ಆ್ಯಪ್ನಗರ

ರಕ್ತದ ಪತ್ರ ಬರೆದವರಿಗೆ ಬುದ್ದಿ ಹೇಳಿದ ಸುದೀಪ್‌

ಇತ್ತೀಚೆಗೆ ಸೌಮ್ಯ ಎಂಬ ಅಭಿಮಾನಿ ರಕ್ತದಲ್ಲಿ ತನ್ನ ನೆಚ್ಚಿನ ನಟನಿಗೆ ಭಾವುಕತೆಯಿಂದ ಬರೆದಿದ್ದ ಪತ್ರವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಸುದೀಪ್‌ ಬೇಸರ ವ್ಯಕ್ತಪಡಿಸಿರುವುದರ ಜತೆಗೆ ಮುಂದೆ ಹೀಗೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

Vijaya Karnataka 1 Mar 2019, 8:07 am
ನಟ ಯಶ್‌ ಹುಟ್ಟಹಬ್ಬ ಆಚರಣೆ ಮಾಡಿಕೊಳ್ಳಲಿಲ್ಲ ಎಂಬ ಸಣ್ಣ ವಿಷಯಕ್ಕೇ ಬೇಸತ್ತ ಅಂಧಾಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇನ್ನೂ ಹಸಿರಾಗಿರುವಾಗಲೇ ಕಿಚ್ಚ ಸುದೀಪ್‌ ಅಭಿಮಾನಿಯೊಬ್ಬರು ರಕ್ತದಲ್ಲಿ ತಮ್ಮ ನೆಚ್ಚಿನ ನಟನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕಿಚ್ಚ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web Sudeep 1


ಇತ್ತೀಚೆಗೆ ಸೌಮ್ಯ ಎಂಬ ಅಭಿಮಾನಿ ರಕ್ತದಲ್ಲಿ ತನ್ನ ನೆಚ್ಚಿನ ನಟನಿಗೆ ಭಾವುಕತೆಯಿಂದ ಬರೆದಿದ್ದ ಪತ್ರವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಸುದೀಪ್‌ ಬೇಸರ ವ್ಯಕ್ತಪಡಿಸಿರುವುದರ ಜತೆಗೆ ಮುಂದೆ ಹೀಗೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

'ನಮಸ್ತೆ ಸುದೀಪಣ್ಣ ನನ್ನ ಹೆಸರು ಸೌಮ್ಯ. ನನಗೆ ತಂದೆ ಇಲ್ಲ, ತೀರಿಕೊಂಡಿದ್ದಾರೆ. ನಿಮ್ಮ ಭೇಟಿಗೆ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದರೆ ಸಾಧ್ಯವಾಗಲಿಲ್ಲ, ನಿರಾಸೆ ನೋವು ಜಾಸ್ತಿಯಾಗಿದೆ. ಅದಕ್ಕಾಗಿಯೇ ರಕ್ತದಲ್ಲಿ ಪತ್ರವನ್ನು ಬರೆದಿದ್ದೇನೆ. ಇದು ನನ್ನ ಕೊನೆಯ ಪ್ರಯತ್ನ. ಎರಡು ದಿನದೊಳಗೆ ಪ್ರತಿಕ್ರಿಯಿಸಿ' ಎಂದು ಸೌಮ್ಯ ಪತ್ರ ಬರೆದಿದ್ದರು.

ಅದಕ್ಕೆ ನಟ ಸುದೀಪ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ. 'ನನಗೆ ನೀವು ನನ್ನ ಅಭಿಮಾನಿಯಂದು ಖುಷಿಯಾಯಿತು. ಆದರೆ ಅದಕ್ಕಾಗಿ ರಕ್ತದಲ್ಲಿ ಪತ್ರಬರೆದಿರುವುದು ನನಗೆ ಬೇಸರ ತಂದಿದೆ. ಈ ಪತ್ರವನ್ನು ಬರೆದಿರುವುದರ ಹಿಂದಿನ ನೋವು ನನಗೆ ಅರ್ಥವಾಗಿದೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡುತ್ತೇನೆ. ಆದರೆ ಇನ್ನು ಮುಂದೆ ಬೇರೆ ಯಾರು ಈ ರೀತಿಯಾಗಿ ಹುಚ್ಚು ರೀತಿಯಾಗಿ ವರ್ತಿಸಬೇಡಿ' ಎಂದು ಬುದ್ಧಿಮಾತು ಹೇಳಿದ್ದಾರೆ.

ನಿಜವಾದ ಅಭಿಮಾನಿಯಾದರೆ ಈ ರೀತಿ ಮಾಡಬೇಡಿ ಎಂದು ಸಹ ಹೇಳಿದ್ದಾರೆ. ಒಟ್ಟಾರೆಯಾಗಿ ಸ್ಟಾರ್‌ ನಟ-ನಟಿಯರಿಗೆ ಅಂಧಾಭಿನಿಗಳು ನಿರಂತರವಾಗಿ ಹೆಚ್ಚುತ್ತಲೇ ಸಾಗುತ್ತಿದ್ದಾರೆ. ಅಭಿಮಾನ ಖುಷಿ ನೀಡಬೇಕೆ ಹೊರತು ಅತಿರೇಖಕ್ಕೆ ಒಳಗಾಗಿ ದುರಂತಕ್ಕೆ ದಾರಿ ಮಾಡಿಕೊಡಬಾರದು ಎಂಬುದು ಸ್ಯಾಂಡಲ್‌ವುಡ್‌ ಸ್ಟಾರ್‌ ನಟರ ಮಾತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌