ಇದೇ ಫೆ.14ರಂದು ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಮೊದಲ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದೆ. ಹಾಗಾಗಿ ಯಂಗ್ ರೆಬಲ್ ಸ್ಟಾರ್ನನ್ನು ಸ್ವಾಗತಿಸಲು ಸ್ಯಾಂಡಲ್ವುಡ್ ಸಜ್ಜಾಗಿದೆ. ಟ್ವಿಟರ್ ಮೂಲಕ ಈಗಾಗಲೇ ಸುದೀಪ್, ಯಶ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ತಾರೆಯರು ಸ್ವಾಗತಿಸಿದ್ದಾರೆ. 'ಎತ್ತರಕ್ಕೆ ಬೆಳೆದು ನಿಲ್ಲು ಬ್ರದರ್'ಎಂದು ಸುದೀಪ್ ಹಾರೈಸಿದ್ದಾರೆ. ಜತೆಗೆ ಸುಮಲತಾ ಅಂಬರೀಷ್ ಕೂಡ ತಮ್ಮ ಮಗನಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಅಮರ್ ಸಿನಿಮಾದ ಮೂಲಕ ಅಭಿಷೇಕ್ ಸ್ಯಾಂಡಲ್ವುಡ್ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಖತ್ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಅಭಿಷೇಕ್ಗಾಗಿಯೇ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ಹೊಸ ಬಗೆಯ ಕಥೆಯನ್ನು ಬರೆದಿದ್ದಾರೆ.
ಇದೊಂದು ಆ್ಯಕ್ಷನ್ ಕಂ ಲವ್ಸ್ಟೋರಿ ಸಿನಿಮಾವಾಗಿದ್ದು, ದೇವರಾಜ್ ಸೇರಿದಂತೆ ಹೆಸರಾಂತ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ.
ಅಮರ್ ಸಿನಿಮಾದ ಮೂಲಕ ಅಭಿಷೇಕ್ ಸ್ಯಾಂಡಲ್ವುಡ್ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಖತ್ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಅಭಿಷೇಕ್ಗಾಗಿಯೇ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ಹೊಸ ಬಗೆಯ ಕಥೆಯನ್ನು ಬರೆದಿದ್ದಾರೆ.
ಇದೊಂದು ಆ್ಯಕ್ಷನ್ ಕಂ ಲವ್ಸ್ಟೋರಿ ಸಿನಿಮಾವಾಗಿದ್ದು, ದೇವರಾಜ್ ಸೇರಿದಂತೆ ಹೆಸರಾಂತ ಕಲಾವಿದರೇ ತಾರಾ ಬಳಗದಲ್ಲಿ ಇದ್ದಾರೆ.