ಆ್ಯಪ್ನಗರ

ವಾಟ್ಸ್‌ಆ್ಯಪ್‌‌ಗೆ ಗುಡ್ ಬೈ ಹೇಳಿದ ನಟ ಮೋಹನ್ ಲಾಲ್

ಒಟ್ಟಾರೆ ಮೋಹನ್ ಲಾಲ್ ಅವರ ಈ ನಿರ್ಧಾರ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ಸಾಮಾಜಿಕ ಮಾಧ್ಯಮಗಳಿಂದ ನಮ್ಮ ನೆಮ್ಮದಿ ಹಾಳಾಗುವಂತೆ ಇರಬಾರದು. ಅದರಿಂದ ಪ್ರಯೋಜನವಾದರೆ ಪರ್ವಾಗಿಲ್ಲ. ಆದರೆ ಅದೇ ನಮ್ಮ ಕೆಲಸಕ್ಕೆ, ಮನಸ್ಸಿನ ಆರೋಗ್ಯಕ್ಕೆ ಮಾರಕವಾದರೆ ಬಿಡುವುದೇ ಉತ್ತಮ ಅಲ್ಲವೇ?

Samayam Malayalam 18 Feb 2019, 12:51 pm
ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸ್‌ಆ್ಯಪ್‌‌ಗೆ ಗುಡ್ ಬೈ ಹೇಳಿದ ಬಳಿಕ ತುಂಬಾ ಸಂತೋಷವಾಗಿ ಇದ್ದೇನೆ ಎಂದು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹೇಳಿದ್ದಾರೆ. ತಾನು ವಾಟ್ಸ್‌ಆ್ಯಪ್‌ ಡಿಲೀಟ್ ಮಾಡಿರುವುದಾಗಿ ಹೇಳಿದ್ದಾರೆ.
Vijaya Karnataka Web mohanlal


"ಈಗ ನನಗೆ ಎಂದು ಒಂದಷ್ಟು ಸಮಯ ಸಿಗುತ್ತಿದೆ. ಬೆಳಗ್ಗೆ ಸುದ್ದಿ ಪತ್ರಿಕೆಗಳನ್ನು ಓದುವ ಅವಕಾಶ ಮತ್ತೆ ಸಿಕ್ಕಿದೆ. ದಿನಗಳು ಸಂತೋಷವಾಗಿ ಉರುಳುತ್ತಿವೆ. ನಾನು ಅರ್ಧ ಓದಿ ಬಿಟ್ಟಿದ್ದ ಪುಸ್ತಕಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ನಾನು ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾಗ ಸಾಕಷ್ಟು ಮೆಸೇಜ್‌ಗಳು ಬರುತ್ತಿದ್ದವು. ಕೆಲಸದಲ್ಲಿದ್ದಾಗ ಬರುತ್ತಿದ್ದ ಕೆಲವು ಮೆಸೇಜ್‌ಗಳಿಂದ ಮನಸ್ಸಿಗೆ ನೋವಾಗುತ್ತಿತ್ತು. ಕಸಿವಿಸಿಯಾಗುತ್ತಿತ್ತು" ಎಂದಿದ್ದಾರೆ.

"ಆ ರೀತಿ ಬರುತ್ತಿದ್ದ ಕೆಲವು ಮೆಸೇಜ್‌ಗಳು ನನ್ನ ಮೇಲೆ ನೆಗಟೀವ್ ಪ್ರಭಾವ ತೋರುತ್ತಿದ್ದವು. ಒಮ್ಮೆ ನಾನು ಸೆಟ್ಸ್‌ನಲ್ಲಿ ಇದ್ದಾಗ ಒಂದು ಹಸುಗೂಸನ್ನು ಮಂಚದ ಮೇಲಿಂದ ಎಸೆಯುತ್ತಿರುವ ವೀಡಿಯೋ ನನಗೆ ಯಾರೋ ಹಂಚಿಕೊಂಡರು. ಅದನ್ನು ನೋಡಿದ ಬಳಿಕ ನನ್ನ ಮನಸ್ಸನ್ನು ಕೆಲಸದಲ್ಲಿ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಅಂತಹ ವೀಡಿಯೋ ನೋಡಿದ ಬಳಿಕ ಯಾರೇ ಆಗಲಿ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ ಮೋಹನ್ ಲಾಲ್.

ಹಾಗಿದ್ದರೆ ವಾಟ್ಸ್‌ಆ್ಯಪ್‌ ಬಳಸುತ್ತಿಲ್ಲ ಎಂದರೆ ಮುಖ್ಯವಾದ ಮಾಹಿತಿ ಗೊತ್ತಾಗುವುದು ಹೇಗೆ ಎಂಬ ಬಗ್ಗೆಯೂ ಮೋಹನ್ ಲಾಲ್ ಸ್ಪಷ್ಟೀಕರಣ ನೀಡಿದ್ದಾರೆ. ಒಂದು ವೇಳೆ ಮುಖ್ಯವಾದ ವಿಷಯ ಹೇಳಬೇಕು ಎಂದರೆ ಇ-ಮೇಲ್ ಮಾಡುವಂತೆ ತಿಳಿಸಿದ್ದಾರಂತೆ. ಮಾತನಾಡಿಕೊಳ್ಳಲು ವಾಟ್ಸ್‌ಆ್ಯಪ್‌ ಒಂದೇ ದಿಕ್ಕೇ? ಬೇರೆ ದಾರಿಗಳು ಸಾಕಷ್ಟು ಇವೆ" ಎಂದಿದ್ದಾರೆ ಮೋಹನ್ ಲಾಲ್.

ಒಟ್ಟಾರೆ ಮೋಹನ್ ಲಾಲ್ ಅವರ ಈ ನಿರ್ಧಾರ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ಸಾಮಾಜಿಕ ಮಾಧ್ಯಮಗಳಿಂದ ನಮ್ಮ ನೆಮ್ಮದಿ ಹಾಳಾಗುವಂತೆ ಇರಬಾರದು. ಅದರಿಂದ ಪ್ರಯೋಜನವಾದರೆ ಪರ್ವಾಗಿಲ್ಲ. ಆದರೆ ಅದೇ ನಮ್ಮ ಕೆಲಸಕ್ಕೆ, ಮನಸ್ಸಿನ ಆರೋಗ್ಯಕ್ಕೆ ಮಾರಕವಾದರೆ ಬಿಡುವುದೇ ಉತ್ತಮ ಅಲ್ಲವೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌