ಆ್ಯಪ್ನಗರ

ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ: ನಟ ಜಗ್ಗೇಶ್

ನಟ ಜಗ್ಗೇಶ್ ಅವರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ವೀಡಿಯೋ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ತಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ. ನನ್ನ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಧರಿಸಿದ್ದಾರೆ.

Vijaya Karnataka Web 7 Apr 2018, 3:28 pm
ನಟ ಜಗ್ಗೇಶ್ ಅವರು ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಮತ್ತು ಅದಕ್ಕೆ ಸಂಬಂಧಿಸಿದ ವೀಡಿಯೋ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ತಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ. ನನ್ನ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.
Vijaya Karnataka Web jaggesh


ಇಷ್ಟಕ್ಕೂ ನಡೆದದ್ದೇನು ಎಂದು ಅವರು ತಮ್ಮ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. 'ನಾನು ಕಲಾವಿದರ ಕ್ರಿಕೆಟ್ ಮ್ಯಾಚ್‌ಗೆ ಹೋಗಿದ್ದೆ. ಆಗ ಅನೇಕ ಮಾಧ್ಯಮ ಮಿತ್ರರಿಂದ ದೂರವಾಣಿ ಕರೆಬರುತ್ತಿತ್ತು. ಆದರೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಒಬ್ಬರ ಮೇಲೆ ಹಲ್ಲೆ ಮಾಡಿದ್ದೇನೆ ಎಂಬ ಪ್ರಚಾರ ನೀಡಲಾಗುತ್ತಿದೆ. ಈ ಬಗ್ಗೆ ನಾನು ಪ್ರಾಮಾಣಿಕವಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ' ಎಂದಿದ್ದಾರೆ.

ಮಾದೇಗೌಡರು ಎಂಬುವವರು ನನ್ನ ಭಾಮೈದ. ಅವರು ಭೂಮಿಗೀತ ಚಿತ್ರದ ನಿರ್ಮಾಪಕರು. ಮಲ್ಲೇಶ್ವರಂನಲ್ಲಿ ಸುಮಾರು ಔಟ್‌ಲೆಟ್‌ಗಳು ಆರ್ಗನೈಸ್ ಶಾಪ್‌ಗಳನ್ನೆಲ್ಲಾ ಇಟ್ಟುಕೊಂಡಿದ್ದಾರೆ. ಸುಮಾರು ಎಕರೆಗಳಲ್ಲಿ ತರಕಾರಿ ಬೆಳೆದು ಬೆಂಗಳೂರಿಗೆ ಸರಬರಾಜು ಮಾಡುತ್ತಾರೆ.

ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ಅವರ ಪುತ್ರನಿಗೆ ಒಂದು ಔಟ್‌ಲೆಟ್ ಹಾಕಿಕೊಟ್ಟಿದ್ದಾರೆ. ವ್ಯಕ್ತಿಯೊಬ್ಬರು ಕಾರ್ಪೊರೇಟರ್ ಮಂಜಣ್ಣ ಹೆಸರನ್ನು ಹೇಳಿಕೊಂಡು ರೋಲ್‌ಕಾಲ್ ಮಾಡಲು ಪ್ರಯತ್ನಿಸುತ್ತಿದ್ದ. ಇದನ್ನು ನನ್ನ ಗಮನಕ್ಕೂ ತಂದರು. ನಾನು ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ, ಕಾರ್ಪೊರೇಟರ್ ಮಂಜಣ್ಣ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದೆ.

ಈ ಸಂಗತಿಯನ್ನು ಮಂಜಣ್ಣ ಅವರಿಗೂ ತಿಳಿಸಿದೆ. ನಮ್ಮ ಕಡೆಯವರು ಆ ರೀತಿ ಯಾರೂ ಇಲ್ಲ ಎಂದರು. ನೆನ್ನೆ ಸಹ ಇದೇ ರೀತಿ ಆಗಿ ಅಲ್ಲಿ ಚೇರ್ ಮತ್ತಿತರ ಸಾಮಾನುಗಳನ್ನು ಒದ್ದು ರಂಪಾಟ ಮಾಡುತ್ತಿದ್ದ ಕಾರಣ ಅವರು ಸಹಿಸಲು ಸಾಧ್ಯವಾಗದೆ, ನನಗೆ ಫೋನ್ ಮಾಡಿ ತಿಳಿಸಿದರು. ವ್ಯಕ್ತಿಯೊಬ್ಬ ಬಂದು ಮಿಸ್ ಬಿಹೇವ್ ಮಾಡುತ್ತಿದ್ದಾನೆ ಎಂದು ತಿಳಿಸಿದರು.

ವಾಕಿಂಗ್‌ನಲ್ಲಿದ್ದ ನಾನು ಕಾರ್ಪೊರೇಟರ್, ಎಲ್ಲರ ಜತೆಗೆ ನಾನು ಅಲ್ಲಿಗೆ ಹೋದೆ. ಆಗ ಅವನು ಅಲ್ಲಿಂದ ತಪ್ಪಿಸಿಕೊಳ್ಳಲು ಹೋದ. ಅವನನ್ನು ಹಿಡಿಯುವಾಗ ಸ್ವಲ್ಪ ಎಳೆದಾಟ ಆಗಿದೆಯೇ ಹೊರತು, ನಾನು ಯಾವುದೇ ಹಲ್ಲೆ ಮಾಡಿಲ್ಲ. ತಾನು ಹಲ್ಲೆ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಸೈಬರ್ ಪೊಲೀಸರಿಗೂ ದೂರು ನೀಡುತ್ತೇನೆ ಎಂದಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಅವರ ಮಾತಿನಲ್ಲೇ ಕೇಳಿ. ಓವರ್ ಟು ಜಗ್ಗೇಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌