ಆ್ಯಪ್ನಗರ

ಆರೋಗ್ಯವಾಗಿದ್ದೇನೆ, ವದಂತಿಗಳನ್ನು ನಂಬಬೇಡಿ ಎಂದ ದ್ವಾರಕೀಶ್

ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿರುವ ವದಂತಿಯಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ದ್ವಾರಕೀಶ್ ವೀಡಿಯೊ ಮಾಡಿದ್ದು ದಯವಿಟ್ಟು ವದಂತಿಗಳನ್ನು ನಂಬಬೇಡಿ ಎಂದಿದ್ದಾರೆ.

Vijaya Karnataka Web 16 Jul 2019, 1:16 pm
ನಟ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿದ್ದ ವದಂತಿಗಳಿಂದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವತಃ ದ್ವಾರಕೀಶ್ ಅವರೇ ವೀಡಿಯೊ ಒಂದನ್ನು ರಿಲೀಸ್ ಮಾಡಿದ್ದು ತಮ್ಮ ಆರೋಗ್ಯ ಬಗ್ಗೆ ಅದರಲ್ಲಿ ಹೇಳಿದ್ದಾರೆ.

"ನಮಸ್ಕಾರ. ನಿಮ್ಮ ದ್ವಾರಕೀಶ್, ಕನ್ನಡದ ಕುಳ್ಳ ಆರೋಗ್ಯವಾಗಿ ಇದ್ದೀನಿ, ಹುಷಾರಾಗಿ ಇದ್ದೀನಿ. ಯಾವ ತರಹದ ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ. ಏನೇ ಆದರೂ ನಿಮಗೆ ಗೊತ್ತಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ್ ಚೆನ್ನಾಗಿದ್ದಾನೆ, ಚೆನ್ನಾಗಿದ್ದೀನಿ, ಚೆನ್ನಾಗಿ ಇರ್ತೀನಿ. ಎಲ್ಲಾ ಆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ" ಎಂದಿದ್ದಾರೆ ದ್ವಾರಕೀಶ್. [ಅಮ್ಮ-ಮಗನ ತ್ಯಾಗದ ಕಥೆ ಹೇಳುವ ಅಮ್ಮಾ ಐ ಲವ್‌ ಯೂ]

ದ್ವಾರಕೀಶ್ ಅವರಿಗೆ ಏನೋ ಆಗಿದೆ ಎಂಬ ಸುದ್ದಿಗಳು ಹಬ್ಬಿದ ಹಿನ್ನೆಲೆಯಲ್ಲಿ ನಿರ್ದೇಶಕ ಕೆ ಎಂ ಚೈತನ್ಯ ಸಹ ಟ್ವೀಟ್ ಮಾಡಿದ್ದಾರೆ. "ದ್ವಾರಕೀಶ್ ಸಾರ್ ಚೆನ್ನಾಗಿದ್ದಾರೆ. ದೇವರ ದಯೆ. ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌