ಆ್ಯಪ್ನಗರ

ಯೋಧರ ಮಾರಣಹೋಮಕ್ಕೆ ಮಿಡಿದ ನಟ ಸತೀಶ್ ನೀನಾಸಂ

ಯಾವ ಸಂಘಟನೆ ಮಾಡಿದೆಯೋ ಅವರೆಲ್ಲರಿಗೂ ಸರಿಯಾಗಿ ಶಿಕ್ಷೆಯಾಗಲಿ. ಇದೊಂದು ರೀತಿ ವಿಪರ್ಯಾಸ. ಮತ್ತೆ ಅಸಹ್ಯ ಹುಟ್ಟಿಸುವಂತಹ ಸಂಗತಿ. ವೀರಾವೇಶದಿಂದ ಹೋರಾಡಿದ ಎಲ್ಲಾ ಯೋಧರಿಗೂ ಸಹ ನಮ್ಮ ನಮನ. ಹಾಗೆಯೇ ಅವರೆಲ್ಲಾ ಕುಟುಂಬಬಳಿಗೆ ಶಾಂತಿ ಸಿಗಲಿ, ಧೈರ್ಯ ಸಿಗಲಿ, ಸರಕಾರದಿಂದ ಆರ್ಥಿಕವಾಗಿಯೂ ಒಳ್ಳೆಯ ಸಹಾಯ ಸಿಗಲಿ.

Vijaya Karnataka Web 16 Feb 2019, 12:39 pm
ಜಮ್ಮು-ಕಾಶ್ಮೀರದಲ್ಲಿ 40ಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾದ ಭೀಕರ ಉಗ್ರ ದಾಳಿ ವಿರುದ್ಧ ದೇಶದಾದ್ಯಂತ ಸೇಡಿನ ಕಿಡಿ ಹೊತ್ತಿಕೊಂಡಿದೆ. ಜತೆಗೆ ಸಿಆರ್‌ಪಿಎಫ್‌ ಪ್ರತಿಕಾರದ ಸಂಕಲ್ಪ ತೊಟ್ಟಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರೂ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದು, ಸೇಡು ತೀರಿಸಿಕೊಳ್ಳಲು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವುದಾಗಿ ಘೋಷಿಸಿದ್ದಾರೆ. ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಉಗ್ರರ ಅಟ್ಟಹಾಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂಬಲ್ ಚಿತ್ರದಲ್ಲಿ ಖಡಕ್ ಐಎಎಸ್ ಅಧಿಕಾರಿ (ಡಿಕೆ ರವಿ ಅವರ ಪಾತ್ರ ಎನ್ನಲಾಗಿದೆ) ಪಾತ್ರ ಪೋಷಿಸಿರುವ ಸತೀಶ್ ನೀನಾಸಂ ಅವರೂ ಸಹ ಟ್ವಟರ್‌ನಲ್ಲಿ ವೀಡಿಯೋ ಸಂದೇಶ ರವಾನಿಸಿದ್ದಾರೆ.
Vijaya Karnataka Web sathish-ninasam


"ಹಾಯ್ ಎಲ್ಲರಿಗೂ ನಮಸ್ತೆ. ಇಂದು ನಿಜಕ್ಕೂ ಎಲ್ಲರಿಗೂ ಬೇಸರದ ದಿನ ಎಂದು ಹೇಳಬಹುದು. ತುಂಬಾ ದುರಂತದ ದಿನ ಎಂದು ಹೇಳಬಹುದು. ಸುಮಾರು 45 ಜನ ಯೋಧರನ್ನು ನಾನು ಕಳೆದುಕೊಂಡಿದ್ದೇವೆ. ಮಂಡ್ಯದ ನಮ್ಮ ಒಬ್ಬ ಯೋಧನನ್ನೂ ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಧೈರ್ಯ ಬರಲಿ. ಖಂಡಿತವಾಗಿ ಆ ಧೈರ್ಯ ಬರುತ್ತೆ ಎಂಬ ನಂಬಿಕೆ ನನಗಿಲ್ಲ. ಆದರೂ ನಮ್ಮ ಹಾರೈಕೆ ಇದು. ನಾವೆಲ್ಲರೂ ನಿಮ್ಮ ಜತೆಗಿದ್ದೇವೆ.


ಯಾರು ನಮ್ಮ ದೇಶದ ಸೈನಿಕರ ಮೇಲೆ ಅಟ್ಯಾಕ್ ಮಾಡಿ ಈವತ್ತು ಮಾರಣಹೋಮ ಮಾಡಿದ್ದಾರೆ. ಅವರೆಲ್ಲರಿಗೂ ಸರಿಯಾಗಿ ಶಿಕ್ಷೆಯಾಗಲಿ. ಯಾವ ಸಂಘಟನೆ ಮಾಡಿದೆಯೋ ಅವರೆಲ್ಲರಿಗೂ ಸರಿಯಾಗಿ ಶಿಕ್ಷೆಯಾಗಲಿ. ಇದೊಂದು ರೀತಿ ವಿಪರ್ಯಾಸ. ಮತ್ತೆ ಅಸಹ್ಯ ಹುಟ್ಟಿಸುವಂತಹ ಸಂಗತಿ. ವೀರಾವೇಶದಿಂದ ಹೋರಾಡಿದ ಎಲ್ಲಾ ಯೋಧರಿಗೂ ಸಹ ನಮ್ಮ ನಮನ. ಹಾಗೆಯೇ ಅವರೆಲ್ಲಾ ಕುಟುಂಬಬಳಿಗೆ ಶಾಂತಿ ಸಿಗಲಿ, ಧೈರ್ಯ ಸಿಗಲಿ, ಸರಕಾರದಿಂದ ಆರ್ಥಿಕವಾಗಿಯೂ ಒಳ್ಳೆಯ ಸಹಾಯ ಸಿಗಲಿ. ನಾವೆಲ್ಲರೂ ಅವರ ಜತೆಗೆ ಇದ್ದೇವೆ. ನಾವೆಲ್ಲರೂ ಈ ದೇಶದ ಜೊತೆಗಿದ್ದೇವೆ ಎಂದು ತಿಳಿಸಲು ಇಷ್ಟಪಡ್ತೀನಿ" ಎಂದಿದ್ದಾರೆ ನೀನಾಸಂ ಸತೀಶ್.

ನಮ್ಮ ರಾಜ್ಯದ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ಶನಿವಾರ
ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ ವೀರಯೋಧ ಎಚ್‌.ಗುರು ಅವರ ಅಂತ್ಯ ಸಂಸ್ಕಾರ ಶನಿವಾರ ಸಕಲ ಸರಕಾರಿ ಹಾಗೂ ಸೇನಾ ಗೌರವಗಳೊಂದಿಗೆ ಶನಿವಾರ ನೆರವೇರಲಿದೆ. ಶನಿವಾರ ಬೆಳಗ್ಗೆ ಪಾರ್ಥಿವ ಶರೀರ ಗುರು ಅವರ ಹುಟ್ಟೂರಾದ ಮದ್ದೂರು ತಾಲೂಕಿನ ಗುಡಿಗೆರೆಗೆ ತಲುಪಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌