ಆ್ಯಪ್ನಗರ

ಚುನಾವಣೆಯಲ್ಲಿ ಭಾಗಿಯಾದ ಸಿನಿತಾರೆಯರ ಸಿನಿಮಾ ಬ್ಯಾನ್: ಆಯೋಗಕ್ಕೆ ದೂರು

ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ನಟನಟಿಯರ ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸುವಂತೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅವರೆಲ್ಲರ ಸಿನಿಮಾಗಳು ಹಾಗೂ ಹಾಡುಗಳನ್ನು ಪ್ರಸಾರ ಮಾಡದಂತೆ ಕೋರಿ ದೂರು ಸಲ್ಲಿಸಲಾಗಿದೆ.

Vijaya Karnataka Web 20 Mar 2019, 8:52 pm
ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ನಟನಟಿಯರ ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸುವಂತೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ನಟಿ ಸುಮಲತಾ, ಅವರ ಪತಿ ದಿವಂಗತ ಅಂಬರೀಷ್ ,ನಟ ನಿಖಿಲ್ ಕುಮಾರಸ್ವಾಮಿ, ರಾಧಿಕಾ ಕುಮಾರಸ್ವಾಮಿ ಅವರೆಲ್ಲರ ಚಿತ್ರ ಪ್ರಸಾರ ಸ್ಥಗಿತಗೊಳಿಸಬೇಕು ಎಂದು ಬಾಗಲಕೋಟೆಯ ಯಲ್ಲಪ್ಪ ಹೆಗ್ಡೆ ಎಂಬುವವರಿಂದ ದೂರು ದಾಖಲಾಗಿದೆ.
Vijaya Karnataka Web sumalatha2003


ಯುವ ಶಕ್ತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾಗಿರುವ ಯಲ್ಲಪ್ಪ ಹೆಗ್ಡೆ ಅವರು ಈ ಬಗ್ಗೆ ದೂರು ದಾಖಲಿಸಿದ್ದು, ಚುನಾವಣೆಗೆ ನಿಂತಿರುವ ನಟನಟಿಯರಷ್ಟೆ ಅಲ್ಲದೇ, ಅವರಿಗೆ ಬೆಂಬಲ ಕೊಡುತ್ತಿರುವ ಸ್ಯಾಂಡಲ್‌ವುಡ್‌ ನಟರಾದ ಯಶ್, ದರ್ಶನ, ದೊಡ್ಡಣ್ಣ, ಜಗ್ಗೇಶ್ , ಪ್ರಕಾಶ್ ರೈ ಹಾಗೂ ನಟಿಯರಾದ ರಮ್ಯಾ, ಉಮಾಶ್ರೀ ಮುಂತಾದವರ ಸಿನಿಮಾಗಳು ಹಾಗೂ ಹಾಡುಗಳನ್ನು ಪ್ರಸಾರ ಮಾಡದಂತೆ ಕೋರಿ ದೂರು ಸಲ್ಲಿಸಲಾಗಿದೆ.

ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದವರ ಸಿನಿಮಾಗಳು, ಹಾಡು ಟಿವಿಯಲ್ಲಿ ಪ್ರಸಾರವಾಗುತ್ತಿವೆ. ಮತದಾರರ ಮೇಲೆ ಸಿನಿಮಾ ಹಾಡು ಪ್ರಭಾವ ಬೀರುತ್ತವೆ. ಪೊಸ್ಟ್ ಮೂಲಕ ದೂರಿನ ಪ್ರತಿ ರವಾನೆಯಾಗಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.

ಯುವ ಶಕ್ತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾಗಿರುವ ಯಲ್ಲಪ್ಪ ಹೆಗ್ಡೆ ಅವರು ಪೋಸ್ಟ್ ಮೂಲಕ ಬೆಂಗಳೂರಿನ ಚುನಾವಣಾಧಿಕಾರಿಗೆ ಈ ರೀತಿ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ನಟಿ ಹಾಗೂ ದಿವಂಗತ ರೆಬಲ್ ಸ್ಟಾರ್ ಪತ್ನಿ ಸುಮಲತಾ ಅಂಬರೀಷ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್ ಪರ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ನಿಂತಿದ್ದು ಸುಮಲತಾ ಅವರಿಗೆ ಪ್ರಬಲ ಸ್ಪರ್ಧಿ ಎನಿಸಿದ್ದಾರೆ. ಕಾರಣ, ಇಲ್ಲಿಯವರೆಗೂ ಮಂಡ್ಯ ಕ್ಷೇತ್ರವು ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌