ಆ್ಯಪ್ನಗರ

ಮೋದಿ ಭಜನೆ ಬಿಜೆಪಿ ಬಣ್ಣ ಬಯಲು ಮಾಡಿದೆ: ಪ್ರಕಾಶ್ ರೈ

ಪ್ರಕಾಶ್ ರೈ ಅವರ ಪೋಸ್ಟ್ ನೋಡಿದ್ದೇ ತಡ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿರುವ ಮಂದಿ ಅವರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗದುಕೊಂಡಿದ್ದಾರೆ. ಅನೇಕರು ವಿಭಿನ್ನ ರೀತಿಯಲ್ಲಿ ಪ್ರಕಾಶ್ ರೈ ಅವರ ವಿರುದ್ಧ ಭಾರೀ ಕಾಮೆಂಟ್ಸ್‌ಗಳನ್ನೇ ಬರೆದಿದ್ದಾರೆ.

Vijaya Karnataka Web 17 Feb 2019, 6:38 pm
ನಿನ್ನೆ, ಫೆಬ್ರವರಿ 16, 2019ರಂದು ಮಂಡ್ಯ, ಮದ್ದೂರು ಸಮೀಪದ 'ಕೆಎಂ ದೊಡ್ಡಿ'ಯಲ್ಲಿ ನಡೆದ, 'ಪುಲ್ವಾಮಾ ಭಯೋತ್ಪಾದಕ ದಾಳಿ'ಯಲ್ಲಿ ಮಡಿದ ಮಂಡ್ಯದ ವೀರ ಯೋಧ 'ಗುರು' ಅವರ ಅಂತ್ಯ ಸಂಸ್ಕಾರ ಹಾಗೂ ಸಂತಾಪ ಸಭೆಯಲ್ಲಿ ನಟ ಪ್ರಕಾಶ್ ರೈ ಭಾಗವಹಿಸಿದ್ದಾರೆ. ಅಲ್ಲಿ, ಅವರ ಮೇಲೆ ಹಲ್ಲೆ ಪ್ರಯತ್ನ ನಡೆದಿದ್ದು ಆಗ ನಡೆದ ತಳ್ಳಾಟದಲ್ಲಿ ನಟ ಪ್ರಕಾಶ್ ರೈ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ನಂತರ, ಪೊಲೀಸ್ ಮಧ್ಯಸ್ಥಿಕೆಯಲ್ಲಿ ಪ್ರಕಾಶ್ ರೈ ಅವರನ್ನು ಕಾರಿಗೆ ಹತ್ತಿಸಲಾಗಿದ್ದು ಅಲ್ಲಿಂದ ಅವರು ತೆರಳಿದ್ದಾರೆ ಎನ್ನಲಾಗಿದೆ.
Vijaya Karnataka Web prakashrai17


ಈ ವಿಷಯಕ್ಕೆ ಸಂಬಂಧಪಟ್ಟಂತೆ ತಮ್ಮ ಟ್ವಿಟರ್ ಪೇಜ್‌ನಲ್ಲಿ ನಟ ಪ್ರಕಾಶ್ ರೈ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ ಅವರು
" BJP GOONS your attempt to attack me and shout Modi slogans at me in MANDYA when I’m mourning with my country shows your desperation.“ಮಂಡ್ಯ” ದಲ್ಲಿ ನಡೆದ ಸಂತಾಪ ಸಭೆಯಲ್ಲಿದ್ದ ನನ್ನ ಮೇಲೆ ನೀವು BJP ಯವರು ಮಾಡಿದ ಹಲ್ಲೆ... ಹಾಗು ಮೋದಿ ಭಜನೆ ನಿಮ್ಮ ಬಣ್ಣವನ್ನು ಬಯಲು ಮಾಡಿದೆ. SHAME #terroristsOndemocracy"
ಎಂದು ಬರೆದಿದ್ದಾರೆ.

ಪ್ರಕಾಶ್ ರೈ ಅವರ ಪೋಸ್ಟ್ ನೋಡಿದ್ದೇ ತಡ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿರುವ ಮಂದಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಂಡಿದ್ದಾರೆ. ಅನೇಕರು ವಿಭಿನ್ನ ರೀತಿಯಲ್ಲಿ ಪ್ರಕಾಶ್ ರೈ ಅವರ ವಿರುದ್ಧ ಭಾರೀ ಕಾಮೆಂಟ್ಸ್‌ಗಳನ್ನೇ ಬರೆದಿದ್ದಾರೆ. ಅವುಗಳಲ್ಲಿ ಕೆಲವು ನಿಮ್ಮ ಗಮನಕ್ಕಿರಲಿ..

"ನಾವೂ ವಿಡಿಯೋ ನೋಡಿದ್ದೇವೆ. ಅವರು ಬಿಜೆಪಿ ಗೊಂಡಾಗಳಲ್ಲ. ಅಲ್ಲಿ ನೆರೆದಿದ್ದ ಸಾಮಾನ್ಯ ಜನರು ಅಷ್ಟೆ.
ನೀವು ಸುಳ್ಳು ಹೇಳೋದು ನಿಲ್ಲಿಸಬೇಕು ಅಥವಾ ಅವರು ಬಿಜೆಪಿ ಗೊಂಡಾಗಳೆಂದು ಸಾಕ್ಷಿ ತೋರಿಸಬೇಕು. 🙄"

ಎಂದು ಅಂತರ್ಜಾಲ ಪ್ರೇಮಿಯೊಬ್ಬರು ಟ್ವೀಟ್ ಮಾಡಿದ್ದರೆ, ಇನ್ನೊಬ್ಬರು

"ಮೋದಿ ಮೋದಿ ಅಂತ ಕೂಗಿದವರೆಲ್ಲ ಬಿಜೆಪಿಯವರು ಅನ್ನೋದು ತಪ್ಪು, ಒಬ್ಬ ಪ್ರಧಾನಿಗೆ ಅಭಿಮಾನಿಯಾಗಿದ್ದರೆ ತಪ್ಪೇನು?
ದೇಶಭಕ್ತನೆಂದು ಹೇಳಿಕೊಂಡು ದೇಶವಿರೋದಿಗಳೊಂದಿಗೆ(tukde gang) ನಿಲ್ಲುವುದು ತಪ್ಪಲ್ಲವೇ?
ನಿಮಗೆ ಮೋದಿಯ ಕೊಡುಗೆ ಕಾಣದಿರಬಹುದು, ಕಂಡವರು ಕೊಂಡಾಡಿದ್ರೆ ತಪ್ಪೇನು?"

ಎಂದು ಪ್ರಕಾಶ್ ರೈ ಅವರನ್ನು ಇನ್ನೊಂದು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ.

ಒಟ್ಟಿನಲ್ಲಿ, ಪದೇ ಪದೇ ಹೋದಲ್ಲಿ ಬಂದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ನಟ ಪ್ರಕಾಶ್ ರೈ ಅವರಿಗೆ 'ಮಂಗಳಾರತಿ' ಆಗುತ್ತಿದೆ. ಇವೆಲ್ಲ ಯಾಕಾಗಿ ಆಗುತ್ತಿವೆ ಎಂಬುದು ಪ್ರಕಾಶ್ ರೈ ಅವರನ್ನು ಬಿಟ್ಟು ಬೇರೆ ಎಲ್ಲರಿಗೂ ಅರ್ಥವಾಗುತ್ತಿದೆ ಎಂದು 'ಸಾಮಾಜಿಕ ಜಾಲತಾಣ' ಸೇರಿದಂತೆ ಭಾರತದ ಎಲ್ಲಾ ಮೂಲೆಗಳಲ್ಲಿ ಕೇಳಿ ಬರುತ್ತಿದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌