಮೇಕ್‌. ಅಲ್ಲಿ ಆಡಿಯೋ ದೊಡ್ಡ ಹಿಟ್‌ ಆಗಿತ್ತು. ಅಲ್ಲಿಗಿಂತಲೂ ಅದ್ಭುತವಾಗಿ ಟ್ಯೂನ್‌ಗಳನ್ನು ಕೊಡಬೇಕು ಎಂಬ ಆಸೆಯಿತ್ತು. ಅದಕ್ಕಾಗಿ ಯೂರೋಪ್‌ನಲ್ಲಿ ಬುದ್ದ ಪೆಸ್ಟ್‌ ಸಿಂಫೋನಿ ಆರ್ಕೆಸ್ಟ್ರಾ ದಲ್ಲಿ ರೆಕಾರ್ಡ್‌ ಮಾಡಿಸಿದ್ದೇನೆ. ಅಲ್ಲಿ ಸಿಂಫೋನಿ ಆರ್ಕೆಸ್ಟ್ರಾ ನುಡಿಸಿರುವ ಮೊಟ್ಟ ಮೊದಲ ಕನ್ನಡ ಚಿತ್ರ 99. ಈಗ ನನಗೆ ಹಾಡುಗಳಿಂದ ಬರುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ.

*ನೂರು ಸಿನಿಮಾಗಳ ಹಾಡಿನಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದು?

- ಚೌಕ ಸಿನಿಮಾದ 'ಅಪ್ಪಾ ಐಲವ್‌ ಯೂ' ನನಗೆ ಅತಿ ಹೆಚ್ಚು ಇಷ್ಟವಾದ ಹಾಡು.

*ರಿಮೇಕ್‌ ಸಿನಿಮಾಗಳಿಗೆ ಸಂಗೀತ ನೀಡುವುದು ಸುಲಭವೇ?

-ಖಂಡಿತಾ ಇಲ್ಲ, ರಿಮೇಕ್‌ ಸಿನಿಮಾಗಳಿಗೆ ಸಂಗೀತ ನೀಡುವುದು ದೊಡ್ಡ ಚಾಲೆಂಜಿಂಗ್‌ ಆಗಿರುತ್ತದೆ. ಏಕೆಂದರೆ ರಿಮೇಕ್‌ ಸಿನಿಮಾದಲ್ಲಿ ಫ್ರೆಶ್‌ ಆಗಿ ಸಿಗುವುದು ಎಂದರೆ ಹಾಡುಗಳು ಮಾತ್ರ. ನಾನು ಮಾಡಿರುವ ಸಾಕಷ್ಟು ಮ್ಯೂಸಿಕಲ್‌ ಹಿಟ್‌ ಸಿನಿಮಾಗಳಾದ ಮಾಣಿಕ್ಯ, ಅಧ್ಯಕ್ಷ ಎಲ್ಲವೂ ರಿಮೇಕ್‌. ಮೂಲ ಚಿತ್ರಕ್ಕಿಂತಲೂ ಇಲ್ಲಿಯೇ ಹಾಡುಗಳು ದೊಡ್ಡ ಹಿಟ್‌ ಆಗಿವೆ.

---

ಕೋಟ್‌.….….…

99 ಚಿತ್ರ ನನ್ನ ನೂರನೇ ಚಿತ್ರವಾಗಿದ್ದು ನನಗೆ ಸಂತೋಷದ ವಿಚಾರವಾಗಿದೆ. ಇಲ್ಲಿಂದ ನನ್ನ ಜವಬ್ದಾರಿ ಇನ್ನಷ್ಟು ಹೆಚ್ಚಿದ್ದು, ಇನ್ನೂ ಒಳ್ಳೆ ಒಳ್ಳೆ ಟ್ಯೂನ್‌ಗಳ ಮೂಲಕ ಜನರ ಮನಸ್ಸನ್ನು ಸಂಗೀತ ಮಯ ಮಾಡುವುದೇ ನನ್ನ ಗುರಿಯಾಗಿದೆ.

-ಅರ್ಜುನ್‌ ಜನ್ಯ, ಸಂಗೀತ ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌