ದಕ್ಷಿಣದ ತಾರೆ ಖುಷ್ಬೂ ಕಾಂಗ್ರೆಸ್ ಪಕ್ಷದ ಪರವಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಗೊತ್ತೇ ಇದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಖುಷ್ಬೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸ್ವತಃ ಖುಷ್ಬೂ ಟ್ವೀಟ್ ಮಾಡಿದ್ದಾರೆ.
ಚುನಾವಣೆ ಫಲಿತಾಂಶಕ್ಕಾಗಿ ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ನನ್ನ ಪರಿಸ್ಥಿತಿ ಈ ರೀತಿ ಆಗಿದೆ. ಆಸ್ಪತ್ರೆ ಪಾಲಾಗಿದ್ದೇನೆ ಎಂದಿದ್ದಾರೆ. "ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನಾನು ಟಿವಿಗಳಲ್ಲಿ ಕಾಣಿಸಲ್ಲ. ಯಾಕೆಂದರೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಳೆ ನಡೆಯಲಿರುವ ಡ್ರಾಮಾ ಮಿಸ್ ಆಗುತ್ತಿದ್ದೇನೆ. ನಾವು ಏನಾದರೂ ಪ್ಲಾನ್ ಮಾಡಿಕೊಂಡರೆ ಪ್ರಕೃತಿ ಮತ್ತೊಂದು ಎಣಿಸುತ್ತದೆ. ತುಂಬಾ ನಿರಾಸೆಗೆ ಒಳಗಾಗಿದ್ದೇನೆ" ಎಂದಿದ್ದಾರೆ.
ಖುಷ್ಬೂ ಅವರ ಟ್ವೀಟ್ಗೆ ಹಲವಾರು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಹದ್ ಪರ ಪ್ರಚಾರಕ್ಕೆ ಬಂದಿದ್ದಾಗ ನಟಿ ಖುಷ್ಬೂ ಜತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿತ್ತು.
ಬೆಂಗಳೂರಿನ ಹೊಯ್ಸಳ ನಗರಕ್ಕೆ ಬರುತ್ತಿದ್ದಂತೆ ಯುವಕನೊಬ್ಬ ಖುಷ್ಬೂ ಅವರ ಸೊಂಟ ಮುಟ್ಟಿದಾಗ ರೊಚ್ಚಿಗೆದ್ದ ನಟಿ ಹಿಂದಿರುಗಿ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು.
ಚುನಾವಣೆ ಫಲಿತಾಂಶಕ್ಕಾಗಿ ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಂದರ್ಭದಲ್ಲಿ ನನ್ನ ಪರಿಸ್ಥಿತಿ ಈ ರೀತಿ ಆಗಿದೆ. ಆಸ್ಪತ್ರೆ ಪಾಲಾಗಿದ್ದೇನೆ ಎಂದಿದ್ದಾರೆ. "ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ನಾನು ಟಿವಿಗಳಲ್ಲಿ ಕಾಣಿಸಲ್ಲ. ಯಾಕೆಂದರೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಳೆ ನಡೆಯಲಿರುವ ಡ್ರಾಮಾ ಮಿಸ್ ಆಗುತ್ತಿದ್ದೇನೆ. ನಾವು ಏನಾದರೂ ಪ್ಲಾನ್ ಮಾಡಿಕೊಂಡರೆ ಪ್ರಕೃತಿ ಮತ್ತೊಂದು ಎಣಿಸುತ್ತದೆ. ತುಂಬಾ ನಿರಾಸೆಗೆ ಒಳಗಾಗಿದ್ದೇನೆ" ಎಂದಿದ್ದಾರೆ.
ಖುಷ್ಬೂ ಅವರ ಟ್ವೀಟ್ಗೆ ಹಲವಾರು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದು ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಇತ್ತೀಚೆಗೆ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಹದ್ ಪರ ಪ್ರಚಾರಕ್ಕೆ ಬಂದಿದ್ದಾಗ ನಟಿ ಖುಷ್ಬೂ ಜತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿತ್ತು.
ಬೆಂಗಳೂರಿನ ಹೊಯ್ಸಳ ನಗರಕ್ಕೆ ಬರುತ್ತಿದ್ದಂತೆ ಯುವಕನೊಬ್ಬ ಖುಷ್ಬೂ ಅವರ ಸೊಂಟ ಮುಟ್ಟಿದಾಗ ರೊಚ್ಚಿಗೆದ್ದ ನಟಿ ಹಿಂದಿರುಗಿ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು.