ಆ್ಯಪ್ನಗರ

ಜಗ್ಗೇಶ್ ಮನೆಯಲ್ಲಿ ಶಿವಕುಮಾರ ಸ್ವಾಮೀಜಿಗಳ ಪಾದುಕೆ

ಕೆಲ ವರ್ಷಗಳ ಹಿಂದೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ನಟ ಜಗ್ಗೇಶ್ ಅವರು ಕುಟುಂಬ ಸಮೇತ ಹೋಗಿದ್ದಾಗ ಅವರಿಗೆ ಪ್ರಸಾದ ರೂಪದಲ್ಲಿ ಶ್ರೀಗಳ ಪಾದುಕೆಗಳು ಸಿಕ್ಕಿವೆ. "ಗುರುಗಳು ಕೊಟ್ಟಂತಹ ಪಾದುಕೆ ನನ್ನ ಬಳಿ ಇದೆ. ಅವರ ರೂಪದಲ್ಲಿ ಅದನ್ನು ನಾನು ಪೂಜಿಸುತ್ತಿರುತ್ತೇನೆ" ಎಂದಿದ್ದಾರೆ ಜಗ್ಗೇಶ್.

Vijaya Karnataka Web 22 Jan 2019, 1:23 pm
ನಟ ಜಗ್ಗೇಶ್ ಅವರು ಕೆಲ ವರ್ಷಗಳ ಹಿಂದೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಪತ್ನಿ ಸಮೇತ ಹೋಗಿದ್ದಾಗ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು. ಆಗ ಪ್ರಸಾದ ರೂಪದಲ್ಲಿ ಅವರಿಗೆ ಶ್ರೀಗಳ ಪಾದುಕೆಗಳು ಸಿಕ್ಕಿವೆ. ಆ ಪಾದುಕೆಯನ್ನು ಪಡೆದ ನಾವೇ ಧನ್ಯರು ಎಂದಿದ್ದಾರೆ ಜಗ್ಗೇಶ್.
Vijaya Karnataka Web jaggesh (1)


ಇಂದು ಶ್ರೀಗಳ ಅಂತಿಮ ವಿಧಿವಿಧಾನಗಳು ನೆರವೇರಲಿದ್ದು ಅಂತಿಮ ದರ್ಶನಕ್ಕೆ ಜಗ್ಗೇಶ್ ಮಠಕ್ಕೆ ಆಗಮಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಗ್ಗೇಶ್, ತಮಗೆ ಪಾದುಕೆಗಳು ಸಿಕ್ಕ ಬಗ್ಗೆ ನೆನಪಿಸಿಕೊಂಡರು.

ನನ್ನ ನೆಚ್ಚಿನ ಗುರುಗಳು ತುಮಕೂರಿನ ಶ್ರೀಗಳು ಶಿವನ ಪಾದಕ್ಕೆ ಸೇರಿದ್ದಾರೆ ಎಂಬುದು ಕೇಳಿ ನನ್ನ ಮನಸ್ಸಿಗೆ ತುಂಬಾ ದುಃಖ ಆಯಿತು. ಆದರೂ ನನ್ನ ಮನಸ್ಸಿಗೆ ಒಂದು ಸಮಾಧಾನ ಆಗಿದ್ದೇನು ಎಂದರೆ ನಡೆದಾಡುವ ದೇವರು ದೇವರ ಬಳಿಗೆ ಹೋಗಿದ್ದಾರೆ ಅನ್ನಿಸಿತು. ಅವರ ಆಶೀರ್ವಾದ ಎಲ್ಲರ ಮೇಲೆ ಇದೆ ಎಂದಿದ್ದಾರೆ.

ಗುರುಗಳು ಕೊಟ್ಟಂತಹ ಪಾದುಕೆ ನನ್ನ ಬಳಿ ಇದೆ. ಅವರ ರೂಪದಲ್ಲಿ ಅದನ್ನು ನಾನು ಪೂಜಿಸುತ್ತಿರುತ್ತೇನೆ ಎಂದಿದ್ದಾರೆ. ಜಗ್ಗೇಶ್ ಅವರು ಗುರು ರಾಯರ ಆರಾಧಕರು. ಅದೇ ರೀತಿ ಶಿವಕುಮಾರ ಸ್ವಾಮೀಜಿಗಳ ಬಗ್ಗೆಯೂ ಭಕ್ತಿ ಭಾವ ಇತ್ತು. ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲೂ ಶಿವಕುಮಾರ ಸ್ವಾಮೀಜಿಗಳ ಪಾದುಕೆಗಳನ್ನು ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌