ಆ್ಯಪ್ನಗರ

ಬಾಗಲಕೋಟ: ಸತ್ಯಜಿತ್‌ಗೆ ಕೃತಕ ಕಾಲು ಜೋಡಣೆ

ಗಾಂಧಿನಗರ ಮರೆತರೂ ಬಾಗಲಕೋಟ ಸತ್ಯಜಿತ್‌ರನ್ನು ಮರೆಯಲಿಲ್ಲ.

Vijaya Karnataka Web 25 Oct 2017, 7:11 pm
ಬಾಗಲಕೋಟ: ಕನ್ನಡ ಚಿತ್ರರಂಗದ ಹಿರಿಯ ಖಳನಟ ಸತ್ಯಜಿತ್ ಅವರಿಗೆ ಬಾಗಲಕೋಟ ದಲ್ಲಿ ಕೃತಕ ಕಾಲು ಜೋಡಿಸಲಾಗಿದೆ.
Vijaya Karnataka Web actor satyajit gets artificial limb
ಬಾಗಲಕೋಟ: ಸತ್ಯಜಿತ್‌ಗೆ ಕೃತಕ ಕಾಲು ಜೋಡಣೆ


ನಗರದ ಕಟ್ಟಿ ಆಸ್ಪತ್ರೆಯ ಕೃತಕ ಕಾಲು ಜೋಡಣೆ ತಜ್ಞ ಶ್ರೀಧರ ನಾಯಕ ಜೋಡಣೆ ಕೈಗೊಂಡಿದ್ದಾರೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಅಂದಾಜು 4 ಲಕ್ಷ 50 ಸಾವಿರ ರೂ. ತಗಲುವ ಕೃತಕ ಕಾಲನ್ನು ಬಾಗಲಕೋಟ ದಲ್ಲಿ 2 ಲಕ್ಷ 20 ಸಾವಿರ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ.

ನಿರ್ವಹಣೆ ಹಾಗೂ ಆಸ್ಪತ್ರೆ ವೆಚ್ಚದಲ್ಲಿ ಕಡಿತವಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಕಾಲು ಜೋಡಿಸಲಾಗಿದೆ.

ಗ್ಯಾಂಗ್ರಿನ್ ಪೀಡಿತವಾಗಿದ್ದರಿಂದ ಕೆಲವು ತಿಂಗಳುಗಳ ಹಿಂದೆ ಸತ್ಯಜಿತ್ ಕಾಲಿನ ಕೆಳ ಭಾಗವನ್ನು ತೆಗೆದು ಹಾಕಲಾಗಿತ್ತು. 25 ದಿನಗಳ ನಂತರ ಸತ್ಯಜಿತ್ ಮತ್ತೆ ಅಭಿನಯಕ್ಕೆ ಮರಳಲಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಜಿತ್ ' ಕಲಾವಿದರ ಸಂಘದಿಂದ ನನಗೆ ನೆರವು ದೊರೆತಿಲ್ಲ. ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿದ್ದು ಕಲಾವಿದರ ಸಂಘದ ದೊಡ್ಡಣ್ಣ ಹಾಗೂ ಅಂಬರೀಷ್ ಅವರಿಗೆ ಮನವಿ ಮಾಡಿಕೊಂಡರೂ ಸಹಾಯ ನೀಡಿಲ್ಲ' ಎಂದು ಅಳಲು ತೋಡಿಕೊಂಡರು.

ಈವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟರಾದ ಶಿವರಾಜಕುಮಾರ್, ಉಪೇಂದ್ರ ಆರ್ಥಿಕ ಸಹಾಯ ಒದಗಿಸಿದ್ದಾರೆ' ಎಂದು ಸತ್ಯಜಿತ್‌ ಹೇಳಿದರು.

Actor Satyajit gets Artificial limb

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌