ಆ್ಯಪ್ನಗರ

ನಟಿ ಅಮೂಲ್ಯಾ ಮದುವೆಗೆ ತಿಂಗಳ ಸಂಭ್ರಮ!

ಈ ಫೋಟೋ ನೋಡುತ್ತಿದ್ದರೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ 'ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ? ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ...' ಕವನ ನೆನಪಾಗುತ್ತದೆ.

ವಿಕ ಸುದ್ದಿಲೋಕ 13 Jun 2017, 4:21 pm
ಈ ಫೋಟೋ ನೋಡುತ್ತಿದ್ದರೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ 'ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ? ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ...' ಕವನ ನೆನಪಾಗುತ್ತದೆ. ನಟಿ ಅಮೂಲ್ಯಾ ಮತ್ತು ಜಗದೀಶ್ ತಾರಾ ಜೋಡಿಗೂ ಅಷ್ಟೇ ಮದುವೆಯಾಗಿ ತಿಂಗಳಾಗುತ್ತಿದೆ. ಈ ಸಂಭ್ರಮವನ್ನು ಅವರು ಗಿಡ ನೆಡುವ ಮೂಲಕ ಸಿಂಪಲ್ ಆಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ.
Vijaya Karnataka Web actress amulya celebrats the first month wedding anniversary
ನಟಿ ಅಮೂಲ್ಯಾ ಮದುವೆಗೆ ತಿಂಗಳ ಸಂಭ್ರಮ!


ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಎಲ್ಲೋ ವಿದೇಶದಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಅಮೂಲ್ಯಾ ಮತ್ತು ಜಗದೀಶ್ ಮಾತ್ರ ತುಂಬ ಸರಳವಾಗಿ ಗಿಡವೊಂದನ್ನು ನೆಡುವ ಮೂಲಕ ತಮ್ಮ ತಿಂಗಳ ಮದುವೆ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.

ಸ್ಯಾಂಡಲ್‍ವುಡ್‌ಗೆ ಬಾಲ ಕಲಾವಿದೆಯಾಗಿ ಅಡಿಯಿಟ್ಟ ಅಮೂಲ್ಯಾ ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಬಳಿಕ ಬಿಬಿಎಂಪಿ ಕಾರ್ಪೊರೇಟರ್ ಜಿ.ಎಚ್.ರಾಮಚಂದ್ರ ಅವರ ಪುತ್ರ ಜಗದೀಶ್ ಚಂದ್ರ ಅವರನ್ನು ವರಿಸಿದ ಬಳಿಕ ಸದ್ಯಕ್ಕೆ ಸಿನಿಮಾಗಳಿಂದ ಸ್ವಲ್ಪ ಬಿಡುವು ತೆಗೆದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಬಣ್ಣ ಹಚ್ಚಲಿ ಎಂಬುದು ಅಮೂಲ್ಯಾ ಅಭಿಮಾನಿಗಳ ಬಯಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌