ಆ್ಯಪ್ನಗರ

Shiva Rajkumar Kavacha: ಶಿವಣ್ಣ 'ಕವಚ'ದಲ್ಲಿ ಅಣ್ಣಾವ್ರ ಸೂಪರ್ ಹಿಟ್ ಸಾಂಗ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ರೀಮೇಕ್ ಸಿನಿಮಾ ಕವಚ. ಈ ಸಿನಿಮಾದಲ್ಲಿ ಅಣ್ಣಾವ್ರ ಹೊಸ ಬೆಳಕು ಸಿನಿಮಾದ ಹೊಸ ಬೆಳಕು ಮೂಡುತಿದೆ ಹಾಡನ್ನು ಹೊಸ ರೂಪದಲ್ಲಿ ತರಲಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ, ವಿಜಯ ಪ್ರಕಾಶ್ ಕಂಠ ಈ ಹಾಡಿಗಿದೆ. "ಇಂದಿನ ಸಂದರ್ಭಕ್ಕೆ ತಕ್ಕಂತೆ ಈ ಹಾಡನ್ನು ಮರುಸೃಷ್ಟಿ ಮಾಡಲಾಗುತ್ತಿದೆ" ಎಂದಿದ್ದಾರೆ ಚಿತ್ರದ ನಿರ್ದೇಶಕ ಜಿವಿಆರ್ ವಾಸು.

TIMESOFINDIA.COM 3 Jan 2019, 5:46 pm
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ 16 ವರ್ಷಗಳ ಬಳಿಕ ಶಿವಣ್ಣ ಅಭಿನಯಿಸುತ್ತಿರುವ ರೀಮೇಕ್ ಸಿನಿಮಾ ಇದು. ಇದೀಗ ಈ ಸಿನಿಮಾಗಾಗಿ ವರನಟ ಡಾ. ರಾಜ್‍ಕುಮಾರ್ ಅಭಿನಯದ "ಹೊಸ ಬೆಳಕು" ಸಿನಿಮಾದ ಸೂಪರ್ ಹಿಟ್ ಗೀತೆ ಹೊಸ ಬೆಳಕೂ ಮೂಡುತಿದೆ.. ಹಾಡು ರಿಮಿಕ್ಸ್ ರೂಪದಲ್ಲಿ ಹೊರತರುತ್ತಿದ್ದಾರೆ.
Vijaya Karnataka Web kavacha


ಕವಚ ಸಿನಿಮಾ ಜನವರಿ ಮಧ್ಯೆ ಬಿಡುಗಡೆಯಾಗಲು ಸಿದ್ಧವಾಗಿದ್ದು ಅರ್ಜುನ್ ಜನ್ಯ ಸಂಗೀತದ ಈ ಹಾಡು ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿದೆ. 1958ರಲ್ಲಿ ತೆರೆಕಂಡಿದ್ದ ಹೊಸ ಬೆಳಕು ಸಿನಿಮಾದಲ್ಲಿ ರಾಜ್‍ಕುಮಾರ್‌ಗೆ ಸರಿತಾ ಜೋಡಿಯಾಗಿದ್ದರು.

ಚಿ.ಉದಯಶಂಕರ್ ಸಾಹಿತ್ಯ, ಎಲ್ ಎಂ ರಂಗರಾವ್ ಸಂಗೀತದ ಹಾಡು ಕಿವಿಗೆ ಬಿದ್ದರೆ ಇಂದಿಗೂ ಹೊಸ ಹುಮ್ಮಸ್ಸು, ಉತ್ಸಾಹ ಪುಟಿದೇಳುತ್ತದೆ. ಇದೀಗ ಈ ಹಾಡಿಗೆ ಹೊಸ ಅಂಶಗಳನ್ನು ಸೇರಿಸಿ ತರಲಾಗುತ್ತಿದೆ. "ಇಂದಿನ ಸಂದರ್ಭಕ್ಕೆ ತಕ್ಕಂತೆ ಈ ಹಾಡನ್ನು ಮರುಸೃಷ್ಟಿ ಮಾಡಲಾಗುತ್ತಿದೆ" ಎಂದಿದ್ದಾರೆ ಚಿತ್ರದ ನಿರ್ದೇಶಕ ಜಿವಿಆರ್ ವಾಸು.

ದೃಷ್ಟಿ ವಿಕಲಚೇತನ ಕೂಡ ಅಶಕ್ತನಲ್ಲ ಎಂಬ ಅಂಶವೇ ಹಿರಿಯ ನಟ ಶಿವರಾಜ್‌ ಕುಮಾರ್‌ ರೀಮೇಕ್‌ ಕಥೆಯುಳ್ಳ ಕವಚ ಸಿನಿಮಾದಲ್ಲಿ ನಟಿಸಲು ಕಾರಣ ಎಂದು ನಿರ್ದೇಶಕ ಜಿವಿಆರ್‌ ವಾಸು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ರೀಮೇಕ್‌ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ನಿಲುವು ತಾಳಿದ್ದ ಶಿವಣ್ಣ, ಕಥೆ ಚೆನ್ನಾಗಿದೆ ಎಂಬ ಏಕೈಕ ಕಾರಣಕ್ಕೆ ಕವಚ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ದೃಷ್ಟಿ ವಿಕಲಚೇತನನಾಗಿ ಕಾಣಿಸಿಕೊಂಡಿದ್ದು, ಇದು ಮಲೆಯಾಳಂನ 'ಒಪ್ಪಂ' ಸಿನಿಮಾದ ರೀಮೇಕ್‌. 2002ರಲ್ಲಿ 'ನಿನ್ನೇ ಪ್ರೀತಿಸುವೆ'ಚಿತ್ರದ ನಂತರ ರೀಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಅವರು ಘೋಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌