ಆ್ಯಪ್ನಗರ

ಖನನ ಚಿತ್ರವು ಕಿರಿಯರಿಗಲ್ಲ, ಹಿರಿಯರಿಗೆ: ನಾಯಕ ನಟ ಆರ್ಯವರ್ಧನ್

'ಖನನ' ಹೆಸರೇ ಸೂಚಿಸುವಂತೆ, ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಸ್ಟೋರಿ ಎಂದು ನಿರ್ದೇಶಕರಾಗಿರುವ 'ರಾಧ' ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಧ ಅವರು "ಖನನ ಎಂದರೆ ಹೂಳುವುದು ಹಾಗೂ ಅಗೆಯುವುದು ಎಂಬ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಆದರೆ, ಈ ಚಿತ್ರದಲ್ಲಿ ಈ ಟೈಟಲ್ ಯಾವ ಅರ್ಥ ಹೊಂದಿದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.

Vijaya Karnataka Web 12 May 2019, 5:41 pm
ಮೊನ್ನೆ, ಮೇ 10, 2019ರಂದು ಹೊಸಬರ ತಂಡದ 'ಖನನ' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆರ್ಯವರ್ಧನ್ ನಾಯಕರಾಗಿ, ಯುವ ಕಿಶೋರ್ ಖಳನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಅಸ್ಸಾಂ ಚೆಲುವೆ ಕರಿಷ್ಮಾ ನಾಯಕಿ. ಹಲವು ತೆಲುಗು ಸಿನಿಮಾಗಳಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವುಳ್ಳ 'ರಾಧಾ' ಅವರು ಈ 'ಖನನ' ಚಿತ್ರದ ನಿರ್ದೇಶಕರು. ಇದೀಗ ಈ ಚಿತ್ರವು ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
Vijaya Karnataka Web arya1105


ಈಗಾಗಲೇ ಕೆಲವು ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು ನಟನೆಯನ್ನು ಪಳಗಿಸಿಕೊಂಡು 'ಖನನ' ಚಿತ್ರದ ಮೂಲಕ ಆರ್ಯವರ್ಧನ್ ನಾಯಕರಾಗಿದ್ದಾರೆ. ಸಿನಿಮಾದಲ್ಲಿನ ಅವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿ ಹೊಗಳಿದ್ದಾರೆ. ವಿಲನ್ ರೋಲ್‌ನಲ್ಲಿ ನಟಿಸಿರುವ ಯುವಕಿಶೋರ್ ಸಹ ತಮ್ಮ ನಟನೆಯ ಮೂಲಕ ಭರ್ಜರಿ ಎಂಬಂತೆ ಮಿಂಚಿದ್ದಾರೆ. ನಿರ್ದೇಶಕ 'ರಾಧಾ' ತಮ್ಮ ಮೊದಲ ಚಿತ್ರದಲ್ಲಿಯೇ ಬಹಳಷ್ಟು ಭರವಸೆ ಮೂಡಿಸಿದ್ದಾರೆ. ಹಿನ್ನೆಲೆ ಸಂಗೀತ, ಕ್ಯಾಮರಾ ಕೆಲಸ ಹಾಗು ಸಂಕಲನ ಕೂಡ ಚಿತ್ರವನ್ನು ಮೇಲ್ಮಟ್ಟಕ್ಕೆ ತರುವಲ್ಲಿ ಸಾಕಷ್ಟು ಸಹಾಯ ಮಾಡಿದೆ ಎಂಬ ಅಭಿಪ್ರಾಯ ಎಲ್ಲ ಕಡೆಯಿಂದ ವ್ಯಕ್ತವಾಗುತ್ತಿದೆ.

ಖನನ ಚಿತ್ರದ ನಾಯಕ ನಟ ಆರ್ಯವರ್ಧನ್ ಅವರು ಪ್ರೇಕ್ಷಕರು ಈ ಚಿತ್ರವನ್ನು ಯಾವ ಕಾರಣಕ್ಕೆ ನೋಡಬೇಕೆಂದು ಹೇಳಿದ್ದಾರೆ. "ಖನನ ಚಿತ್ರವು ಕಿರಿಯರಿಗಲ್ಲ, ಹಿರಿಯರಿಗೆ.. ಏಕೆಂದರೆ, ಈ ಚಿತ್ರಕ್ಕೆ ಸೆನ್ಸಾರ್ 'ಎ' ಪ್ರಮಾಣಪತ್ರ ನೀಡಿದೆ... ಈ ಚಿತ್ರವನ್ನು ವಯಸ್ಕರು ನೋಡಿ ತಮ್ಮ ಮಕ್ಕಳಿಗೆ ಹೇಗೆ ಸಮಾಜದಲ್ಲಿ ಸತ್ಯವಂತರು, ಪ್ರಾಮಾಣಿಕತೆ ಉಳ್ಳವರು ಮತ್ತು ಮಾನವೀಯತೆ ಹೊಂದಿರುವಂಥ ವ್ಯಕ್ತಿಗಳಾಗಿ ಬದುಕಬೇಕೆಂಬ ಸಂದೇಶ ನೀಡಬಹುದು.. ಮಕ್ಕಳಾಗಿದ್ದ ನಾವು ದೊಡ್ಡವರಾಗುತ್ತಿದ್ದಂತೆ ಅದ್ಯಾಕೆ ಬೇರೆ ರೀತಿಯಲ್ಲಿ ಬೆಳೆಯುತ್ತ ಸಮಾಜಕ್ಕೆ ಕಂಟಕ ತರುವಂಥ ವ್ಯಕ್ತಿಗಳಾಗಿ ಬೆಳೆಯುತ್ತೇವೆ ಎಂಬ ಕಥೆಯೇ ಖನನ.." ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

'ಖನನ' ಹೆಸರೇ ಸೂಚಿಸುವಂತೆ, ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಸ್ಟೋರಿ ಎಂದು ನಿರ್ದೇಶಕರಾಗಿರುವ 'ರಾಧ' ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಧ ಅವರು "ಖನನ ಎಂದರೆ ಹೂಳುವುದು ಹಾಗೂ ಅಗೆಯುವುದು ಎಂಬ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಆದರೆ, ಈ ಚಿತ್ರದಲ್ಲಿ ಈ ಟೈಟಲ್ ಯಾವ ಅರ್ಥ ಹೊಂದಿದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಆದರೆ, ಈ ಚಿತ್ರವು ಮಾಮೂಲಿ ಎಂಬ ಕಥೆ ಹೊಂದಿಲ್ಲ. ವಿಭಿನ್ನ ಕಥೆ, ನಿರೂಪಣೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡುವ ಮಟ್ಟಿಗೆ ಸಿನಿಮಾ ಮೂಡಿ ಬಂದಿದೆ" ಎಂದು ಹೇಳಿದ್ದಾರೆ.

ರವಿಕಾಂತ್ ಜಿ ಬರೆದಿರುವ 'ಖನನ' ಕಥೆಗೆ, ಚಿತ್ರಕಥೆ, ಡೈಲಾಗ್ ಬರೆದು ರಾಧ ಅವರು ನಿರ್ದೇಶನ ಮಾಡಿದ್ದಾರೆ. ರಮೇಶ್ ತ್ರಿಪಾಠಿ ಕ್ಯಾಮರಾ ಕೈಚಳಕ, ಕುನ್ನಿ ಗುಡಿಪಾಟಿ ಸಂಗೀತ, ನಲಿನ್ ಬಡೆ ಸಂಕಲನ ಈ ಚಿತ್ರಕ್ಕಿದೆ. ಜಾಯ್ ಮ್ಯಾಥ್ಯೂ, ಬಾಬ್ಬಿ ಮತ್ತು ರಾಜೇಶ್ ಕೋರಿಯೋಗ್ರಫಿ ಚಿತ್ರಕ್ಕಿದೆ. ಚಿತ್ರದಲ್ಲಿ ಅವಿನಾಶ್, ಓಂಪ್ರಕಾಶ್ ರಾವ್, ವಿನಯಾ ಪ್ರಕಾಶ್, ಬ್ಯಾಂಕ್ ಜನಾರ್ಧನ್, ಶ್ರೀನಿವಾಸ್ ರಾವ್, ಮೋಹನ್ ಜುನೇಜಾ, ಕೆಂಪೇಗೌಡ, ಹೊನ್ನವಳ್ಳಿ ಕೃಷ್ಣ ಮತ್ತು ಅವಿನಾಶ್ ಜಾ ಅವರು ಪೋಷಕವರ್ಗದಲ್ಲಿ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌