ಆ್ಯಪ್ನಗರ

ಗಿಡ ನೆಡುವ ಮೂಲಕ ಬರ್ತ್‌ಡೇ ಆಚರಿಸಿಕೊಂಡ ಐಂದ್ರಿತಾ ರೇ

'ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ನಾನಾ ಯೋಜನೆಗಳ ಹೆಸರಿನಲ್ಲೂ ಮರಗಳನ್ನು ಕತ್ತರಿಸುತ್ತಿದ್ದಾರೆ. ಹಾಗಾಗಿ ತಾಪಮಾನ ಏರುತ್ತಲೇ ಇದೆ. ಮಕ್ಕಳು, ಇಳಿವಯಸ್ಸಿನವರ ಜತೆಗೆ ಯುವಕ ಯುವತಿಯರು ಕೂಡ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಹಾಗಾಗಿ ಹೆಚ್ಚೆಚ್ಚು ಮರ ಗಿಡಗಳನ್ನು ಬೆಳೆಸಿ, ತಾಪಮಾನ ತಗ್ಗಿಸಲು ನೆರವಾಗಿ' ಎಂದಿದ್ದಾರೆ ಐಂದ್ರಿತಾ.

Vijaya Karnataka 16 Apr 2019, 6:06 pm
ನಟಿ ಐಂದ್ರಿತಾ ರೇ ಈ ಬಾರಿ ವಿಭಿನ್ನವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಕಾಲೇಜ್‌ವೊಂದರ ಕ್ಯಾಂಪಸ್‌ನಲ್ಲಿ 40 ಸಸಿಗಳನ್ನು ನೆಡುವ ಮೂಲಕ ಅವರು ಸಂಭ್ರಮಿಸಿದ್ದಾರೆ.
Vijaya Karnataka Web aindrita-ray


ಮೊದಲಿನಿಂದಲೂ ಐಂದ್ರಿತಾ ರೇ ಮತ್ತು ದಿಗಂತ್‌ ದಂಪತಿಗೆ ಪರಿಸರ ಮೇಲೆ ಕಾಳಜಿ. ಅಲ್ಲದೇ, ಪ್ರಾಣಿಗಳ ಮೇಲೆಯೂ ಪ್ರೀತಿ. ಹಾಗಾಗಿ ತಮ್ಮ ಮುದ್ದಿನ ನಾಯಿ ಮರಿಯನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರೀತಿ ನಿವೇದನೆ ಮಾಡಿದ್ದರು ದಿಗಂತ್‌. ಅಲ್ಲದೇ, ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಹಾಕಿ, ಆಹಾರ ಕೊಡಿ ಎಂಬ ಅಭಿಯಾನ ಕೂಡ ಶುರು ಮಾಡಿದ್ದರು. ಈಗ ಹುಟ್ಟು ಹಬ್ಬಕ್ಕೆ 40 ಗಿಡಗಳನ್ನು ನೆಡುವ ಮೂಲಕ ಬರ್ತ್‌ಡೇ ದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ.

'ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆ ಆಗುತ್ತಿದೆ. ನಾನಾ ಯೋಜನೆಗಳ ಹೆಸರಿನಲ್ಲೂ ಮರಗಳನ್ನು ಕತ್ತರಿಸುತ್ತಿದ್ದಾರೆ. ಹಾಗಾಗಿ ತಾಪಮಾನ ಏರುತ್ತಲೇ ಇದೆ. ಮಕ್ಕಳು, ಇಳಿವಯಸ್ಸಿನವರ ಜತೆಗೆ ಯುವಕ ಯುವತಿಯರು ಕೂಡ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಹಾಗಾಗಿ ಹೆಚ್ಚೆಚ್ಚು ಮರ ಗಿಡಗಳನ್ನು ಬೆಳೆಸಿ, ತಾಪಮಾನ ತಗ್ಗಿಸಲು ನೆರವಾಗಿ' ಎಂದಿದ್ದಾರೆ ಐಂದ್ರಿತಾ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌