ಆ್ಯಪ್ನಗರ

ರಿಲೀಸ್‌ಗೂ ಮುನ್ನ ಆಡಿಯನ್ಸ್‌ಗಾಗಿ ಆದಿ ಪುರಾಣ ಪ್ರೀಮಿಯರ್ ಶೋ

ಕಾಲೇಜು ಹುಡುಗರ ಜೀವನವನ್ನು ಆದಿ ಪುರಾಣದ ಸಿನಿಮಾದಲ್ಲಿ ಹೊಸ ಬಗೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕ ಮೋಹನ್‌ ಕಾಮಾಕ್ಷಿ. ಹಾಗಾಗಿಯೇ ಸಿನಿಮಾ ರಿಲೀಸ್‌ಗೂ ಮುನ್ನ, ಸೆ.30ರಂದು ಅವರು ಆಡಿಯನ್ಸ್‌ಗಾಗಿ ಪ್ರಿಮಿಯರ್‌ ಶೋ ಏರ್ಪಡಿಸಿದ್ದಾರೆ.

Vijaya Karnataka 29 Sep 2018, 5:00 am
ಆದಿ ಪುರಾಣ ಸಿನಿಮಾದಲ್ಲಿ ಕಾಲೇಜು ಹುಡುಗರ ಜೀವನವನ್ನು ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕ ಮೋಹನ್‌ ಕಾಮಾಕ್ಷಿ. ಸಿನಿಮಾ ಬಿಡುಗಡೆಗೂ ಮುನ್ನ ಆಡಿಯನ್ಸ್‌ ಫೀಡ್‌ ಬ್ಯಾಕ್‌ ತಗೆದುಕೊಳ್ಳುವುದಕ್ಕಾಗಿಯೇ ಅವರು ಸೆ.30ರಂದು ಪ್ರಿಮಿಯರ್‌ ಶೋ ಏರ್ಪಡಿಸಿದ್ದಾರೆ. ನೋಡುಗರ ಪ್ರತಿಕ್ರಿಯೆಯನ್ನು ಆಧರಿಸಿ ಅವರು ಸಿನಿಮಾದ ಪ್ರಚಾರವನ್ನೂ ಮಾಡಲಿದ್ದಾರಂತೆ.
Vijaya Karnataka Web adipurana


'ಸಾಮಾನ್ಯವಾಗಿ ಸಿಲಿಬ್ರಿಟಿಗಳಿಗೆ ಪ್ರಿಮಿಯರ್‌ ಶೋ ಮಾಡುವುದನ್ನು ನೋಡಿದ್ದೇವೆ. ಆದರೆ, ನಾವು ಸಾಮಾನ್ಯ ನೋಡುಗರಿಗೆ ಪ್ರಿಮಿಯರ್‌ ಏರ್ಪಡಿಸಿದ್ದೇವೆ. ಅಲ್ಲಿಗೆ ಬಂದ ನೋಡುಗರ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ಕಾಲೇಜು ಜೀವನ ಮತ್ತು ಆ ಹುಡುಗರು ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವ ರೀತಿಯನ್ನು ಸಿನಿಮಾದಲ್ಲಿ ತೋರಿಸುತ್ತಿದ್ದು, ಯೂತ್ಸ್‌ ಜತೆ ಪಾಲಕರೂ ಸಿನಿಮಾಗೆ ಬರಲಿ' ಅಂತಾರೆ ನಿರ್ದೇಶಕರು.

ಈಗಾಗಲೇ ಚಿತ್ರದ ಹಾಡುಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರಂತೆ. ಟ್ರೇಲರ್‌ಗೂ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾವನ್ನೂ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ಸಿನಿಮಾ ತಂಡದ್ದು. 'ಸೆನ್ಸಾರ್‌ ಮಂಡಳಿಯ ಹಲವು ಸದಸ್ಯರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಲವು ವಿಶೇಷಗಳನ್ನೂ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರದ ಬಗ್ಗೆ ನಮಗೂ ತುಂಬಾನೇ ನಂಬಿಕೆಯಿದೆ. ಬದುಕಿನ ಮೌಲ್ಯಗಳನ್ನು ಮನರಂಜನೆಯ ಮೂಲಕ ತೋರಿಸುತ್ತಿರುವುದರಿಂದ ಇದು ಎಲ್ಲರ ಮೆಚ್ಚಿನ ಸಿನಿಮಾ ಆಗಲಿದೆ ಎಂಬ ವಿಶ್ವಾಸ ನಮ್ಮದು' ಎನ್ನುವುದು ನಿರ್ಮಾಪಕ ಶಮಂತ್‌.

ಸಿನಿಮಾದ ಕಥೆಯೇ ವಿಶೇಷವಾಗಿದೆಯಂತೆ. ತಾರುಣ್ಯ ಮತ್ತು ಮದುವೆಯ ನಂತರ ಜೀವನದ ಹಲವು ರಸವತ್ತಾದ ಘಟನೆಗಳನ್ನು ಚಿತ್ರಕಥೆಯಲ್ಲಿ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ರೋಮಾಂಟಿಕ್‌ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದು,ಮುಗ್ಧ ಹುಡುಗನೊಬ್ಬನ ಜೀವನದ ಪುರಾಣ ಸಿನಿಮಾದಲ್ಲಿದೆ. ಹಾಗಾಗಿಯೇ ಈ ಚಿತ್ರಕ್ಕೆ ನಿರ್ದೇಶಕರು ಆದಿ ಪುರಾಣ ಎಂದು ಹೆಸರಿಟ್ಟಿದ್ದಾರೆ.

ಈ ಸಿನಿಮಾದ ಮೂಲಕ ಶಶಾಂಕ್‌ ನಾಯಕನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ರಂಗಭೂಮಿಯ ಹಲವು ಚಟುವಟಿಕೆಗಳಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ನಾನಾ ರೀತಿಯ ತರಬೇತಿ ಪಡೆದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಶಶಾಂಕ್‌ ನಾಯಕನಾದರೆ, ಅಹಲ್ಯ ಸುರೇಶ್‌ ಮತ್ತು ಮೋಕ್ಷಾ ಕುಶಾಲ್‌ ನಾಯಕಿಯರು. ರಂಗಾಯಣ ರಘು ತೀರಾ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾನ್ಯ ನೋಡುಗನಿಗೆ ಇಷ್ಟವಾಗುವಂಥ ಅನೇಕ ಅಂಶಗಳು ಆದಿ ಪುರಾಣ ಸಿನಿಮಾದಲ್ಲಿವೆ. ಹಾಗಾಗಿಯೇ ನಾವು ಕಾಮಾನ್‌ ಆಡಿಯನ್ಸ್‌ಗಾಗಿ ಪ್ರಿಮಿಯರ್‌ ಶೋ ಏರ್ಪಡಿಸಿದ್ದೇವೆ.
ಮೋಹನ್‌ ಕಾಮಾಕ್ಷಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌