ಆ್ಯಪ್ನಗರ

ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲಿರುವ ಶಿವರಾಜ್‌ಕುಮಾರ್!

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹಾಗೂ ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಈ ಮೊದಲು ಲಂಡನ್‌ನಲ್ಲಿ ಟ್ರೀಟ್ಮೆಂಟ್ ಮಾಡಿದ್ದ ವೈದ್ಯರೇ ನಟ ಶಿವಣ್ಣ ಅವರನ್ನು ಟ್ರೀಟ್ ಮಾಡಲಿದ್ದಾರಂತೆ.

Vijaya Karnataka Web 13 Jun 2019, 2:38 pm
ಸ್ಯಾಂಡಲ್‌ವುಡ್ ನಟ, ಕರುನಾಡ ಚಕ್ರವರ್ತಿ ಬಿರುದಿನ ಶಿವರಾಜ್‌ಕುಮಾರ್ ಅವರು ಸದ್ಯದಲ್ಲೇ ತಮ್ಮ ಬಲಭುಜದ ನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲಿದೆ. ಮುಂದಿನ ತಿಂಗಳು, ಅಂದರೆ ಜುಲೈ 10 ರಂದು ನಟ ಶಿವರಾಜ್‌ಕುಮಾರ್ ಅವರು ಲಂಡನ್‌ಗೆ ತೆರಳಲಿದ್ದು ಅಲ್ಲಿ, ಭುಜದ ನೋವಿನ ಹಿನ್ನೆಲೆಯಲ್ಲಿ ಆಪರೇ‍ಷನ್‌ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಸಿನಿಮಾ ಸಾಹಸ ದೃಶ್ಯದ ಶೂಟಿಂಗ್‌ ವೇಳೆ ಅವರ ಬಲ ಭುಜಕ್ಕೆ ಗಾಯವಾಗಿದ್ದು, ಅವರು ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಕಷ್ಟಪಡುವಂತಾಗಿದೆ ಎನ್ನಬಹುದು.
Vijaya Karnataka Web shivarajkumar1306


ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹಾಗೂ ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಈ ಮೊದಲು ಲಂಡನ್‌ನಲ್ಲಿ ಟ್ರೀಟ್ಮೆಂಟ್ ಮಾಡಿದ್ದ ವೈದ್ಯರೇ ನಟ ಶಿವಣ್ಣ ಅವರನ್ನು ಟ್ರೀಟ್ ಮಾಡಲಿದ್ದಾರಂತೆ. ಜುಲೈ 10ರಂದು ಶಿವಣ್ಣ ಅವರು ಈ ಆಪರೇ‍ನ್‌ಗೆ ಒಳಗಾಗಲಿದ್ದು, ಆ ಬಳಿಕ ಅವರು 3 ತಿಂಗಳುಗಳ ಕಾಲ ಯಾವುದೇ ಚಿತ್ರದ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವಂತೆ. ಹೀಗಾಗಿ ತಮ್ಮ ಚಿತ್ರದ ಸಾಹಸ ದಶ್ಯಗಳೇನಿವೆಯೋ ಅವುಗಳನ್ನು ನಟ ಶಿವಣ್ಣ ಅವರು ಜುಲೈ 10ರೊಳಗೆ ಮುಗಿಸಿಕೊಡಲಿದ್ದಾರಂತೆ.

ನಟ ಶಿವಣ್ಣ ಅವರು ಸದ್ಯಕ್ಕೆ ಎ ಹರ್ಷ ನಿರ್ದೇಶನದ 'ಭಜರಂಗಿ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳನ್ನು ಅವರು ಜುಲೈ 10ರೊಳಗೆ ಮುಗಿಸಿಕೊಡಲಿದ್ದು ಆ ಬಳಿಕ ಅವರು ಆಪರೇಷನ್‌ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರು ಪಿ ವಾಸು ನಿರ್ದೇಶನದ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅಂದಹಾಗೆ, ಶಿವಣ್ಣ ನಟನೆಯ 'ಕವಚ' ಚಿತ್ರವು ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌