ಆ್ಯಪ್ನಗರ

ಹೊಸದಾಗಿ ಮದ್ವೆ ಆದೋರ ಪುರಾಣ ಹೇಳ್ತಾರೆ ಅಹಲ್ಯಾ

ನಿಜ ಜೀವನದಲ್ಲಿ ಭರನಾಟ್ಯ ಕಲಾವಿದೆ ಆಗಬೇಕು ಎಂಬ ಆಸೆಯಿತ್ತು. ಅದು ಈಡೇರಿರಲಿಲ್ಲ. ಈಗ ಸಿನಿಮಾದಲ್ಲಿ ಸಿಕ್ಕಿದೆ. ಒಂದಷ್ಟು ತಯಾರಿ ಕೂಡ ಮಾಡಿಕೊಂಡು ಪಾತ್ರ ಮಾಡಿದ್ದೇನೆ ಎನ್ನುತ್ತಾರೆ ನಟಿ ಅಹಲ್ಯಾ ಸುರೇಶ್.

Vijaya Karnataka 2 Oct 2018, 12:36 pm
*ಶರಣು ಹುಲ್ಲೂರು
Vijaya Karnataka Web adi-purana


ಆದಿ ಪುರಾಣ ಸಿನಿಮಾಗೆ ಅಹಲ್ಯಾ ಸುರೇಶ್‌ ಮತ್ತು ಮೋಕ್ಷಾ ಕುಶಾಲ್‌ ಇಬ್ಬರು ನಾಯಕಿಯರು. ಆದಿಯ ಹೆಂಡತಿಯಾಗಿ ಅಹಲ್ಯಾ ನಟಿಸಿದ್ದಾರೆ. ತಮ್ಮ ಪಾತ್ರ ಮತ್ತು ಸಿನಿಮಾದ ವಿಶೇಷ ಕುರಿತು ಅವರು ಲವಲವಿಕೆ ಜತೆ ಮಾತನಾಡಿದ್ದಾರೆ.

* ಆದಿ ಪುರಾಣ ಸಿನಿಮಾದ ವಿಶೇಷವೇನು?
ಹೊಸದಾಗಿ ಮದ್ವೆಯಾದ ಗಂಡ ಹೆಂಡತಿಯ ಜೀವನ ಹೇಗಿರುತ್ತದೆ ಎನ್ನುವುದನ್ನು ಕಾಮಿಡಿ ರೂಪದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಎಲ್ಲಿಯೂ ವಲ್ಗರ್‌ ಅನಿಸದೇ ಇರುವುದು ಸಿನಿಮಾಗಳ ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು. ಸಿನಿಮಾದಲ್ಲಿ ಒಂದು ಮದುವೆ ಹಾಡಿದೆ. ಬ್ರಾಹ್ಮಣರ ಮದುವೆಯಲ್ಲಿ ಏನೆಲ್ಲ ಶಾಸ್ತ್ರಗಳು ಇರುತ್ತವೆಯೋ ಅವೆಲ್ಲವನ್ನೂ ಶೂಟ್‌ ಮಾಡಿದ್ದಾರೆ. ಬಹುಶಃ ಈ ರೀತಿ ಹಾಡು ಬಂದಿರುವುದು ಇದೇ ಮೊದಲು ಇರಬೇಕು. ಈಗಾಗಲೇ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಶಶಾಂಕ್‌ ನಾಯಕ. ತುಂಬಾ ಚೆನ್ನಾಗಿ ನಟಿಸಿದ್ದಾರೆ.

* ಆದಿ ಪುರಾಣ ಸಿನಿಮಾ ರಿಲೀಸ್‌ ಆಗುತ್ತಿದೆ. ಈ ಚಿತ್ರದಲ್ಲಿ ಯಾವ ರೀತಿಯ ಪಾತ್ರ ಮಾಡಿದ್ದೀರಿ?

ಕಥಾ ನಾಯಕ ಆದಿಯ ಹೆಂಡತಿಯಾಗಿ ನಟಿಸಿದ್ದೇನೆ. ಅವಳು ತೀರಾ ಮುಗ್ಧ ಹುಡುಗಿ. ಭರತನಾಟ್ಯ ಕಲಾವಿದೆ. ಅಪ್ಪ ತೋರಿಸಿದ ಹುಡುಗನನ್ನೇ ಮದ್ವೆ ಆಗೋದು. ಮದ್ವೆಯ ನಂತರ ಅವಳ ಸಂಸಾರ ಹೇಗಿರುತ್ತದೆ ಎನ್ನುವುದೇ ಸಿನಿಮಾ.
* ಆದಿ ಪುರಾಣ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ?

ನಿರ್ಮಾಪಕ ಶಮಂತ್‌ ಅವರು ತಮ್ಮ ಚಿತ್ರಕ್ಕೆ ನಾಯಕಿ ಹುಡುಕುತ್ತಿರುವುದಾಗಿ ಗೊತ್ತಾಯಿತು. ನನ್ನ ಅನೇಕ ಸ್ನೇಹಿತರು ಈ ಸಿನಿಮಾಗೆ ರೆಫರ್‌ ಕೂಡ ಮಾಡಿದರು. ಹಾಗೆಯೇ ಭೇಟಿಯಾದೆ. ನಿರ್ದೇಶಕ ಮೋಹನ್‌ ಕಾಮಾಕ್ಷಿ ಅವರು ಕಥೆ ಹೇಳಿದ ಮೇಲೆ ಇನ್ನಷ್ಟು ಖುಷಿ ಆಯಿತು. ಅಭಿನಯಕ್ಕೆ ಅವಕಾಶ ಇರುವಂಥ ಪಾತ್ರವದು.
* ನೀವು ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ?

ಅನಿರೀಕ್ಷಿತವಾಗಿ ನಾನು ಸಿನಿಮಾ ರಂಗಕ್ಕೆ ಬಂದೆ. ಓದೋಕೆ ಅಂತ ಬೆಂಗಳೂರಿಗೆ ಬಂದಾಗ ಚಿತ್ರರಂಗದ ಬಗ್ಗೆ ಕುತೂಹಲ ಮೂಡಿತು. ಅದೇ ಹೊತ್ತಿನಲ್ಲೇ ಕಮರೊಟ್ಟು ಚೆಕ್‌ ಪೋಸ್ಟ್‌ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ಹಾಗೆಯೇ ಸಿನಿಮಾ ಜರ್ನಿ ಮುಂದುವರಿಯಿತು.

* ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲೂ ಸಕ್ರೀಯರಾಗಿದ್ದೀರಿ?

ಸ್ಯಾಂಡಲ್‌ವುಡ್‌ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ನಂತರ ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ದೀಪಾವಳಿಗೆ ತೆಲುಗು ಸಿನಿಮಾ ರಿಲೀಸ್‌ ಆಗುತ್ತಿದೆ. ತಮಿಳು ಸಿನಿಮಾ ಕೂಡ ಇದೇ ವರ್ಷ ಬಿಡುಗಡೆ ಮಾಡುವ ಪ್ಲಾನ್‌ ಮಾಡಿದ್ದಾರೆ.

ಅನಿರೀಕ್ಷಿತವಾಗಿ ನಾನು ಸಿನಿಮಾ ರಂಗಕ್ಕೆ ಬಂದೆ. ಓದೋಕೆ ಅಂತ ಬೆಂಗಳೂರಿಗೆ ಬಂದಾಗ ಚಿತ್ರರಂಗದ ಬಗ್ಗೆ ಕುತೂಹಲ ಮೂಡಿತು. ಅದೇ ಹೊತ್ತಿನಲ್ಲೇ ಕಮರೊಟ್ಟು ಚೆಕ್‌ ಪೋಸ್ಟ್‌ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ಹಾಗೆಯೇ ಸಿನಿಮಾ ಜರ್ನಿ ಮುಂದುವರಿಯಿತು.
ಅಹಲ್ಯಾ ಸುರೇಶ್

* ಭರತನಾಟ್ಯ ಕಲಾವಿದೆಯ ಪಾತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದೀರಾ?


ನಿಜ ಜೀವನದಲ್ಲಿ ಭರನಾಟ್ಯ ಕಲಾವಿದೆ ಆಗಬೇಕು ಎಂಬ ಆಸೆಯಿತ್ತು. ಅದು ಈಡೇರಿರಲಿಲ್ಲ. ಈಗ ಸಿನಿಮಾದಲ್ಲಿ ಸಿಕ್ಕಿದೆ. ಒಂದಷ್ಟು ತಯಾರಿ ಕೂಡ ಮಾಡಿಕೊಂಡು ಪಾತ್ರ ಮಾಡಿದ್ದೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌