ಆ್ಯಪ್ನಗರ

ಅಭಿಮಾನಿಗಳಿಗೆ ಮುಖ್ಯ ಸಂದೇಶ ರವಾನಿಸಿದ ನಟಿ ಅಮೂಲ್ಯಾ

ನಟಿ ಅಮೂಲ್ಯಾ ಮದುವೆ ಬಳಿಕ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಇದೇ ಸೆಪ್ಟೆಂಬರ್ 14ಕ್ಕೆ 25ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳಿ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ.

Vijaya Karnataka Web 13 Sep 2019, 8:09 pm

ಅಭಿಮಾನಿಗಳ ಮನಸ್ಸಿನಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ ನಟಿ ಅಮೂಲ್ಯಾ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳು ಮಾತ್ರ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡುತ್ತಲೇ ಇರುತ್ತಾರೆ. 2017ರಲ್ಲಿ ತೆರೆಕಂಡ 'ಮುಗುಳು ನಗೆ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಕೊಂಡಿದ್ದೆ ಕೊನೆ.
Vijaya Karnataka Web amulya


ಅದೇ ವರ್ಷ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಬಳಿಕ ಬಣ್ಣ ಹಚ್ಚಲೇ ಇಲ್ಲ. ಇದೇ ಸೆಪ್ಟೆಂಬರ್ 14ಕ್ಕೆ ಅಮೂಲ್ಯಾ 25ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಶುಭಾಶಯ ಕೋರುವುದು, ಅವರ ಮನೆಯ ಬಳಿ ಸಂಭ್ರಮ ಆಚರಿಸುವುದು ಇದ್ದೇ ಇದೆ. ಮರೆಯಲಾಗದ ನೆನಪನ್ನು ಹಂಚಿಕೊಂಡ 'ಚೆಲುವಿನ ಚಿತ್ತಾರ' ಅಮೂಲ್ಯಾ


ಈ ಹಿನ್ನೆಲೆಯಲ್ಲಿ ಅಮೂಲ್ಯಾ ತಮ್ಮ ಅಭಿಮಾನಿಗಳಿಗೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. "ನನ್ನ ಪ್ರೀತಿಯ ಅಭಿಮಾನಿಗಳೇ,ನಿಮ್ಮಲ್ಲೊಂದು ಮನವಿ. ನಿಮಗೆಲ್ಲಾ ತಿಳಿದಿರುವ ಹಾಗೆ ನಾಳೆ ನನ್ನ ಜನ್ಮದಿನ. ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ, ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ, ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ. ಆದರೆ ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ." ಎಂದಿದ್ದಾರೆ. ಅಮೂಲ್ಯ ಕಿಸ್ಸಿಂಗ್ ಪೋಸ್‍ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್

ಇದಕ್ಕೆ ಅಭಿಮಾನಿಗಳು ಬೇಸರಿಸಿಕೊಳ್ಳದೆ ಅಡ್ವಾನ್ಸ್‌ಡ್ ಹ್ಯಾಪಿ ಬರ್ತ್ ಡೇ ಮೇಡಂ ಎಂದು ವಿಶ್ ಮಾಡಿದ್ದಾರೆ. ಒಬ್ಬ ಅಭಿಮಾನಿಯಂತೂ ಈ ರೀತಿ ಕಾಮೆಂಟ್ ಮಾಡಿದ್ದಾರೆ, "ಅಡ್ವಾನ್ಸ್ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಸಿಹಿಯಾದ ಹೃದಯ ಅಮೂಲ್ಯ ಮೇಡಮ್ ಎಲ್ಲೋ ಒಂದು ಕಡೆ ಬೇಜಾರ್ ಆಯುತು. ಆದರೇ ನೆಕ್ಸ್ಟ್ ವರುಷ ಎರೆಡು ವರುಷ ಸೇರಿಸಿ ಗ್ರ್ಯಾಂಡ್ ಹಾಗಿ ಹುಟ್ಟುಹಬ್ಬ ಆಚರಣೆ ಮಾಡೋಣ. ನಿಮ್ಮ ಅಭಿಮಾನಿಯಾಗಿದಕ್ಕೆ ತುಂಬಾ ಹೆಮ್ಮೆ ಇದೆ. ನೀವು ಏನು ಅಂತ ನಿಮ್ಮ ಅಭಿಮಾನಿಗೆ ಚೆನ್ನಾಗಿ ಗೊತ್ತು" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌