ಆ್ಯಪ್ನಗರ

ರಕ್ಷಿತಾ ಪ್ರೇಮ್ ಕಾಲೆಳದ ಕಿಚ್ಚ ಸುದೀಪ್ ಟ್ವೀಟ್ ಭಾರೀ ವೈರಲ್!

ನಟಿ, ಪ್ರೇಮ್ ಪತ್ನಿ ರಕ್ಷಿತಾ, 'ಪತಿಯನ್ನು ಮಾತ್ರ ಕರೆದುಕೊಂಡು ಹೋಗಿದ್ದೀರಿ, ನನ್ನನ್ನೂ ಕರೆದುಕೊಂಡು ಹೋಗಬೇಕಿತ್ತು.. ಸಲ್ಮಾನ್ ಖಾನ್ ನನ್ನ ಫೇವರೇಟ್ ಬಾಲಿವುಡ್ ನಟ.. ನಾನೇನು ಕೆಟ್ಟದ್ದನ್ನು ಮಾಡಿದ್ದೀನಿ ನಿಮಗೆ..." ಎಂದು ಟ್ವೀಟರ್‌ ಮೆಸೇಜ್ ಮೂಲಕ ಸುದೀಪ್ ಅವರನ್ನು ಕೇಳಿದ್ದಾರೆ.

Vijaya Karnataka Web 5 May 2019, 2:31 pm
ಕನ್ನಡದ ನಟ ಕಿಚ್ಚ ಸುದೀಪ್ ಅವರು ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸಲ್ಮಾನ್‌ ಖಾನ್‌ ಅಭಿನಯದ 'ದಬಾಂಗ್ 3' ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದು, ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಸುದೀಪ್ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದು, ಹೋಗುವಾಗ ತಮ್ಮ ಜೊತೆಗೆ 'ದಿ ವಿಲನ್' ನಿರ್ದೇಶಕ ಪ್ರೇಮ್ ಅವರನ್ನೂ ತಮ್ಮೊಡನೆ ಕರೆದುಕೊಂಡು ಹೋಗಿದ್ದಾರೆ.
Vijaya Karnataka Web kichchasudeep0505


ಈ ಕಾರಣಕ್ಕೆ ನಟಿ, ಪ್ರೇಮ್ ಪತ್ನಿ ರಕ್ಷಿತಾ, 'ಪತಿಯನ್ನು ಮಾತ್ರ ಕರೆದುಕೊಂಡು ಹೋಗಿದ್ದೀರಿ, ನನ್ನನ್ನೂ ಕರೆದುಕೊಂಡು ಹೋಗಬೇಕಿತ್ತು.. ಸಲ್ಮಾನ್ ಖಾನ್ ನನ್ನ ಫೇವರೇಟ್ ಬಾಲಿವುಡ್ ನಟ.. ನಾನೇನು ಕೆಟ್ಟದ್ದನ್ನು ಮಾಡಿದ್ದೀನಿ ನಿಮಗೆ..." ಎಂದು ಟ್ವೀಟರ್‌ ಮೆಸೇಜ್ ಮೂಲಕ ಸುದೀಪ್ ಅವರನ್ನು ಕೇಳಿದ್ದಾರೆ. ಅದಕ್ಕೆ ಸುದೀಪ್ ಟ್ವೀಟರ್ ಮೂಲಕವೇ ಮೆಸೇಜ್ ಕೊಟ್ಟಿದ್ದಾರೆ.

'ದಿ ವಿಲನ್' ಚಿತ್ರ ಸುಮಾರು 2 ವರ್ಷಗಳ ವರೆಗೆ ಶೂಟಿಂಗ್ ಆಯಿತು. ಒಂದೇ ಒಂದು ದಿನವೂ ನೀವು ಸೆಟ್ಟಿಗೆ ಆಗಮಿಸಿದ್ದ ನೆನಪು ನನಗಿಲ್ಲ.. ಚಂದ್ರಾ ಲೇಔಟ್‌ನಿಂದ ಮಿನರ್ವ ಮಿಲ್ ಸಮೀಪ ಬರಲಾಗದ ನೀವು ಮುಂಬೈವರೆಗೆ ಹೇಗೆ ಬರುತ್ತೀರಿ ಯೋಚಿಸಿಯೇ ನನಗೆ ಕರೆಯಲು ಸಾಧ್ಯವಾಗಲಿಲ್ಲ.." ಎಂದು ನಟಿ ರಕ್ಷಿತಾರ ಕಾಲೆಳೆದಿದ್ದಾರೆ. ಸದ್ಯ ಈ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.

ಅಂದಹಾಗೆ, ನಟ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಕನ್ನಡ ಚಿತ್ರವು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪೈಲ್ವಾನ್ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಸುದೀಪ್ ಅಭಿನಯದ ತೆಲುಗು ಚಿತ್ರವಾದ 'ಸೈರಾ ನರಸಿಂಹ ರೆಡ್ಡಿ ಕೂಡ ಚಿತ್ರೀಕರಣ ಮುಗಿಸಿದೆ. ಸದ್ಯಕ್ಕೆ 'ದಬಾಂಗ್-3' ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಸುದೀಪ್ ಆ ಬಳಿಕ ಕನ್ನಡದ 'ರಂಗ ಬಿಲ್ಲ ಭಾಷಾ' ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌