ಆ್ಯಪ್ನಗರ

ಬೆಂಗಳೂರು ಡಿಸಿ ಆದ ಗುಳಿಕೆನ್ನೆ ಚೆಲುವ ದಿಗಂತ್‌!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ಗುಳಿಕೆನ್ನೆ ಚೆಲುವ ದಿಗಂತ್ ಡಿಸಿಯಾಗಿ ಕಾಣಿಸುತ್ತಿದ್ದಾರೆ. ಕಥೆಗೆ ತಿರುವು ನೀಡುವಂತಹ ಪಾತ್ರವನ್ನು ಪೋಷಿಸಿದ್ದಾರೆ ದಿಗಂಗ್.

Vijaya Karnataka 17 Jul 2019, 8:10 pm
ಗುಳಿಕೆನ್ನೆ ಚೆಲುವ ದಿಗಂತ್‌ ಈಗ ಬೆಂಗಳೂರಿನ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಮುಖ್ಯಭೂಮಿಕೆಯ 'ಯುವರತ್ನ' ಸಿನಿಮಾದಲ್ಲಿ ಇವರು ಡಿಸಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಅತಿಥಿ ಪಾತ್ರವಾಗಿದ್ದು, ಕಥೆಗೆ ತಿರುವು ನೀಡುವಂಥ ದೃಶ್ಯಗಳಲ್ಲಿ ದಿಗಂತ್‌ ಕಾಣಿಸಿಕೊಳ್ಳುವುದು ವಿಶೇಷ.
Vijaya Karnataka Web diganth


ಡಿಸಿ ಮುಂದೆ ಹಲವು ಸವಾಲುಗಳಿದ್ದು ಅವುಗಳನ್ನು ಅವರು ಹೇಗೆಲ್ಲ ನಿಭಾಯಿಸುತ್ತಾರೆ ಎನ್ನುವುದು ದಿಗಂತ್‌ ಮಾಡುವ ಪಾತ್ರದ ಹಿನ್ನೆಲೆಯಂತೆ. ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಶನ್‌ನ ಎರಡನೇ ಸಿನಿಮಾ ಇದಾಗಿದ್ದು, ಸಿನಿಮಾದ ತಾರಾ ಬಳಗ ದಿನೇ ದಿನೇ ದೊಡ್ಡದಾಗುತ್ತಿದೆ.

'ದಿಗಂತ್‌ ನಮ್ಮ ಸಿನಿಮಾದಲ್ಲಿ ಬೆಂಗಳೂರಿನ ಜಿಲ್ಲಾಧಿಕಾರಿ. ಪುನೀತ್‌ ಅವರ ಸ್ನೇಹಿತರೂ ಕೂಡ. ತೆರೆಯ ಮೇಲೆ ದಿಗಂತ್‌ ಕನಿಷ್ಠ 45 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಪುನೀತ್‌ ಮತ್ತು ದಿಗಂತ್‌ ಕಾಂಬಿನೇಷÜನ್‌ ತುಂಬಾ ಚೆನ್ನಾಗಿದೆ'ಎನ್ನುತ್ತಾರೆ ನಿರ್ದೇಶಕರು.

'ಈಗಾಗಲೇ 45ದಿನಗಳ ಕಾಲದ ಚಿತ್ರೀಕರಣ ನಡೆದಿದೆ. ಜುಲೈ 28ರಿಂದ ಮುಂದಿನ ಹಂತದ ಶೂಟಿಂಗ್‌ಗೆ ಪ್ಲ್ಯಾನ್‌ ಮಾಡಲಾಗುತ್ತಿದೆ. ಈ ಬಾರಿಯ ಚಿತ್ರೀಕರಣದಲ್ಲಿ ಪ್ರಕಾಶ್‌ ರಾಜ್‌, ಸೋನುಗೌಡ, ಧನಂಜಯ ಸೇರಿದಂತೆ ಹಲವು ಕಲಾವಿದರು ಸೇರಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಶೂಟ್‌ ಆಗಿರುವ ದೃಶ್ಯಗಳು ಸುಂದರವಾಗಿ ಮೂಡಿ ಬಂದಿವೆ. ಖಂಡಿತಾ ಪ್ರೇಕ್ಷಕರು ಖುಷಿ ಪಡಲಿದ್ದಾರೆ'ಎಂದರು ಸಂತೋಷ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌