ಆ್ಯಪ್ನಗರ

#MenToo ಅಭಿಯಾನ ಆರಂಭಿಸುವ ಕಾಲ ಬಂದಿದೆ: ನಟಿ ಪೂಜಾ ಬೇಡಿ

ಮಹಿಳೆಯರ ಮೇಲೆ ಅತ್ಯಾಚಾರ, ಸುಲಿಗೆಯನ್ನು ತಡೆಯಲು ಜಾರಿಗೆ ತಂದ ಕಾನೂನುಗಳನ್ನು ಕೆಲವು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ವೈಯಕ್ತಿಕ ದ್ವೇಷ, ಪ್ರತೀಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ಗೆಳೆಯ ಒಬೆರಾಯ್ ಜತೆಗೆ ಬಾಳಿಕ ಓರ್ವ ಮಹಿಳೆ ಈಗ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಆತನ ಕರಿಯರ್ ಹಾಳಾಗಿದೆ. ಆತನ ಕುಟುಂಬ ತುಂಬಾ ಆತಂಕಕ್ಕೊಳಗಾಗಿದೆ.

TIMESOFINDIA.COM 8 May 2019, 5:53 pm
ಅತ್ಯಾಚಾರ, ಸುಲಿಗೆ ಆರೋಪದಡಿ ಕಳೆದ ಭಾನುವಾರ ಬಂಧನಕ್ಕೊಳಗಾದ ಕಿರುತೆರೆ ನಟ ಕರಣ್ ಒಬೆರಾಯ್‍ ಬೆಂಬಲಕ್ಕೆ ಬಾಲಿವುಡ್‌ನ ಹಿರಿಯ ನಟಿ, ಅಂಕಣಕಾರ್ತಿ ಪೂಜಾ ಬೇಡಿ ನಿಂತಿದ್ದಾರೆ. ಕೆಲವು ವರ್ಷಗಳಿಂದ ಒಬೆರಾಯ್ ಜತೆಗೆ ಸಹ ಜೀವನ ನಡೆಸಿದ ಮಹಿಳೆ ಇತ್ತೀಚೆಗೆ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ್ದಾರೆ.
Vijaya Karnataka Web pooja-bedi


ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಒಬೆರಾಯ್‌‌ರನ್ನು ಬಂಧಿಸಿದ್ದರು. ಈ ಬಗ್ಗೆ ಪೂಜಾ ಬೇಡಿ ಪ್ರತಿಕ್ರಿಯಿಸಿದ್ದು, ಒಬೆರಾಯ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ ಕಾನೂನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದಿದ್ದಾರೆ.

"ನಾನು ಮಹಿಳೆಯರ ಹಕ್ಕುಗಳ ವಿರೋಧಿ ಅಲ್ಲ. ನಮ್ಮ ಇಡೀ ಕುಟುಂಬ ಮಹಿಳೆಯರ ಹಕ್ಕುಗಳಿಗೆ ತುಂಬಾ ಗೌರವ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಮಹಿಳೆಯರು ಸಬಲರಾಗಿ, ದೃಢವಾಗಿ ಇರಬೇಕೆಂದು, ಮಹಿಳಾ ಹಕ್ಕುಗಳ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಆದರೆ ಇಂದಿನಿಂದ ನಾನು ಪುರುಷರ ಹಕ್ಕುಗಳು, ಮೆನ್ ಟೂ ಅಭಿಯಾನಕ್ಕೂ ಬೆಂಬಲ ಸೂಚಿಸುತ್ತಿದ್ದೇನೆ" ಎಂದಿದ್ದಾರೆ.

ಮಹಿಳೆಯರ ಮೇಲೆ ಅತ್ಯಾಚಾರ, ಸುಲಿಗೆಯನ್ನು ತಡೆಯಲು ಜಾರಿಗೆ ತಂದ ಕಾನೂನುಗಳನ್ನು ಕೆಲವು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ವೈಯಕ್ತಿಕ ದ್ವೇಷ, ಪ್ರತೀಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ಗೆಳೆಯ ಒಬೆರಾಯ್ ಜತೆಗೆ ಬಾಳಿಕ ಓರ್ವ ಮಹಿಳೆ ಈಗ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಆತನ ಕರಿಯರ್ ಹಾಳಾಗಿದೆ. ಆತನ ಕುಟುಂಬ ತುಂಬಾ ಆತಂಕಕ್ಕೊಳಗಾಗಿದೆ.

ಸಮಾಜದಲ್ಲಿ ಗೌರವ, ಮರ್ಯಾದೆಗಳು ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಇರುತ್ತವೆ. ಮಹಿಳೆಯರಿಂದಲೂ ಕೆಲವು ಪುರುಷರು ಕಿರುಕುಳ ಅನುಭವಿಸುತ್ತಿದ್ದಾರೆ. #MenToo ಅಭಿಯಾನ ಆರಂಭವಾಗಲು ಸಮಯ ಸನ್ನದ್ಧವಾಗಿದೆ ಎಂದಿದ್ದಾರೆ ಪೂಜಾ ಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌