ಆ್ಯಪ್ನಗರ

'ಅದ್ದೂರಿ ಪಾರ್ಟ್ 2'ಗೆ ಉಪೇಂದ್ರ ಸಹೋದರನ ಪುತ್ರ ನಾಯಕ

ಸಿಕ್ವೇಲ್‌ನಲ್ಲಿ ನಿರಂಜನ್‌ ಹೇಗೆ ಕಾಣಲಿದ್ದಾರೆ ಎಂಬ ಚರ್ಚೆ ಕೂಡ ಗಾಂಧಿನಗರದಲ್ಲಿ ಶುರುವಾಗಿದೆ. ಕೆಲ ಚಿತ್ರಗಳಲ್ಲಿ ನಿರಂಜನ್‌ ನಟಿಸಿದ್ದರೂ, ನಾಯಕನಾಗಿ ಮೊದಲ ಬಾರಿಗೆ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಜವಾಬ್ದಾರಿ ಕೂಡ ಹೊರಲಿದ್ದಾರೆ.

Vijaya Karnataka 13 May 2019, 1:17 pm
ರಾಧಿಕಾ ಪಂಡಿತ್‌ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಅದ್ಧೂರಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಧ್ರುವ ಅವರಿಗೆ ಸ್ಟಾರ್‌ಗಿರಿ ತಂದುಕೊಟ್ಟಿತ್ತು. ಈಗ ಅದ್ದೂರಿ ಪಾರ್ಟ್‌ 2 ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಚ್ಚರಿಯ ಸಂಗತಿ ಅಂದರೆ, ಈ ಸಿನಿಮಾದಲ್ಲಿ ನಾಯಕನಾಗಿ ಧ್ರುವ ನಟಿಸುತ್ತಿಲ್ಲ. ಈ ಸ್ಥಾನವನ್ನು ಉಪೇಂದ್ರ ಸಹೋದರನ ಪುತ್ರ ನಿರಂಜನ್‌ ತುಂಬಲಿದ್ದಾರೆ.
Vijaya Karnataka Web niranjan


ಅದ್ಧೂರಿ ಗೆಲುವಿಗೆ ಕಥೆಯಷ್ಟೇ ಧ್ರುವ ಸರ್ಜಾ ಕೂಡ ಕಾರಣರು. ನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. ಆದರೆ, ಸಿಕ್ವೇಲ್‌ನಲ್ಲಿ ನಿರಂಜನ್‌ ಹೇಗೆ ಕಾಣಲಿದ್ದಾರೆ ಎಂಬ ಚರ್ಚೆ ಕೂಡ ಗಾಂಧಿನಗರದಲ್ಲಿ ಶುರುವಾಗಿದೆ. ಕೆಲ ಚಿತ್ರಗಳಲ್ಲಿ ನಿರಂಜನ್‌ ನಟಿಸಿದ್ದರೂ, ನಾಯಕನಾಗಿ ಮೊದಲ ಬಾರಿಗೆ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಜವಾಬ್ದಾರಿ ಕೂಡ ಹೊರಲಿದ್ದಾರೆ. ಹಾಗಾಗಿ ಈಗಿನಿಂದಲೇ ಪಾತ್ರಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರಂತೆ. ಅಂದಹಾಗೆ ಈ ಚಿತ್ರವನ್ನು ವೆಂಕಟೇಶ್‌ ನಿರ್ದೇಶನ ಮಾಡುತ್ತಿದ್ದು, ಶಂಕರ್‌ ರೆಡ್ಡಿ ನಿರ್ಮಾಣ ಮಾಡಲಿದ್ದಾರೆ.

ಅದ್ದೂರಿ ಸಿನಿಮಾ ಮೂಲಕ ಧ್ರುವ ಸರ್ಜಾ ಸ್ಯಾಂಡಲ್‍ವುಡ್‌ಗೆ ಪರಿಚಯವಾಗಿದ್ದರು. ಎಪಿ ಅರ್ಜುನ್ ನಿರ್ದೇಶನದ ಸಿನಿಮಾ. ರವಿ ವರ್ಮಾರ ಸಾಹಸ ಸಂಯೋಜನೆ, ಡ್ಯೂಪ್ ಇಲ್ಲದಂತೆ ಕೆಲವು ಸೀನ್‌ಗಳಲ್ಲಿ ಧ್ರುವ ಸರ್ಜಾ ಅಭಿನಯಿಸಿದ್ದು ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸಲ್ಲಿ 16. 4 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದ್ದು ಗೊತ್ತೇ ಇದೆ.

ಇಷ್ಟೆಲ್ಲಾ ಸದ್ದು ಮಾಡಿದ ಸಿನಿಮಾದ ಭಾಗ 2 ಬರುತ್ತಿದೆ ಎಂದರೆ ನಿರೀಕ್ಷೆಗಳು ಸಹಜ. ಹಾಗಾಗಿ ನಿರಂಜನ್ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ. ಹಾಗಾಗಿ ಅದ್ದೂರಿ 2 ಸಿನಿಮಾ ಸ್ಯಾಂಡಲ್‍ವುಡ್‌ನಲ್ಲಿ ನಿರೀಕ್ಷಿಸುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌