ಆ್ಯಪ್ನಗರ

ನಿಖಿಲ್ ಶುಭ ಹಾರೈಕೆಗೆ ಅಭಿಷೇಕ್ ಅಂಬರೀಷ್ ಉತ್ತರವೇನು?

ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ... ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ... ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ... ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರೆದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೇ ಕೆಲಸ ಮಾಡಬಹುದು...

Vijaya Karnataka Web 30 May 2019, 6:28 pm
ನಾಳೆ, ಮೇ 31-2019ರಂದು ರೆಬಲ್ ಸ್ಟಾರ್ ಅಂಬರೀಷ್ ಮಗ ಅಭಿಷೇಕ್ ಅಂಬರೀಷ್ ನಾಯಕತ್ವದ ಮೊಟ್ಟಮೊದಲ ಸಿನಿಮಾ 'ಅಮರ್' ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಭಿಷೇಕ್ ಸ್ನೇಹಿತ, ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ಹಾಗು ನಟ ನಿಖಿಲ್ ಕುಮಾರಸ್ವಾಮಿಯವರು ಅಭಿಷೇಕ್ ಅಂಬರೀಷ್ ಅವರಿಗೆ ತಮ್ಮ ಸೋಷಿಯಲ್ ಪೇಜ್ ಮೂಲಕ ವಿಶ್ ಮಾಡಿದ್ದರು. ಇದೀಗ ಅಭಿಷೇಕ್, ನಿಖಿಲ್ ವಿಶ್‌ಗೆ ಥ್ಯಾಂಕ್ಸ್ ಹೇಳುತ್ತ ಪ್ರತ್ಯುತ್ತರ ನೀಡಿದ್ದಾರೆ.
Vijaya Karnataka Web nikhil3005


ಅಭಿಷೇಕ್ ಸಿನಿಮಾ ಯಶಸ್ಸಿಗೆ ಹಾರೈಸುತ್ತಾ, ಮಂಡ್ಯದಲ್ಲಿ ಸುಮಲತಾ ಗೆಲುವಿಗೂ ಸಹ ನಿಖಿಲ್ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಇದೀಗ ನಿಖಿಲ್ ಹಾರೈಕೆಗೆ ಅಭಿಷೇಕ್ ಪ್ರತ್ಯುತ್ತರ ನೀಡಿದ್ದಾರೆ. "ಧನ್ಯವಾದ ಗೆಳೆಯಾ.. ನಿಜಕ್ಕೂ ಇದು ಖುಷಿಯ ವಿಚಾರ. ನಿನಗೂ ಗೊತ್ತಿರುತ್ತೆ, ಮೊದಲ ಸಿನಿಮಾ ಬಿಡುಗಡೆ ಆಗುವ ಕ್ಷಣ ಹೇಗಿರುತ್ತೆ ಅನ್ನೋದು... ನಿನ್ನ ಮಾತುಗಳು ನಿನಗೆ ನನ್ನ ಮೇಲಿರುವ ಪ್ರೀತಿಯನ್ನು ತೋರುತ್ತದೆ. ಜೊತೆಗೆ, ಕನ್ನಡ ಸಿನಿಮಾ ಇಂಡಸ್ಟ್ರಿಯ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ನಾವಿಬ್ಬರೂ ಇದೇ ರೀತಿ ಸ್ನೇಹಿತರಾಗಿ ಮುಂದುವರೆಯೋಣ.. ಒಬ್ಬ ಸ್ನೇಹಿತನಾಗಿ ನಾನು ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ...

ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ... ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ... ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ... ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರೆದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೇ ಕೆಲಸ ಮಾಡಬಹುದು... ಮಂಡ್ಯದ ಬಗ್ಗೆ ನೀವು ಹೇಳಿರುವಂಥ ಪ್ರೋತ್ಸಾಹದ ಅಂಶಗಳು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿ... ನಿಮ್ಮ ಮಾತುಗಳಿಗೆ ಧನ್ಯವಾದಗಳು.." ಎಂದು ಅಮರ್ ಸಿನಿಮಾ ನಾಯಕ, ಅಂಬರೀಷ್-ಸುಮಲತಾ ಪುತ್ರ ಅಭಿಷೇಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಮತ್ತು ಫಲಿತಾಂಶದ ಕಾರಣಕ್ಕೆ ಮನಸ್ಸು ಮುರಿದುಕೊಂಡಿದ್ದರು ಎಂಬಂತೆ, ಅಭಿಷೇಕ್-ನಿಖಿಲ್ ಮತ್ತೆ ಸ್ನೇಹಿತರಾಗಿಯೇ ಮುಂದುವರಿಯುವ ಲಕ್ಷಣವನ್ನು ಇಬ್ಬರೂ ಪ್ರದರ್ಶಿಸಿದ್ದಾರೆ. ರಾಜಕೀಯ ದ್ವೇಷವನ್ನು ಮರೆತು ಚುನಾವಣೆಗೂ ಮೊದಲಿದ್ದ ಸ್ನೇಹವನ್ನು ಮತ್ತೆ ಮುಂದುವರಿಸಲು ಇಬ್ಬರೂ ನಿರ್ಧರಿಸಿದಂತೆ ಅವರಿಬ್ಬರ ನಡೆಯಲ್ಲಿ ಪ್ರಬುದ್ಧತೆ ಮನೆಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌